Home / ಬಾಲ ಚಿಲುಮೆ / ಕವಿತೆ / ಮರದ ಜೊತೆ ಮಾತುಕಥೆ

ಮರದ ಜೊತೆ ಮಾತುಕಥೆ

ನೆಲ: ನಿನ್ ಬೇರನ್ನ ಹೊಟೇಲಿಟ್ಟು
ಕಾಪಾಡ್ತೀನಿ ನಾನು,
ಆದ್ರೂ ನನ್ಮೇಲ್ ಒಣಗಿದ ಹೂವು
ಎಲೆ ಚೆಲ್ತೀ ನೀನು!

ಮರ: ಬಿಸಿಲಲ್ಲಿ ನೀ ಕಾಯದ ಹಾಗೆ
ಬೇಯದ ಹಾಗೆ ದಿನವೂ
ತಂಪಾಗಿರೋ ನೆರಳನ್ನೂ ಸಹ
ಚೆಲ್ತೀನಲ್ಲ ನಾನು?

ಮೋಡ: ಮಳೆಗಾಲ್ದಲ್ಲಿ ನೀರನ್ ಸುರಿಸಿ
ಒಣಗಿದ ಬೇರನ್ ತೊಯ್ಸಿ
ಕಾಪಾಡ್ತೀನಿ
ಜನಗಳು ತಿನ್ನಲಿ ಎಂದು.

ಬಿಸಿಲು: ಶಾಖ ಬೆಳಕು ಕೊಟ್ಟು ನಿನ್ನನ್
ಬೆಳೆಸ್ತೀನಲ್ಲ ಮರವೆ,
ಬದಲಿಗೆ ಯಾರ್‍ಗೂ ಏನನ್ನೂ ನೀನ್
ಕೊಡದೇ ಇರೋದು ಸರಿಯೇ?

ಮರ: ಸುತ್ತಾ ಹತ್ತೂ ಕಡೇಗೆ ನನ್ನ
ರೆಂಬೆ ಕೊಂಬೆ ಅಟ್ಟಿ
ಹಕ್ಕೀಗೂಡಿಗೆ ಸೈಟುಗಳನ್ನು
ಒದಗಿಸ್ತೀನಿ ಬಿಟ್ಟಿ!

ಮನುಷ್ಯ: ಹೂವು ಹಣ್ಣು ನೆರಳು ಕೊಟ್ಟು
ಖುಷಿ ಕೊಡ್ತೀಯಲ್ಲ,
ಅದಕ್ಕೆ ನಿನಗೆ ಏನಾದ್ರೊಂದು
ಉಪಕಾರ ನಾ ಮಾಡ್ಲ?

ಮರ: ನನ್ನನ್ ಕಡಿದು ಸೌದೆ ಮಾಡಿ
ಒಲೇಲಿ ಸುಡ್ತೀಯಲ್ಲ
ಅದನ್ನ ನಿಲ್ಸು ಸಾಕು, ಹೆಚ್ಚಿನ
ಉಪಕಾರಾನೇ ಇಲ್ಲ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...