ಹುಟ್ಟು

ಎಲ್ಲೋ ಬೆಳೆದ ಗಿಡಮರಗಳ
ಒಣ ತರಗಲೆಗಳ ಸವರಿ ಗಾಳಿ,
ತೇಲಿ ಬಿಟ್ಟ ಕಣಜ ಬದುವಿನ ಕಾಳು,
ಹೋಗಿದ್ದಾರೆ ಮೋಡಗಳ ಕರೆತರಲು
ಕೈಯೊಂದು ಬೇಕಿದೆ ಹನಿಗಳ ಸಿಂಪಡಿಸಲು
ಎಟುಕು ಮೊಳಕೆಗೆ ಕಾದು ಕುಳಿತ ಮರ್ಮರ.

ಯಾರಿಗೆ ಗೊತ್ತು ಕಾವು ಕೊಡುವ ಖಾತ್ರಿ
ಬಹಳ ದೂರದಲ್ಲಿನ ನಕ್ಷತ್ರಗಳು ಮಿಣುಕಿ
ಕಣ್ಣ ಎವೆ ತೆರೆಯುವುದರೊಳಗೆ ಬೇರಿಗಿಳಿದ
ಜೀವ ಫಸಲು ಆಗಲು ಹಾತೊರೆದ ಕ್ಷಣ
ಕತ್ತಲ ಸಾಗರದಲಿ ತೇಲಿಸಿದ ಭರವಸೆಗಳು.
ಹನಿ ಇಬ್ಬನಿ ಹರಿದ ಸಾಲು ಉಸಿರು ಬಸಿರು.

ಎಲ್ಲೋ ಬೆಸೆದ ಮೋಡಗಳ ನಡುವೆ
ರಾತ್ರಿಗಳ ಚಿಕ್ಕಿಗಳು ಬೆರೆತು ತೂಕಡಿಸಿ,
ಹಕ್ಕಿ ಪಕ್ಷಿಗಳು ಎದೆಗೆ ಅಮರಿಕೊಂಡ ಪ್ರೀತಿ,
ಸಾಲು ಸಾಲು ಕಿರಣಗಳ ಸ್ಪರ್ಶಕೆ ಮೈ ದಡವಿ
ಅರಳೀ ಘಮ್ಮೆಂದು ಹೂವಗಂಧ
ಗಾಳಿ ಕಾಳು ನಕ್ಷತ್ರ ಇಬ್ಬನಿ ಮಿನುಗಿದ ಧರೆ.

ಮಳೆ ಗಾಳಿ ಮೋಡ ಉಡಿ ತುಂಬಿದ ಮಾಯೆ
ಜಗಕೆ ಅರಳಲು ಹೇಳಿ ಸ್ಪರ್ಶಕೆ ಮರುಳಾದಳು
ರೂಪ ರಸಗಂಧ ಆನಂದ ಲೋಕ ಕಣ್ಣುಗಳ,
ಹಿಗ್ಗಿದ ಸುಗ್ಗೀ ಕುಣಿತದಲಿ ಬೆಳಕಾಡಿಸಿ,
ಒಡಲ ಹರಿದು ಹರಿಸಿ ಚೆಂದ,
ಆಟವಾಡಿದಳು ಸಿರಿಗಂಧಿ ಎಂದಿಗೂ ಅಮರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬೯
Next post ಕಬ್ಬಿಗ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…