ಚೈತನ್ಯ ಸೆಲೆ ಶಿಷ್ಯ

ಹೊಸ ಜಗತನ್ನು ಸೃಷ್ಟಿಸುವ ಶಿಲ್ಪಿಯಾಗಿದಿ
ವಿದ್ಯೆ ಎಂಬ ಅವಿನಾಶಿ ಅಮೃತ ಪಡಕೊಂಡಿದಿ
ಖಡ್ಗಕ್ಕಿಂತ ಮಿಗಿಲಾದ ಅಸ್ತ್ರ ಹಿಡಕೊಂಡಿದಿ
ಗಜಮುಖನಂತೆ ವಿದ್ಯೆಯ ಸಾಗರನಾದಿ.

ಅಜ್ಞಾನವೆಂಬ ಕತ್ತಲೆಯ ಕಳಕೊಂಡಿದಿ
ಸುಜ್ಞಾನವೆಂಬ ಬೆಳಕು ನೀ ಪಡಕೊಂಡಿದಿ
ಭಾವಿ ಜೀವನದ ಅಮರ ಜ್ಯೋತಿಯಾಗಿದಿ
ಅವಗುಣಗಳೆಂಬ ಬೇರು ಅಳಿಸಿಕೊಂಡಿದಿ.

ಗುರುವಿನ ಕಷ್ಟವನು ನೋಡಿ ಮರುಗಿದಿ
ಕಷ್ಟದಲ್ಲಿ ಗುರುವಿಗೆ ಸಹಾಯಕನಂತೆ ಎದೆತಟ್ಟಿ ನಿಂತಿದಿ
ಗುರಿ ಮುಟ್ಟಿಸುವುದಕ್ಕೆ ಸತತ ಸಹಾಯ ಮಾಡಿದಿ
ಗುರುವಿನ ಜಯ (ಮೋಕ್ಷ) ಕಂಡು ಸಂತಸ ಪಟ್ಟಿದಿ.

ಪರರ ಸುಖವನ್ನು ಕಂಡು ಹರ್ಷಿತನಾಗಿದಿ
ಪರರ ಕಷ್ಟದಲ್ಲಿ ಸಹಭಾಗಿಯಾಗಲು ಧೈರ್ಯದಿಂದ ನಿಂತಿದಿ
ನೀತಿ ಮಾರ್ಗದಿ ಕೀರ್ತಿಗಳಿಸಬೇಕೆಂದು ಬಯಸಿದಿ
ಸುವಿಚಾರ ಕಲಿತು ಸುಹೃದಯಿ ಆಗಿದಿ.

ಒರಟು ಕಲ್ಲನ್ನು ಕೆತ್ತಿಕೊಂಡು ಸುಂದರ ಮೂರ್ತಿಯಾದಿ
ಝಕಣಚಾರಿಯಂತೆ ಹಗಲಿರುಳು ನಿದ್ರೆಗೆಟ್ಟು ಬಳಲಿದಿ
ಗುರುವಿನ ಮನಶಾಂತಿಗೆ ಎಲ್ಲವೂ ತಿಳಕೊಂಡಿದಿ
ಯಾರು ಕದಿಯಲಾರದಂಥ ಐಶ್ವರ್ಯ ಗಳಿಸಿದಿ.

ಜಾತಿ ಮತ ಪಂಥಗಳ ಭೇದವ ಆರಿಸಿದಿ
ನಾವೆಲ್ಲರೂ ಒಂದೇ ತಾಯಿ ಮಕ್ಕಳೆಂದು ತಿಳಕೊಂಡಿದಿ
ಪ್ರಾಮಾಣಿಕತೆಗಾಗಿ ಪ್ರಾಣ ಅರ್ಪಿಸಲು ನಿಂತಿದಿ
ಅಂಧಕಾರದ ವಿರುದ್ಧ ಭಂಡೇಳಲು ಸಿದ್ಧನಾದಿ.

ಎಲೆ ಕಾಂಡದಲ್ಲಿ ಅಡಗಿದ ಹೂವಿನಂತಿರದೆ
ಎಲ್ಲರ ದೃಷ್ಟಿಗೆ ಕಾಣುವ ಕುಸುಮದಂತಾದಿ
ಗುರುವಿಗಾಗಿ ತನುಮನ ಧನವು ನೀಡಿದಿ
ಜಗವಿರುವವರೆಗೆ ಜಗಭರಿತ ಶಿಷ್ಯನಾದಿ.
*****
೦೬/೧೧/೧೯೯೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾಪ್ರಸ್ಥಾನ
Next post ಬೂಬೂನ ಬಾಳು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys