Home / ಕವನ / ಕವಿತೆ / ದ್ರೌಪದಿ

ದ್ರೌಪದಿ

ಗಂಡಂದಿರೈವರು ನಿನಗೆ ಪಾಂಚಲಿ
ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ
ಒಬ್ಬಳೊ ನಾಕಾಣೆ
ಯಾರದೊ ಶೃಂಗಾರವ ಕಂಡ
ರೇಣುಕೆ, ಪತಿಯ ಕೋಪಕೆ ಬಲಿಯಾಗಿ
ಸುತನಿಂದಲೇ ಶಿರ ಛೇದಿಸಿಕೊಂಡಳು
ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ
ಕಲ್ಲಾದಳು ಕೈಹಿಡಿದವನಿಂದಲೇ
ರಾವಣ ಕದ್ದೊಯ್ದನೆಂದು ಅಗ್ನಿಪರೀಕ್ಷೆ
ದಾಟಿ ಬಂದ ಜಾನಕಿ ಕೊನೆಗೂ ವನಸೇರಿ
ವಸುವಿನ ಗರ್ಭ ಹೊಕ್ಕು ಪಾರಾದಳು
ಅವರವರ ಅನುಕೂಲಕ್ಕಂತೆ ಧರ್ಮಶಾಸ್ತ್ರ
ನಿನ್ನ ಮಾತ್ರ ಐವರಿಗೆ ಹಂಚಿ
ಪತಿವ್ರತೆ ಎಂದೇ ಘೋಷಿಸಿ ಬಿಟ್ಟಾಗ
ನೀ ಹೇಗೆ ಒಪ್ಪಿದೆಯೋ ಐವರಿಗೆ ಸತಿಯಾಗಲು
ಗಂಡಂದಿರೈವರಿಗೆ ನಿನ್ನ ಹಂಚಿಕೊಂಡಾಗ
ನಿನಗಾದರೂ ಅನಿಸಿತೆ
ನೀ ಪತಿವ್ರತೆಯೆಂದು
ಸಿಡಿದೇಳುವ ಪ್ರವೃತ್ತಿ ನಿನ್ನಲ್ಲಿದ್ದರೂ
ಐವರಿದ್ದೂ ನೀ ಬೆತ್ತಲೆಯಾಗಬೇಕಿದ್ದ
ಆ ಕ್ಷಣಗಳಲಿ ರಕ್ಷಿಸಲಾರದ ಅವರ
ಬಿಟ್ಟು ನೀನೇಕೆ ದೂರಾಗದೆ ಉಳಿದೆ
ತನ್ನದೇನು ನಡೆಯದೆಂದು ಮೌನವಾಗಿ
ಕೊರಳೊಡ್ಡಿ ಪತಿವ್ರತೆಯ ಬಿರುದು
ಸಿಕ್ಕಿದ್ದೆ ಸಾಕೆಂದು ನಿನ್ನುರಿಯ ನಿನ್ನೊಳಗೆ
ಅಡಗಿಸಿಕೊಂಡು ಒಳಗೆ ಸುಟ್ಟು ಬೂದಿಯಾದೆಯಾ?
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...