ಈ ಮುಖ ಆ ಮುಖ

ಈ ಮಣ್ಣ ಗಡಿಗೆಯೊಳಗೆ ಅಮೃತ ಚಿಂತನ
ಆ ಚಿನ್ನದ ಕುಂಭದೊಳಗೆ ಅಮೇಧ್ಯ ವೇದನ
ಈ ತಿಪ್ಪೆಯೊಳಗಾಡಿ ಬಂತು ರನ್ನ ಮಣಿ
ಆ ಬಿಳಿಮಹಲಿನ ಹೂಹಾಸಿಗೆಯೊಳು
ಉರುಳಾಡಿ ದಣಿಯಿತು ಕಗ್ಗಲ್ಲ ಹರಳು
ಈ ಸೆರೆಗುಡಿದ, ಸೆರಗ ಹಿಡಿದ,
ಭಂಗಿ ಸೇದಿ, ಮಾಂಸ ಭುಂಜಿಸಿದ
ದೇಹದೊಳಗೆ ಹಣ್ಣು-ಕಮಲ ಪತ್ರಬಿಂದು
ಆ ತೀರ್ಥ ಕುಡಿದು ಪ್ರಸಾದಮಾತ್ರವ ತಿಂದು
ಬ್ರಹ್ಮಚರ್ಯವ ನಡೆದು
ಧರ್ಮಧೂಪವಾಸನೆ ಸೇವಿಸಿದ
ರೂಪದೊಳಗೆ ಅತ್ತಿ ಹಣ್ಣು

ಇಗೊ ಬಿಸಿಲಿಗೆಲ್ಲೋ ಮಾಯ ಇಬ್ಬನಿ
ಈ ಚಿಪ್ಪಿನೂಳಗೊಂದಾಣಿಮುತ್ತು
ಈ ಕರಟದೊಳಗೊಳ್ಳೆ ಎಳೆನೀರು
ಆ ಒಪ್ಪವಾದ ಭರಣಿಯಲಿ ಹುಳಿತ ಕಾಳು
ಆ ಬೆಳ್ಳಿ ಬಟ್ಟಲಲಿ
ದೇವರ ತೊಳೆದ ಮುಸುರೆ ನೀರು

ಈ ಸಪ್ಪೆ ಮೊಗದ ಕೆಳಗಡೆ
ಅಖಂಡಾನುಕಂಪದಾನಂದ
ಆ ಸಿಹಿನಗೆಯ ಹಿಂದೆ
ಮಸೆವ ಚೂಪಾದ ಹಲ್ಲು
ಈ ಹಣ್ಣಿನೊಳಗೆ ಭವಿತವ್ಯದ ಬೀಜ
ಆ ಹೂವಿನೊಳಗೆ ಹುಳಹರಿದಾಟ

ಈ ಮುಖವೊಂದು
ಆ ಮುಖವೊಂದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐತಿಹಾಸಿಕ ಚಿತ್ರದುರ್ಗದ ಒನಕೆ ಓಬವ್ವ : ಒಂದು ಚಿಂತನೆ
Next post ಲಿಂಗಮ್ಮನ ವಚನಗಳು – ೬೬

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys