ಗರದಿ ಗಮ್ಮತ್ತಿನ ಪೆಟ್ಟಿಗೆ

ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ
ಎಂಥೆಂತಾ ಚಿತ್ರಗಳು, ವಿಚಿತ್ರಗಳು!
ತಾಜಮಹಲು, ಕುತುಬ್‌ಮಿನಾರು
ದೊಡ್ಡಾನುದೊಡ್ಡ ಬಾಹುಬಲಿ
ಮತ್ತಿನ್ನಿನೇನೇನೋ…
ಗರದಿಯವ ಚಕ್ರ ತಿರುಗಿಸಿದಂತೆಲ್ಲಾ
ಬದಲಾಗುವ ಬಣ್ಣದೊಂದಿಗೆ
ಚಿತ್ರವೂ ಬದಲಾಗುತ್ತದೆ ಒಂದಿಗೇ
ನೇಸರ ಬದಲಾದಂತೆಲ್ಲಾ
ಬಣ್ಣ ಬದಲಿಸುವ ಮೇಘದಂತೆ

ಒಂದೊಂದು ಚಿತ್ರದ ನಂತರವೂ
ಹೆಪ್ಪಾದ ಮೌನದ ಜೊತೆಗೆ
ಕಣ್ಣು ಕುಕ್ಕುವ ಕತ್ತಲೆ

ಕಿರುಕಿಂಡಿಗೆ ಹೊಂದಿಕೊಳ್ಳಲಾಗದ
ಕಣ್ಮಿಣುಕಾಟದ ನಡುವೆ
ಅವಸರಿಸುವ ಗರದಿಯವ
ನೋಡುವ ಮೊದಲೇ
ಓಡುವ ಚಿತ್ರಗಳು!

ಗಡಬಡ ಸದ್ದಿನೊಂದಿಗೆ
ಚಿತ್ರ ಥಟ್ಟನೆ ಮುಗಿದು
ಬೆಳ್ಳಾನೆ ಬೆಳ್ಳ ಪರದೆ
ಅನುಭವಿಸುವ ಮೊದಲೇ
ಮುಗಿದು ಹೋಗುವ ಕ್ಷಣಗಳು!

ಕಣ್ಗಳಿಗೆ ಮುಗಿಯದಚ್ಚರಿ
ಪ್ರಶ್ನೆಗಳ ಸಾಲು ಸಾಲು
ನಮ್ಮವಾಗದೇ ಮುಗಿದೇ
ಹೋಗುವ ಕನಸುಗಳು!

ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ
ಎಂಥೆಂತಾ ಚಿತ್ರಗಳು, ವಿಚಿತ್ರಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವಧಾನ-ಸಾವಧಾನ
Next post ನಾಳೆಗಳಿಲ್ಲದ ಬದುಕು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…