Home / ಕವನ / ಕವಿತೆ / ವಿಶ್ವಕರ್ಮ ಸೂಕ್ತ

ವಿಶ್ವಕರ್ಮ ಸೂಕ್ತ

ಈ ಎಲ್ಲ ವಿಶ್ವವನು ನಮ್ಮ ತಂದೆಯು ಋಷಿಯು
ಹೋತಾರನಾಗಿ ಯಜ್ಞದಲಿ ಅರ್ಪಿಸಿದ
ಆಶಿಸಿದ ಸೃಷ್ಟಿಸಿದ ಈ ತನ್ನ ಆಸ್ತಿಯಲಿ
ಮೊದಲಿಗನು ತಾನಾಗಿ ಸೇರಿಹೋದ

ಸೃಷ್ಟಿಯಾರಂಭದಲಿ ಈ ವಿಶ್ವವೇನಿತ್ತು
ಯಾವುದದು ತಾನಿತ್ತು ಹೇಗೆ ಇತ್ತು
ವಿಶ್ವಚಕ್ಷುವು ವಿಶ್ವಕರ್ಮನಾ ಮಹಿಮೆಯದು
ಈ ಭೂಮಿಗಗನಗಳ ಸೃಷ್ಟಿಸಿತ್ತು

ವಿಶ್ವವೆಲ್ಲಾ ಕಣ್ಣು ವಿಶ್ವವೆಲ್ಲಾ ಬಾಯಿ
ವಿಶ್ವವೆಲ್ಲಾ ಬಾಹು ಪಾದವಿರುವ
ಹಕ್ಕಿ ರೆಕ್ಕೆಗಳಂತೆ ತೆಕ್ಕೆಯಲಿ ಆ ದೇವ
ಬಾನು ಭೂಮಿಗಳನ್ನು ನಿರ್ಮಿಸಿರುವ

ಯಾವ ವನವದು ಅಲ್ಲಿ ಯಾವ ವೃಕ್ಷವು ಇತ್ತು
ಎಲ್ಲಿ ಈ ಭೂ ಬಾನು ಅಡಗಿದ್ದವು
ಮತಿವಂತ ಮಾನವರೆ ಮನದೊಳಗೆ ಚಿಂತಿಸಿರಿ
ಯಾವುದದು ಭುವನವನು ಧರಿಸಿರುವುದು

ಮೇಲಿರುವುದೆಲ್ಲವೂ ಕೆಳಗಿರುವುದೆಲ್ಲವೂ
ನಡುವಿರುವುದೆಲ್ಲವೂ ನೀ ವಿಶ್ವಕರ್ಮ
ಹವಿಸ್ಸನರ್ಪಿಸುವುದನು ಕಲಿಸು ಗೆಳೆಯರಿಗೆಲ್ಲ
ತನ್ನ ಅರ್ಪಿಸಿ ತಾನು ವೃದ್ಧಿಸುವ ಮರ್ಮ

ವಿಶ್ಚಕರ್ಮನೆ ಸ್ವತಃ ಈ ಭೂಮಿ ಸ್ವರ್ಗಗಳ
ಯಜ್ಞದಲ್ಲಾಜ್ಯ ಮಾಡಿದ ಪರಿಯಲಿ
ಸುತ್ತಲಿನ ಜನ ಮರುಳುತನದಲ್ಲಿ ಮುಳುಗಿರಲಿ
ಇಹದಿ ಸಂಪದ ಜ್ಞಾನ ನಮಗಾಗಲಿ

ವೇಗಮತಿ ವಾಕ್ಪತಿಯೆ ವಿಶ್ಚಕರ್ಮನೆ ನಿನ್ನ
ಬೇಡುವೆವು ಕಾರ್ಯಗಳ ವೃದ್ಧಿಗಾಗಿ
ವಿಶ್ವಂಭರನೆ ಸತ್ಯಕರ್ಮ ಕರುಣಿಸು ನಮ್ಮ
ಯಜ್ಞಹವಿಸುಗಳ ಸಂತುಷ್ಟಿಗಾಗಿ ||
(ಋಗ್ವೇದದ ೧೦ನೆ ಮಂಡಲ)
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...