ಹೆಣ್ಣು…

ಎಲ್ಲೋ ಹುಟ್ಟಿ
ನೆಲವ ಮೆಟ್ಟಿ
ಈ ಜಗವ ತಲ್ಲಣಿಸಿದ ದಿಟ್ಟೆ
*

ಪುಟ್ಟ ಹುಡುಗಿ
ಕಣ್ಣು ಬಿಟ್ಟ ಬೆಡಗಿ
ಇಲ್ಲಿ ಹೊಂದಿಕೊಂಡ ಪರಿಗೆ
ಬೆಕ್ಕಸ ಬೆರಗು.
*

ಗಂಡು ಹೆಣ್ಣು
ಜಗದ ಕಣ್ಣು
ಇಲ್ಲಿ ಹೇಗೋ ಏಗಿಕೊಂಡು
ಜೀವಕೆ ಜೀವ ಕೊಟ್ಟುಕೊಂಡು
ಜಗದ ಸೃಷ್ಟಿಗೆ ಕಾರಣ!
*

ಹೆಣ್ಣು ಮಾಯೆಯಲ್ಲ ಶಕ್ತಿಯು
ಕಂಡ ಕಂಡವರ, ಬೆನ್ನ ಚಪ್ಪರಿಸಿ…
ಹೆಜ್ಜೆ ಹೆಜ್ಜೆಗೆ, ಬೆವರ ಹರಿಸಿ…
ಬಾಳ ಬಂಡಿ, ಎಳೆವ ಸಾರಥಿ.
*

ಜಗವ ತಿದ್ದಿ
ಬುದ್ಧಿ ಕಲಿಸಿದ ಸಿದ್ಧಿ!
ಮೊದಲ ಗುರು
ಮನೆ ವಾಳ್ತೆ
ಕತ್ತಲ ಕಳೆವ ದೀಪ ವಂಶಿ.
*

ಜೀವ ಜಗಕೆ, ಸಂಜೀವಿನಿ
ಒಡಲು ಕಡಲಾಗಿ
ಪ್ರೀತಿ ಮಡಿಲಾಗಿ
ವರ್ಷ ವರ್ಷ
ಹರ್ಷ ತುಂಬುವ
ಕಷ್ಟ ಪರಾಯಿಣೆ.
*

ಹೆಣ್ಣು… ಹೆಣ್ಣು ಜಗದ ಕಣ್ಣು
ಹೊನ್ನು, ಮಣ್ಣು, ಹಣ್ಣು… ಹೆಣ್ಣೇ.
ಜಗವನುಳಿಸಿ,
ಜಗನ್ನಾಥನಾಡಿಸಿ,
ಹನ್ನೆರೆಡು ಅವತಾರಿ-
ಮಹಿಷಾಸುರನ ಕೊಂದ-
ಚಂಡಿ ಚಾಮುಂಡಿ!!
*

ಹೆಣ್ಣಿಲ್ಲದ ಕಣ್ಣಿಲ್ಲವೋ ಅಣ್ಣಾ…
ಕೇಳಿಲ್ಲವೇ ತ್ರಿಮೂರ್ತಿಗಳ ಬಣ್ಣಾ…
ಬಾಲಬಸವರ ಬಣ್ಣಾ…
ಭಸ್ಮಾಸುರನ ಕೊಂದು
ಯಮನ ಗೆದ್ದು
ರಾವಣನ ಕೊಬ್ಬಿಳಿಸಿದ
ಈ ಬೆಳ್ಮುಗಿಲು ಹೆಣ್ಣು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರನಿಗೊಂದು ಬುದ್ಧಿವಾದ
Next post ಕುಲ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys