Home / ಕವನ / ಕವಿತೆ / ಚೈತನ್ಯ ಸೆಲೆ ಶಿಷ್ಯ

ಚೈತನ್ಯ ಸೆಲೆ ಶಿಷ್ಯ

ಹೊಸ ಜಗತನ್ನು ಸೃಷ್ಟಿಸುವ ಶಿಲ್ಪಿಯಾಗಿದಿ
ವಿದ್ಯೆ ಎಂಬ ಅವಿನಾಶಿ ಅಮೃತ ಪಡಕೊಂಡಿದಿ
ಖಡ್ಗಕ್ಕಿಂತ ಮಿಗಿಲಾದ ಅಸ್ತ್ರ ಹಿಡಕೊಂಡಿದಿ
ಗಜಮುಖನಂತೆ ವಿದ್ಯೆಯ ಸಾಗರನಾದಿ.

ಅಜ್ಞಾನವೆಂಬ ಕತ್ತಲೆಯ ಕಳಕೊಂಡಿದಿ
ಸುಜ್ಞಾನವೆಂಬ ಬೆಳಕು ನೀ ಪಡಕೊಂಡಿದಿ
ಭಾವಿ ಜೀವನದ ಅಮರ ಜ್ಯೋತಿಯಾಗಿದಿ
ಅವಗುಣಗಳೆಂಬ ಬೇರು ಅಳಿಸಿಕೊಂಡಿದಿ.

ಗುರುವಿನ ಕಷ್ಟವನು ನೋಡಿ ಮರುಗಿದಿ
ಕಷ್ಟದಲ್ಲಿ ಗುರುವಿಗೆ ಸಹಾಯಕನಂತೆ ಎದೆತಟ್ಟಿ ನಿಂತಿದಿ
ಗುರಿ ಮುಟ್ಟಿಸುವುದಕ್ಕೆ ಸತತ ಸಹಾಯ ಮಾಡಿದಿ
ಗುರುವಿನ ಜಯ (ಮೋಕ್ಷ) ಕಂಡು ಸಂತಸ ಪಟ್ಟಿದಿ.

ಪರರ ಸುಖವನ್ನು ಕಂಡು ಹರ್ಷಿತನಾಗಿದಿ
ಪರರ ಕಷ್ಟದಲ್ಲಿ ಸಹಭಾಗಿಯಾಗಲು ಧೈರ್ಯದಿಂದ ನಿಂತಿದಿ
ನೀತಿ ಮಾರ್ಗದಿ ಕೀರ್ತಿಗಳಿಸಬೇಕೆಂದು ಬಯಸಿದಿ
ಸುವಿಚಾರ ಕಲಿತು ಸುಹೃದಯಿ ಆಗಿದಿ.

ಒರಟು ಕಲ್ಲನ್ನು ಕೆತ್ತಿಕೊಂಡು ಸುಂದರ ಮೂರ್ತಿಯಾದಿ
ಝಕಣಚಾರಿಯಂತೆ ಹಗಲಿರುಳು ನಿದ್ರೆಗೆಟ್ಟು ಬಳಲಿದಿ
ಗುರುವಿನ ಮನಶಾಂತಿಗೆ ಎಲ್ಲವೂ ತಿಳಕೊಂಡಿದಿ
ಯಾರು ಕದಿಯಲಾರದಂಥ ಐಶ್ವರ್ಯ ಗಳಿಸಿದಿ.

ಜಾತಿ ಮತ ಪಂಥಗಳ ಭೇದವ ಆರಿಸಿದಿ
ನಾವೆಲ್ಲರೂ ಒಂದೇ ತಾಯಿ ಮಕ್ಕಳೆಂದು ತಿಳಕೊಂಡಿದಿ
ಪ್ರಾಮಾಣಿಕತೆಗಾಗಿ ಪ್ರಾಣ ಅರ್ಪಿಸಲು ನಿಂತಿದಿ
ಅಂಧಕಾರದ ವಿರುದ್ಧ ಭಂಡೇಳಲು ಸಿದ್ಧನಾದಿ.

ಎಲೆ ಕಾಂಡದಲ್ಲಿ ಅಡಗಿದ ಹೂವಿನಂತಿರದೆ
ಎಲ್ಲರ ದೃಷ್ಟಿಗೆ ಕಾಣುವ ಕುಸುಮದಂತಾದಿ
ಗುರುವಿಗಾಗಿ ತನುಮನ ಧನವು ನೀಡಿದಿ
ಜಗವಿರುವವರೆಗೆ ಜಗಭರಿತ ಶಿಷ್ಯನಾದಿ.
*****
೦೬/೧೧/೧೯೯೭

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...