ಗಂಡಂದಿರೈವರು ನಿನಗೆ ಪಾಂಚಲಿ
ಅದ್ಹೇಗೆ ನೀ ಪಂಚಪತಿವ್ರತೆಯರಲ್ಲಿ
ಒಬ್ಬಳೊ ನಾಕಾಣೆ
ಯಾರದೊ ಶೃಂಗಾರವ ಕಂಡ
ರೇಣುಕೆ, ಪತಿಯ ಕೋಪಕೆ ಬಲಿಯಾಗಿ
ಸುತನಿಂದಲೇ ಶಿರ ಛೇದಿಸಿಕೊಂಡಳು
ಇಂದ್ರನ ಮೋಸಕ್ಕೆ ಬಲಿಯಾದ ಅಹಲ್ಯೆ
ಕಲ್ಲಾದಳು ಕೈಹಿಡಿದವನಿಂದಲೇ
ರಾವಣ ಕದ್ದೊಯ್ದನೆಂದು ಅಗ್ನಿಪರೀಕ್ಷೆ
ದಾಟಿ ಬಂದ ಜಾನಕಿ ಕೊನೆಗೂ ವನಸೇರಿ
ವಸುವಿನ ಗರ್ಭ ಹೊಕ್ಕು ಪಾರಾದಳು
ಅವರವರ ಅನುಕೂಲಕ್ಕಂತೆ ಧರ್ಮಶಾಸ್ತ್ರ
ನಿನ್ನ ಮಾತ್ರ ಐವರಿಗೆ ಹಂಚಿ
ಪತಿವ್ರತೆ ಎಂದೇ ಘೋಷಿಸಿ ಬಿಟ್ಟಾಗ
ನೀ ಹೇಗೆ ಒಪ್ಪಿದೆಯೋ ಐವರಿಗೆ ಸತಿಯಾಗಲು
ಗಂಡಂದಿರೈವರಿಗೆ ನಿನ್ನ ಹಂಚಿಕೊಂಡಾಗ
ನಿನಗಾದರೂ ಅನಿಸಿತೆ
ನೀ ಪತಿವ್ರತೆಯೆಂದು
ಸಿಡಿದೇಳುವ ಪ್ರವೃತ್ತಿ ನಿನ್ನಲ್ಲಿದ್ದರೂ
ಐವರಿದ್ದೂ ನೀ ಬೆತ್ತಲೆಯಾಗಬೇಕಿದ್ದ
ಆ ಕ್ಷಣಗಳಲಿ ರಕ್ಷಿಸಲಾರದ ಅವರ
ಬಿಟ್ಟು ನೀನೇಕೆ ದೂರಾಗದೆ ಉಳಿದೆ
ತನ್ನದೇನು ನಡೆಯದೆಂದು ಮೌನವಾಗಿ
ಕೊರಳೊಡ್ಡಿ ಪತಿವ್ರತೆಯ ಬಿರುದು
ಸಿಕ್ಕಿದ್ದೆ ಸಾಕೆಂದು ನಿನ್ನುರಿಯ ನಿನ್ನೊಳಗೆ
ಅಡಗಿಸಿಕೊಂಡು ಒಳಗೆ ಸುಟ್ಟು ಬೂದಿಯಾದೆಯಾ?
*****
Related Post
ಸಣ್ಣ ಕತೆ
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…