ಕುಂಬಾರಗ ಪದ ಬರಕೊಟ್ಟೆನು

ಕುಂಬಾರಗ ಪದ ಬರಕೊಟ್ಟೆನು ಸದ್ಗುರು
ಸಾಂಬಾ ವಿದುಧೃತ ಬಿಂಬಾ ||ಪ||

ಅಂಬರ ತಿರುಗಿಯಮೇಲೆ ಅರಲು ನೀರು
ತುಂಬಿದ ಕೆಸರಿನ ಕುಂಭ ಕೊರೆಯುವಂಥಾ ||ಅ.ಪ.||

ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ
ತನ್ನ ಹಸ್ತ ಮಧ್ಯದೊಳಿರುತಿರುವಾ
ಸಣ್ಣ ಹಸಿಯ ತಿಳಿಯಿಂದಲಿ ತೀಡಿ
ನುಣ್ಣಗೆ ಮುಚ್ಚಳ ಮಡಕಿಯ ಮಾಡುವ ||೧||

ಕಾಲ ಕರ್ಮವೆಂಬ ಅರಲನು ತುಳಿದು
ಮಳಲಿನ ಮಧ್ಯದೊಳದು ತಾನಿಳಿದು
ಮೂಲ ಬ್ರಹ್ಮದಾಕಾರದ್ಹೊಳವಿಕೆಯ
ಜೋಲಿವೊಳಗ ಪ್ರಭು ಕೋಲನ್ಹಿಡಿವಾ ||೨||

ಪೇಳ್ವೆ ಮೊದಲು ಮುನಿಪುರವೆಂಬ ನಗರಾ
ಚಲ್ವಾಯ್ತು ಮುಂದೆ ಮೈಸೂರೆಂಬ ಪೆಸರಾ
ಶಾಲಿವಾಹನ ಶಕ ಕರ್ತನೆನಸಿ ಮಹಂ-
ಕಾಳಿಗಧಿಪ ಭೂಪಾಲನೆಸಿಕೊಂಡ ||೩||

ಶೂಲಕ್ಕೆ ಹಾಕಿದ ಶಿವತಾನು ಸುತ್ತು
ಕ್ಷಣದೊಳಗದು ಶೂಲವು ಮರಳಿ ಜಿಗಿತು
ಪೊಳ್ಳ ಗಡಗಿ ಬದಿಗಿಟ್ಟು ಶಿಶುವಿನಾಳ
ಆಳುವ ದೊರೆ ಆವಿಗಿ ಹಾಕಿದ ||೪||
****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಿಸೆಲ್ ಭಾಗ್ಯ
Next post ಪದವ ಬ್ಯಾಗನೆ ಕಲಿ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys