ವಿಶ್ವಕರ್ಮ ಸೂಕ್ತ

ಈ ಎಲ್ಲ ವಿಶ್ವವನು ನಮ್ಮ ತಂದೆಯು ಋಷಿಯು
ಹೋತಾರನಾಗಿ ಯಜ್ಞದಲಿ ಅರ್ಪಿಸಿದ
ಆಶಿಸಿದ ಸೃಷ್ಟಿಸಿದ ಈ ತನ್ನ ಆಸ್ತಿಯಲಿ
ಮೊದಲಿಗನು ತಾನಾಗಿ ಸೇರಿಹೋದ

ಸೃಷ್ಟಿಯಾರಂಭದಲಿ ಈ ವಿಶ್ವವೇನಿತ್ತು
ಯಾವುದದು ತಾನಿತ್ತು ಹೇಗೆ ಇತ್ತು
ವಿಶ್ವಚಕ್ಷುವು ವಿಶ್ವಕರ್ಮನಾ ಮಹಿಮೆಯದು
ಈ ಭೂಮಿಗಗನಗಳ ಸೃಷ್ಟಿಸಿತ್ತು

ವಿಶ್ವವೆಲ್ಲಾ ಕಣ್ಣು ವಿಶ್ವವೆಲ್ಲಾ ಬಾಯಿ
ವಿಶ್ವವೆಲ್ಲಾ ಬಾಹು ಪಾದವಿರುವ
ಹಕ್ಕಿ ರೆಕ್ಕೆಗಳಂತೆ ತೆಕ್ಕೆಯಲಿ ಆ ದೇವ
ಬಾನು ಭೂಮಿಗಳನ್ನು ನಿರ್ಮಿಸಿರುವ

ಯಾವ ವನವದು ಅಲ್ಲಿ ಯಾವ ವೃಕ್ಷವು ಇತ್ತು
ಎಲ್ಲಿ ಈ ಭೂ ಬಾನು ಅಡಗಿದ್ದವು
ಮತಿವಂತ ಮಾನವರೆ ಮನದೊಳಗೆ ಚಿಂತಿಸಿರಿ
ಯಾವುದದು ಭುವನವನು ಧರಿಸಿರುವುದು

ಮೇಲಿರುವುದೆಲ್ಲವೂ ಕೆಳಗಿರುವುದೆಲ್ಲವೂ
ನಡುವಿರುವುದೆಲ್ಲವೂ ನೀ ವಿಶ್ವಕರ್ಮ
ಹವಿಸ್ಸನರ್ಪಿಸುವುದನು ಕಲಿಸು ಗೆಳೆಯರಿಗೆಲ್ಲ
ತನ್ನ ಅರ್ಪಿಸಿ ತಾನು ವೃದ್ಧಿಸುವ ಮರ್ಮ

ವಿಶ್ಚಕರ್ಮನೆ ಸ್ವತಃ ಈ ಭೂಮಿ ಸ್ವರ್ಗಗಳ
ಯಜ್ಞದಲ್ಲಾಜ್ಯ ಮಾಡಿದ ಪರಿಯಲಿ
ಸುತ್ತಲಿನ ಜನ ಮರುಳುತನದಲ್ಲಿ ಮುಳುಗಿರಲಿ
ಇಹದಿ ಸಂಪದ ಜ್ಞಾನ ನಮಗಾಗಲಿ

ವೇಗಮತಿ ವಾಕ್ಪತಿಯೆ ವಿಶ್ಚಕರ್ಮನೆ ನಿನ್ನ
ಬೇಡುವೆವು ಕಾರ್ಯಗಳ ವೃದ್ಧಿಗಾಗಿ
ವಿಶ್ವಂಭರನೆ ಸತ್ಯಕರ್ಮ ಕರುಣಿಸು ನಮ್ಮ
ಯಜ್ಞಹವಿಸುಗಳ ಸಂತುಷ್ಟಿಗಾಗಿ ||
(ಋಗ್ವೇದದ ೧೦ನೆ ಮಂಡಲ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೃಹಿಣಿ
Next post ಗುಂಡೇಚ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…