Home / ಕವನ / ಕವಿತೆ / ಯಾತ್ರೆಯ ನಡುವೆ

ಯಾತ್ರೆಯ ನಡುವೆ

ಮರೆಯಲ್ಲಿ ನಿಂತು
ಮಣಿದಿಗಂತಗಳನ್ನು ಬರೆಯುವ
ಸತ್ಯದ ತರಣಿಯೇ,
ನನ್ನ ಹರಣದ ನಿಜಗೆಳೆಯ ಇನ್ನಾರು ? ನೀನೇ.
ಈ ಮೊಗ್ಗು ಅರಳಿದ್ದು,
ಹಂಬಲಕ್ಕೆ ಹೊರಳಿದ್ದು,
ಮೆಚ್ಚಿದ ದುಂಬಿಯ ಹುಚ್ಚಿಗೆ
ಕಾಯಿಬಿಟ್ಟು ಫಲಿಸಿದ್ದು
ನಿನ್ನರಸಿ ಅಭಿನಯಿಸಿದ ಮಧುನೃತ್ಯದ ಒಂದೊಂದು ಹೆಜ್ಜೆ
ಏನೇನನ್ನೋ ಒಲಿದು
ನಿನ್ನನ್ನಷ್ಟೇ ಮರೆತದ್ದೂ
ಕಸಕಡ್ಡಿಗಳನ್ನೆಲ್ಲ ನುಡಿದು
ಪತಿಯ ಹೆಸರನ್ನೆ ಹೇಳಲು ಒಲ್ಲದ
ಸತಿಯ ಲಜ್ಜೆ

ನೋಡು
ನಿನ್ನ ನೆನಪಾದೊಡನೆ ಇಲ್ಲಿ
ಹೊನ್ನ ಬೆಳಕು ಹುಟ್ಟಿದೆ,
ಮಣ್ಣಿನ ಮರೆಯಲ್ಲಿ ಸಣ್ಣಗೆ
ಮಲ್ಲಿಗೆ ಪರಿಮಳ ಎದ್ದಿದೆ,
ಅಲೆಗಳ ಕಿರಿಕಿರಿ ಹರಿದು
ಕೆಳಕಡಲಿನ ಅಖಂಡತೆ ತೆರೆದಿದೆ;
ಜಾತ್ರೆಗೆ ಹೊರಟ ಜೀವಕ್ಕೆ ಉಳಿದ
ಯಾತ್ರೆಯ ನೆನಪಾಗಿ,
(ಬದಲಾಗದ ಹೊನ್ನು ಹೆಣ್ಣು ಮಣ್ಣು)
ನಿನ್ನೊಂದಿಗೆ
ಪಡಲಾಗದ ಸುಖದ ಹಂಬಲದಲ್ಲಿ
ಸುಡುತ್ತಿವೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...