ಹುಟ್ಟು

ಎಲ್ಲೋ ಬೆಳೆದ ಗಿಡಮರಗಳ
ಒಣ ತರಗಲೆಗಳ ಸವರಿ ಗಾಳಿ,
ತೇಲಿ ಬಿಟ್ಟ ಕಣಜ ಬದುವಿನ ಕಾಳು,
ಹೋಗಿದ್ದಾರೆ ಮೋಡಗಳ ಕರೆತರಲು
ಕೈಯೊಂದು ಬೇಕಿದೆ ಹನಿಗಳ ಸಿಂಪಡಿಸಲು
ಎಟುಕು ಮೊಳಕೆಗೆ ಕಾದು ಕುಳಿತ ಮರ್ಮರ.

ಯಾರಿಗೆ ಗೊತ್ತು ಕಾವು ಕೊಡುವ ಖಾತ್ರಿ
ಬಹಳ ದೂರದಲ್ಲಿನ ನಕ್ಷತ್ರಗಳು ಮಿಣುಕಿ
ಕಣ್ಣ ಎವೆ ತೆರೆಯುವುದರೊಳಗೆ ಬೇರಿಗಿಳಿದ
ಜೀವ ಫಸಲು ಆಗಲು ಹಾತೊರೆದ ಕ್ಷಣ
ಕತ್ತಲ ಸಾಗರದಲಿ ತೇಲಿಸಿದ ಭರವಸೆಗಳು.
ಹನಿ ಇಬ್ಬನಿ ಹರಿದ ಸಾಲು ಉಸಿರು ಬಸಿರು.

ಎಲ್ಲೋ ಬೆಸೆದ ಮೋಡಗಳ ನಡುವೆ
ರಾತ್ರಿಗಳ ಚಿಕ್ಕಿಗಳು ಬೆರೆತು ತೂಕಡಿಸಿ,
ಹಕ್ಕಿ ಪಕ್ಷಿಗಳು ಎದೆಗೆ ಅಮರಿಕೊಂಡ ಪ್ರೀತಿ,
ಸಾಲು ಸಾಲು ಕಿರಣಗಳ ಸ್ಪರ್ಶಕೆ ಮೈ ದಡವಿ
ಅರಳೀ ಘಮ್ಮೆಂದು ಹೂವಗಂಧ
ಗಾಳಿ ಕಾಳು ನಕ್ಷತ್ರ ಇಬ್ಬನಿ ಮಿನುಗಿದ ಧರೆ.

ಮಳೆ ಗಾಳಿ ಮೋಡ ಉಡಿ ತುಂಬಿದ ಮಾಯೆ
ಜಗಕೆ ಅರಳಲು ಹೇಳಿ ಸ್ಪರ್ಶಕೆ ಮರುಳಾದಳು
ರೂಪ ರಸಗಂಧ ಆನಂದ ಲೋಕ ಕಣ್ಣುಗಳ,
ಹಿಗ್ಗಿದ ಸುಗ್ಗೀ ಕುಣಿತದಲಿ ಬೆಳಕಾಡಿಸಿ,
ಒಡಲ ಹರಿದು ಹರಿಸಿ ಚೆಂದ,
ಆಟವಾಡಿದಳು ಸಿರಿಗಂಧಿ ಎಂದಿಗೂ ಅಮರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬೯
Next post ಕಬ್ಬಿಗ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys