ಊರ್‍ಗೇ ಬೇಕಾಗ್ತೀನಿ

ತಪ್ಪೇನಾದ್ರೂ ನನ್ನಲಿದ್ರೆ
ತೋರ್‍ಸಮ್ಮಾ ತೋರ್‍ಸಮ್ಮಾ,
ತಪ್ ತೋರ್‍ಸಿದ್ರೆ ತಿದ್ಕೋತೀನಿ
ಗುಡ್ ಬಾಯ್ ಆಗ್ತೀನ್ ಹೇಳಮ್ಮಾ

ಸೋಪ್ಹಾಕ್ ಒಗದ್ರೆ ಕೊಳಕಾದ್ ಅಂಗಿ
ಬೆಳ್ಳಗೆ ಆಗೋದಿಲ್ವಾಮ್ಮ?
ಹಾಗೇ ಶುದ್ಧ ಆಗ್ತೀನ್ ನಾನೂ
ಬುದ್ಧಿ ಮಾತು ಹೇಳಮ್ಮಾ

ತಪ್ ತೋರ್‍ಸಿದ್ರೆ ಅಪ್ಪನ ಹಾಗೆ
ಸಿಟ್‌ಗಿಟ್ ಮಾಡೋದಿಲ್ಲ!
ತಿದ್ಕೊಂಡ್ ಜಾಣ ಆದ್ರೆ ಮುಂದೆ
ನನಗೇ ಒಳ್ಳೇದಲ್ವ?

ಓದಿ ಬರ್‍ದು ದೊಡ್ಡೋನಾಗಿ
ಊರ್‍ಗೇ ಬೇಕಾಗ್ತೀನಿ,
ಇಂಥೋನ್ ತಾಯಿ ಎಷ್ಟ್ ಒಳ್ಳೇವ್ರೋ
ಅಂತ ಅನ್ನಿಸ್ತೀನಿ!

ತಂದೆ ತಾಯ್ಗೆ ಸ್ಕೂಲ್ಗೆ, ಕೇರಿಗೆ
ಒಳ್ಳೇ ಹೆಸ್ರು ತಂದ್ರೆ
ಎಷ್ಟೊಂದ್ ಖುಷಿ ಜನಕ್ಕೆ, ಬಳ್ಳೀ
ತುಂಬ ಹೂ ಸುರಿದ್ಹಂಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೯೫
Next post ಚೋಟಪ್ಪನ ಗೆಳೆಯರು

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…