Home / ಕವನ / ಕವಿತೆ / ಚೈತನ್ಯ ಸೆಲೆ ಶಿಷ್ಯ

ಚೈತನ್ಯ ಸೆಲೆ ಶಿಷ್ಯ

ಹೊಸ ಜಗತನ್ನು ಸೃಷ್ಟಿಸುವ ಶಿಲ್ಪಿಯಾಗಿದಿ
ವಿದ್ಯೆ ಎಂಬ ಅವಿನಾಶಿ ಅಮೃತ ಪಡಕೊಂಡಿದಿ
ಖಡ್ಗಕ್ಕಿಂತ ಮಿಗಿಲಾದ ಅಸ್ತ್ರ ಹಿಡಕೊಂಡಿದಿ
ಗಜಮುಖನಂತೆ ವಿದ್ಯೆಯ ಸಾಗರನಾದಿ.

ಅಜ್ಞಾನವೆಂಬ ಕತ್ತಲೆಯ ಕಳಕೊಂಡಿದಿ
ಸುಜ್ಞಾನವೆಂಬ ಬೆಳಕು ನೀ ಪಡಕೊಂಡಿದಿ
ಭಾವಿ ಜೀವನದ ಅಮರ ಜ್ಯೋತಿಯಾಗಿದಿ
ಅವಗುಣಗಳೆಂಬ ಬೇರು ಅಳಿಸಿಕೊಂಡಿದಿ.

ಗುರುವಿನ ಕಷ್ಟವನು ನೋಡಿ ಮರುಗಿದಿ
ಕಷ್ಟದಲ್ಲಿ ಗುರುವಿಗೆ ಸಹಾಯಕನಂತೆ ಎದೆತಟ್ಟಿ ನಿಂತಿದಿ
ಗುರಿ ಮುಟ್ಟಿಸುವುದಕ್ಕೆ ಸತತ ಸಹಾಯ ಮಾಡಿದಿ
ಗುರುವಿನ ಜಯ (ಮೋಕ್ಷ) ಕಂಡು ಸಂತಸ ಪಟ್ಟಿದಿ.

ಪರರ ಸುಖವನ್ನು ಕಂಡು ಹರ್ಷಿತನಾಗಿದಿ
ಪರರ ಕಷ್ಟದಲ್ಲಿ ಸಹಭಾಗಿಯಾಗಲು ಧೈರ್ಯದಿಂದ ನಿಂತಿದಿ
ನೀತಿ ಮಾರ್ಗದಿ ಕೀರ್ತಿಗಳಿಸಬೇಕೆಂದು ಬಯಸಿದಿ
ಸುವಿಚಾರ ಕಲಿತು ಸುಹೃದಯಿ ಆಗಿದಿ.

ಒರಟು ಕಲ್ಲನ್ನು ಕೆತ್ತಿಕೊಂಡು ಸುಂದರ ಮೂರ್ತಿಯಾದಿ
ಝಕಣಚಾರಿಯಂತೆ ಹಗಲಿರುಳು ನಿದ್ರೆಗೆಟ್ಟು ಬಳಲಿದಿ
ಗುರುವಿನ ಮನಶಾಂತಿಗೆ ಎಲ್ಲವೂ ತಿಳಕೊಂಡಿದಿ
ಯಾರು ಕದಿಯಲಾರದಂಥ ಐಶ್ವರ್ಯ ಗಳಿಸಿದಿ.

ಜಾತಿ ಮತ ಪಂಥಗಳ ಭೇದವ ಆರಿಸಿದಿ
ನಾವೆಲ್ಲರೂ ಒಂದೇ ತಾಯಿ ಮಕ್ಕಳೆಂದು ತಿಳಕೊಂಡಿದಿ
ಪ್ರಾಮಾಣಿಕತೆಗಾಗಿ ಪ್ರಾಣ ಅರ್ಪಿಸಲು ನಿಂತಿದಿ
ಅಂಧಕಾರದ ವಿರುದ್ಧ ಭಂಡೇಳಲು ಸಿದ್ಧನಾದಿ.

ಎಲೆ ಕಾಂಡದಲ್ಲಿ ಅಡಗಿದ ಹೂವಿನಂತಿರದೆ
ಎಲ್ಲರ ದೃಷ್ಟಿಗೆ ಕಾಣುವ ಕುಸುಮದಂತಾದಿ
ಗುರುವಿಗಾಗಿ ತನುಮನ ಧನವು ನೀಡಿದಿ
ಜಗವಿರುವವರೆಗೆ ಜಗಭರಿತ ಶಿಷ್ಯನಾದಿ.
*****
೦೬/೧೧/೧೯೯೭

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ