Home / ಕವನ / ಕವಿತೆ / ಚೈತನ್ಯ ಸೆಲೆ ಶಿಷ್ಯ

ಚೈತನ್ಯ ಸೆಲೆ ಶಿಷ್ಯ

ಹೊಸ ಜಗತನ್ನು ಸೃಷ್ಟಿಸುವ ಶಿಲ್ಪಿಯಾಗಿದಿ
ವಿದ್ಯೆ ಎಂಬ ಅವಿನಾಶಿ ಅಮೃತ ಪಡಕೊಂಡಿದಿ
ಖಡ್ಗಕ್ಕಿಂತ ಮಿಗಿಲಾದ ಅಸ್ತ್ರ ಹಿಡಕೊಂಡಿದಿ
ಗಜಮುಖನಂತೆ ವಿದ್ಯೆಯ ಸಾಗರನಾದಿ.

ಅಜ್ಞಾನವೆಂಬ ಕತ್ತಲೆಯ ಕಳಕೊಂಡಿದಿ
ಸುಜ್ಞಾನವೆಂಬ ಬೆಳಕು ನೀ ಪಡಕೊಂಡಿದಿ
ಭಾವಿ ಜೀವನದ ಅಮರ ಜ್ಯೋತಿಯಾಗಿದಿ
ಅವಗುಣಗಳೆಂಬ ಬೇರು ಅಳಿಸಿಕೊಂಡಿದಿ.

ಗುರುವಿನ ಕಷ್ಟವನು ನೋಡಿ ಮರುಗಿದಿ
ಕಷ್ಟದಲ್ಲಿ ಗುರುವಿಗೆ ಸಹಾಯಕನಂತೆ ಎದೆತಟ್ಟಿ ನಿಂತಿದಿ
ಗುರಿ ಮುಟ್ಟಿಸುವುದಕ್ಕೆ ಸತತ ಸಹಾಯ ಮಾಡಿದಿ
ಗುರುವಿನ ಜಯ (ಮೋಕ್ಷ) ಕಂಡು ಸಂತಸ ಪಟ್ಟಿದಿ.

ಪರರ ಸುಖವನ್ನು ಕಂಡು ಹರ್ಷಿತನಾಗಿದಿ
ಪರರ ಕಷ್ಟದಲ್ಲಿ ಸಹಭಾಗಿಯಾಗಲು ಧೈರ್ಯದಿಂದ ನಿಂತಿದಿ
ನೀತಿ ಮಾರ್ಗದಿ ಕೀರ್ತಿಗಳಿಸಬೇಕೆಂದು ಬಯಸಿದಿ
ಸುವಿಚಾರ ಕಲಿತು ಸುಹೃದಯಿ ಆಗಿದಿ.

ಒರಟು ಕಲ್ಲನ್ನು ಕೆತ್ತಿಕೊಂಡು ಸುಂದರ ಮೂರ್ತಿಯಾದಿ
ಝಕಣಚಾರಿಯಂತೆ ಹಗಲಿರುಳು ನಿದ್ರೆಗೆಟ್ಟು ಬಳಲಿದಿ
ಗುರುವಿನ ಮನಶಾಂತಿಗೆ ಎಲ್ಲವೂ ತಿಳಕೊಂಡಿದಿ
ಯಾರು ಕದಿಯಲಾರದಂಥ ಐಶ್ವರ್ಯ ಗಳಿಸಿದಿ.

ಜಾತಿ ಮತ ಪಂಥಗಳ ಭೇದವ ಆರಿಸಿದಿ
ನಾವೆಲ್ಲರೂ ಒಂದೇ ತಾಯಿ ಮಕ್ಕಳೆಂದು ತಿಳಕೊಂಡಿದಿ
ಪ್ರಾಮಾಣಿಕತೆಗಾಗಿ ಪ್ರಾಣ ಅರ್ಪಿಸಲು ನಿಂತಿದಿ
ಅಂಧಕಾರದ ವಿರುದ್ಧ ಭಂಡೇಳಲು ಸಿದ್ಧನಾದಿ.

ಎಲೆ ಕಾಂಡದಲ್ಲಿ ಅಡಗಿದ ಹೂವಿನಂತಿರದೆ
ಎಲ್ಲರ ದೃಷ್ಟಿಗೆ ಕಾಣುವ ಕುಸುಮದಂತಾದಿ
ಗುರುವಿಗಾಗಿ ತನುಮನ ಧನವು ನೀಡಿದಿ
ಜಗವಿರುವವರೆಗೆ ಜಗಭರಿತ ಶಿಷ್ಯನಾದಿ.
*****
೦೬/೧೧/೧೯೯೭

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...