ಮಹಾನಗರ

ಬಹಿಷ್ಠೆ ಹಸ್ತಿನಿ ಹೆಣ್ಣು ಗಜಮೈಥುನ ರಾಡಿಯಲ್ಲಿ ಸದಾ
ತೆರೆದಿಟ್ಟ ಓಣಿ. ಓಣಿ ಓಣಿಗೆ ಬಸಿರಾದ ಹಿಡಿಂಬೆ ತೊಡೆ
ಬಿಸಾಕಿದ ನನ್ನ ನಿರ್ಗತಿಕ ಪಿಂಡಗಳು ಚರಂಡಿಯಲ್ಲಿ ನಡುಗಿದವು
ತಿಂತಿಣಿ ಬೆಳೆದು ಬೀದಿಗಳಲ್ಲಿ ಅಲೆದು ಹಸಿದು
ಕೆಲವು ತಾವು ತಾವೇ ತಿಂದವು. ಹೀಗೆ
ಬೀಗಿಕೊಂಡಿವೆ ವಿಕಾರವಾಗಿ ಇವಳ ತೊಡೆಗಳು ಕಾಲುಗಳು
ಈ ನೀಳ ಕೈಗಳು ಪೇಲವ ಬೆರಳುಗಳು
ಕಡಿದಿಟ್ಟಂತೆ ಬಿದ್ದ ಬೃಹತ್ತಾದ ಮೊಲೆಗಳು
ಇಲ್ಲಿ ಮೇಲೆ ಕೆಳಗೆ ಒಳಹೊರಗೆ ಮತ್ತು ಮರೆಗೆ
ಸರಿದಾಡುತ್ತಿದ್ದೇನೆ ದಾರಿ ಹುಡುಕುತ್ತ ಈ ಚಕ್ರಬಿಂಬದಿಂದ
ಹೊರಗೆ ಹೋಗುವ ದಾರಿ ಜನಸಂದಣಿಯ ತಿಣಿಕಿನಲ್ಲಿ
ಎಡೆ ಬಿಡದೆ ಸರಿದು ಬೆರೆತು ಬೆರೆಯಲಾಗದೆ ಸರಿದು
ಒಳಗಿನ ಏಕಾಂತದಲ್ಲಿ ಕುಕ್ಕರಗುಳಿತು ಚಿಂತಿಸುತ್ತೇನೆ:
ಇವಳ ಮತ್ತು ನನ್ನ ಅನೈತಿಕ ಸಂಬಂಧ ಇವಳಿಂದ ಕೊನೆಗೂ
ಪಾರಾಗುವೆನೆಂಬ ವ್ಯರ್ಥ ಹಟ ಮತ್ತೆ ಈ ಕಕ್ಷೆಯಲ್ಲಿ ಸುಳಿದು
ನಡುವೆ ಅಗಾಧ ಗರ್ತ ಗುರುತ್ವಾಕರ್ಷ ಕೊನೆಗೂ
ಹೊಟ್ಟೆಯೊಳಗೆ ವಾಕರಿಕೆಯೆದ್ದು ನಾಯಿಗಳ ಕೂಗಾಗಿ
ಮೂರ್ಛಾವಸ್ಥೆಯಲ್ಲಿ ನಾನು ಶೈವಲಿನಿಯೀಚೆ
ಸತ್ತರೂ ಸತ್ತೆನು ಸತ್ತರೂ ಇವಳ ಗರ್ಭದಲ್ಲಿ
ಹುಟ್ಟಬಹುದು ನನ್ನದೇ ಮಗನಾಗಿ ನನ್ನಂತೆಯೇ ಆಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೃಷ್ಟಿಕ್ರಿಯೆ
Next post ಮೋಸದ ಹೆಣ್ಣು

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…