ಯಾತ್ರೆಯ ನಡುವೆ

ಮರೆಯಲ್ಲಿ ನಿಂತು
ಮಣಿದಿಗಂತಗಳನ್ನು ಬರೆಯುವ
ಸತ್ಯದ ತರಣಿಯೇ,
ನನ್ನ ಹರಣದ ನಿಜಗೆಳೆಯ ಇನ್ನಾರು ? ನೀನೇ.
ಈ ಮೊಗ್ಗು ಅರಳಿದ್ದು,
ಹಂಬಲಕ್ಕೆ ಹೊರಳಿದ್ದು,
ಮೆಚ್ಚಿದ ದುಂಬಿಯ ಹುಚ್ಚಿಗೆ
ಕಾಯಿಬಿಟ್ಟು ಫಲಿಸಿದ್ದು
ನಿನ್ನರಸಿ ಅಭಿನಯಿಸಿದ ಮಧುನೃತ್ಯದ ಒಂದೊಂದು ಹೆಜ್ಜೆ
ಏನೇನನ್ನೋ ಒಲಿದು
ನಿನ್ನನ್ನಷ್ಟೇ ಮರೆತದ್ದೂ
ಕಸಕಡ್ಡಿಗಳನ್ನೆಲ್ಲ ನುಡಿದು
ಪತಿಯ ಹೆಸರನ್ನೆ ಹೇಳಲು ಒಲ್ಲದ
ಸತಿಯ ಲಜ್ಜೆ

ನೋಡು
ನಿನ್ನ ನೆನಪಾದೊಡನೆ ಇಲ್ಲಿ
ಹೊನ್ನ ಬೆಳಕು ಹುಟ್ಟಿದೆ,
ಮಣ್ಣಿನ ಮರೆಯಲ್ಲಿ ಸಣ್ಣಗೆ
ಮಲ್ಲಿಗೆ ಪರಿಮಳ ಎದ್ದಿದೆ,
ಅಲೆಗಳ ಕಿರಿಕಿರಿ ಹರಿದು
ಕೆಳಕಡಲಿನ ಅಖಂಡತೆ ತೆರೆದಿದೆ;
ಜಾತ್ರೆಗೆ ಹೊರಟ ಜೀವಕ್ಕೆ ಉಳಿದ
ಯಾತ್ರೆಯ ನೆನಪಾಗಿ,
(ಬದಲಾಗದ ಹೊನ್ನು ಹೆಣ್ಣು ಮಣ್ಣು)
ನಿನ್ನೊಂದಿಗೆ
ಪಡಲಾಗದ ಸುಖದ ಹಂಬಲದಲ್ಲಿ
ಸುಡುತ್ತಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೨೦
Next post ಯೋಗ್ಯ ಪರಿಶೀಲನೆ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys