ದ್ರೌಪದಿ

ಗಂಡಂದಿರೈವರು ನಿನಗೆ ಪಾಂಚಲಿ
ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ
ಒಬ್ಬಳೊ ನಾಕಾಣೆ
ಯಾರದೊ ಶೃಂಗಾರವ ಕಂಡ
ರೇಣುಕೆ, ಪತಿಯ ಕೋಪಕೆ ಬಲಿಯಾಗಿ
ಸುತನಿಂದಲೇ ಶಿರ ಛೇದಿಸಿಕೊಂಡಳು
ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ
ಕಲ್ಲಾದಳು ಕೈಹಿಡಿದವನಿಂದಲೇ
ರಾವಣ ಕದ್ದೊಯ್ದನೆಂದು ಅಗ್ನಿಪರೀಕ್ಷೆ
ದಾಟಿ ಬಂದ ಜಾನಕಿ ಕೊನೆಗೂ ವನಸೇರಿ
ವಸುವಿನ ಗರ್ಭ ಹೊಕ್ಕು ಪಾರಾದಳು
ಅವರವರ ಅನುಕೂಲಕ್ಕಂತೆ ಧರ್ಮಶಾಸ್ತ್ರ
ನಿನ್ನ ಮಾತ್ರ ಐವರಿಗೆ ಹಂಚಿ
ಪತಿವ್ರತೆ ಎಂದೇ ಘೋಷಿಸಿ ಬಿಟ್ಟಾಗ
ನೀ ಹೇಗೆ ಒಪ್ಪಿದೆಯೋ ಐವರಿಗೆ ಸತಿಯಾಗಲು
ಗಂಡಂದಿರೈವರಿಗೆ ನಿನ್ನ ಹಂಚಿಕೊಂಡಾಗ
ನಿನಗಾದರೂ ಅನಿಸಿತೆ
ನೀ ಪತಿವ್ರತೆಯೆಂದು
ಸಿಡಿದೇಳುವ ಪ್ರವೃತ್ತಿ ನಿನ್ನಲ್ಲಿದ್ದರೂ
ಐವರಿದ್ದೂ ನೀ ಬೆತ್ತಲೆಯಾಗಬೇಕಿದ್ದ
ಆ ಕ್ಷಣಗಳಲಿ ರಕ್ಷಿಸಲಾರದ ಅವರ
ಬಿಟ್ಟು ನೀನೇಕೆ ದೂರಾಗದೆ ಉಳಿದೆ
ತನ್ನದೇನು ನಡೆಯದೆಂದು ಮೌನವಾಗಿ
ಕೊರಳೊಡ್ಡಿ ಪತಿವ್ರತೆಯ ಬಿರುದು
ಸಿಕ್ಕಿದ್ದೆ ಸಾಕೆಂದು ನಿನ್ನುರಿಯ ನಿನ್ನೊಳಗೆ
ಅಡಗಿಸಿಕೊಂಡು ಒಳಗೆ ಸುಟ್ಟು ಬೂದಿಯಾದೆಯಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರ್ಥಕ್ಯ
Next post ನಗರ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…