ಊರ್‍ಗೇ ಬೇಕಾಗ್ತೀನಿ

ತಪ್ಪೇನಾದ್ರೂ ನನ್ನಲಿದ್ರೆ
ತೋರ್‍ಸಮ್ಮಾ ತೋರ್‍ಸಮ್ಮಾ,
ತಪ್ ತೋರ್‍ಸಿದ್ರೆ ತಿದ್ಕೋತೀನಿ
ಗುಡ್ ಬಾಯ್ ಆಗ್ತೀನ್ ಹೇಳಮ್ಮಾ

ಸೋಪ್ಹಾಕ್ ಒಗದ್ರೆ ಕೊಳಕಾದ್ ಅಂಗಿ
ಬೆಳ್ಳಗೆ ಆಗೋದಿಲ್ವಾಮ್ಮ?
ಹಾಗೇ ಶುದ್ಧ ಆಗ್ತೀನ್ ನಾನೂ
ಬುದ್ಧಿ ಮಾತು ಹೇಳಮ್ಮಾ

ತಪ್ ತೋರ್‍ಸಿದ್ರೆ ಅಪ್ಪನ ಹಾಗೆ
ಸಿಟ್‌ಗಿಟ್ ಮಾಡೋದಿಲ್ಲ!
ತಿದ್ಕೊಂಡ್ ಜಾಣ ಆದ್ರೆ ಮುಂದೆ
ನನಗೇ ಒಳ್ಳೇದಲ್ವ?

ಓದಿ ಬರ್‍ದು ದೊಡ್ಡೋನಾಗಿ
ಊರ್‍ಗೇ ಬೇಕಾಗ್ತೀನಿ,
ಇಂಥೋನ್ ತಾಯಿ ಎಷ್ಟ್ ಒಳ್ಳೇವ್ರೋ
ಅಂತ ಅನ್ನಿಸ್ತೀನಿ!

ತಂದೆ ತಾಯ್ಗೆ ಸ್ಕೂಲ್ಗೆ, ಕೇರಿಗೆ
ಒಳ್ಳೇ ಹೆಸ್ರು ತಂದ್ರೆ
ಎಷ್ಟೊಂದ್ ಖುಷಿ ಜನಕ್ಕೆ, ಬಳ್ಳೀ
ತುಂಬ ಹೂ ಸುರಿದ್ಹಂಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೯೫
Next post ಚೋಟಪ್ಪನ ಗೆಳೆಯರು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…