Home / ಕವನ / ಕವಿತೆ / ವಿಶ್ವಕರ್ಮ ಸೂಕ್ತ

ವಿಶ್ವಕರ್ಮ ಸೂಕ್ತ

ಈ ಎಲ್ಲ ವಿಶ್ವವನು ನಮ್ಮ ತಂದೆಯು ಋಷಿಯು
ಹೋತಾರನಾಗಿ ಯಜ್ಞದಲಿ ಅರ್ಪಿಸಿದ
ಆಶಿಸಿದ ಸೃಷ್ಟಿಸಿದ ಈ ತನ್ನ ಆಸ್ತಿಯಲಿ
ಮೊದಲಿಗನು ತಾನಾಗಿ ಸೇರಿಹೋದ

ಸೃಷ್ಟಿಯಾರಂಭದಲಿ ಈ ವಿಶ್ವವೇನಿತ್ತು
ಯಾವುದದು ತಾನಿತ್ತು ಹೇಗೆ ಇತ್ತು
ವಿಶ್ವಚಕ್ಷುವು ವಿಶ್ವಕರ್ಮನಾ ಮಹಿಮೆಯದು
ಈ ಭೂಮಿಗಗನಗಳ ಸೃಷ್ಟಿಸಿತ್ತು

ವಿಶ್ವವೆಲ್ಲಾ ಕಣ್ಣು ವಿಶ್ವವೆಲ್ಲಾ ಬಾಯಿ
ವಿಶ್ವವೆಲ್ಲಾ ಬಾಹು ಪಾದವಿರುವ
ಹಕ್ಕಿ ರೆಕ್ಕೆಗಳಂತೆ ತೆಕ್ಕೆಯಲಿ ಆ ದೇವ
ಬಾನು ಭೂಮಿಗಳನ್ನು ನಿರ್ಮಿಸಿರುವ

ಯಾವ ವನವದು ಅಲ್ಲಿ ಯಾವ ವೃಕ್ಷವು ಇತ್ತು
ಎಲ್ಲಿ ಈ ಭೂ ಬಾನು ಅಡಗಿದ್ದವು
ಮತಿವಂತ ಮಾನವರೆ ಮನದೊಳಗೆ ಚಿಂತಿಸಿರಿ
ಯಾವುದದು ಭುವನವನು ಧರಿಸಿರುವುದು

ಮೇಲಿರುವುದೆಲ್ಲವೂ ಕೆಳಗಿರುವುದೆಲ್ಲವೂ
ನಡುವಿರುವುದೆಲ್ಲವೂ ನೀ ವಿಶ್ವಕರ್ಮ
ಹವಿಸ್ಸನರ್ಪಿಸುವುದನು ಕಲಿಸು ಗೆಳೆಯರಿಗೆಲ್ಲ
ತನ್ನ ಅರ್ಪಿಸಿ ತಾನು ವೃದ್ಧಿಸುವ ಮರ್ಮ

ವಿಶ್ಚಕರ್ಮನೆ ಸ್ವತಃ ಈ ಭೂಮಿ ಸ್ವರ್ಗಗಳ
ಯಜ್ಞದಲ್ಲಾಜ್ಯ ಮಾಡಿದ ಪರಿಯಲಿ
ಸುತ್ತಲಿನ ಜನ ಮರುಳುತನದಲ್ಲಿ ಮುಳುಗಿರಲಿ
ಇಹದಿ ಸಂಪದ ಜ್ಞಾನ ನಮಗಾಗಲಿ

ವೇಗಮತಿ ವಾಕ್ಪತಿಯೆ ವಿಶ್ಚಕರ್ಮನೆ ನಿನ್ನ
ಬೇಡುವೆವು ಕಾರ್ಯಗಳ ವೃದ್ಧಿಗಾಗಿ
ವಿಶ್ವಂಭರನೆ ಸತ್ಯಕರ್ಮ ಕರುಣಿಸು ನಮ್ಮ
ಯಜ್ಞಹವಿಸುಗಳ ಸಂತುಷ್ಟಿಗಾಗಿ ||
(ಋಗ್ವೇದದ ೧೦ನೆ ಮಂಡಲ)
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...