ದ್ರೌಪದಿ

ಗಂಡಂದಿರೈವರು ನಿನಗೆ ಪಾಂಚಲಿ
ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ
ಒಬ್ಬಳೊ ನಾಕಾಣೆ
ಯಾರದೊ ಶೃಂಗಾರವ ಕಂಡ
ರೇಣುಕೆ, ಪತಿಯ ಕೋಪಕೆ ಬಲಿಯಾಗಿ
ಸುತನಿಂದಲೇ ಶಿರ ಛೇದಿಸಿಕೊಂಡಳು
ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ
ಕಲ್ಲಾದಳು ಕೈಹಿಡಿದವನಿಂದಲೇ
ರಾವಣ ಕದ್ದೊಯ್ದನೆಂದು ಅಗ್ನಿಪರೀಕ್ಷೆ
ದಾಟಿ ಬಂದ ಜಾನಕಿ ಕೊನೆಗೂ ವನಸೇರಿ
ವಸುವಿನ ಗರ್ಭ ಹೊಕ್ಕು ಪಾರಾದಳು
ಅವರವರ ಅನುಕೂಲಕ್ಕಂತೆ ಧರ್ಮಶಾಸ್ತ್ರ
ನಿನ್ನ ಮಾತ್ರ ಐವರಿಗೆ ಹಂಚಿ
ಪತಿವ್ರತೆ ಎಂದೇ ಘೋಷಿಸಿ ಬಿಟ್ಟಾಗ
ನೀ ಹೇಗೆ ಒಪ್ಪಿದೆಯೋ ಐವರಿಗೆ ಸತಿಯಾಗಲು
ಗಂಡಂದಿರೈವರಿಗೆ ನಿನ್ನ ಹಂಚಿಕೊಂಡಾಗ
ನಿನಗಾದರೂ ಅನಿಸಿತೆ
ನೀ ಪತಿವ್ರತೆಯೆಂದು
ಸಿಡಿದೇಳುವ ಪ್ರವೃತ್ತಿ ನಿನ್ನಲ್ಲಿದ್ದರೂ
ಐವರಿದ್ದೂ ನೀ ಬೆತ್ತಲೆಯಾಗಬೇಕಿದ್ದ
ಆ ಕ್ಷಣಗಳಲಿ ರಕ್ಷಿಸಲಾರದ ಅವರ
ಬಿಟ್ಟು ನೀನೇಕೆ ದೂರಾಗದೆ ಉಳಿದೆ
ತನ್ನದೇನು ನಡೆಯದೆಂದು ಮೌನವಾಗಿ
ಕೊರಳೊಡ್ಡಿ ಪತಿವ್ರತೆಯ ಬಿರುದು
ಸಿಕ್ಕಿದ್ದೆ ಸಾಕೆಂದು ನಿನ್ನುರಿಯ ನಿನ್ನೊಳಗೆ
ಅಡಗಿಸಿಕೊಂಡು ಒಳಗೆ ಸುಟ್ಟು ಬೂದಿಯಾದೆಯಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರ್ಥಕ್ಯ
Next post ನಗರ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…