ಕಪ್ಪು ಸೀಮೆ

ಸಾವಕಾಶವಾಗಿ
ಕಪ್ಪು ಬೆಕ್ಕು ಬಳಿಸಾರುತ್ತದೆ
ಎಂದೂ ಮಿಡಿಯದ
ಸ್ಥಾಯಿಗಳಲ್ಲಿ ತಂತಿ ಕಂಪಿಸಿ
ಅಪರಿಚಿತ ನಾದಗಳ ಹೊರಡಿಸುತ್ತವೆ
ಮೂಲೆಗುಂಪಾಗಿದ್ದ ಅಳುವುಗಳು ಬಿಕ್ಕುತ್ತವೆ
ಹತ್ತಿಕ್ಕಿದ್ದ ಅನುಭವಗಳು
ಬಯಲಾಟವಾಡುತ್ತವೆ
ಕಾಣದ ಹಕ್ಕಿಗಳ ಕೇಳದ ಹಾಡು ಕೇಳಿ ಬರುತ್ತದೆ
ಎಂದೂ ಕೇಳದ್ದರಿಂದೇನೋ
ಅವು ಚೀರಿದಂತೆನಿಸುತ್ತದೆ
ಉಸಿರಾಟದ ಭ್ರೂಣಗಳು
ಒಡಲಾಳದಿಂದ ಕೈಕಾಲು ಚಾಚುತ್ತವೆ
ಬೆಳಕಿಗೆ ತೋರಿಸಲಾರದ
ಮಸಿಬಳಿದ ಮುಖಗಳು
ತಮ್ಮ ಅಹವಾಲು ಹೇಳಿಕೊಳ್ಳುತ್ತವೆ ದ್ಯೆನ್ಯದಿಂದ
ಸಂದುಗೊಂದುಗಳಿಂದೆದ್ದು ಬಂದ ಸೈನಿಕರು
ಪಹರೆ ಸುತ್ತುತ್ತಾರೆ
ಕೋಟೆ ಕಟ್ಟುತ್ತಾರೆ ಕರ್ರಗೆ
ನಭೋಮಂಡಲದಲ್ಲೊಂದು
ಹದ್ದು ಕಪ್ಪು ಚಿಕ್ಕೆಯಾಗಿ
ಈ ಸೀಮೆಯ ಸರ್ವೆ ಮಾಡುತ್ತಿರುತ್ತದೆ
ಕಠೋರ ಸತ್ಯಗಳು
ಒಂದೊಂದೇ ಬಯಲಿಗೆ ಬಂದು
ಮೈದೋರತೊಡಗಿದಂತೆಲ್ಲಾ
ಬುದ್ಧನಾಗುವ ಭಯದಿಂದ
ಅಲ್ಲಿಂದ ದೂರ ಓಡುತ್ತೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರುಗಳು ಇಲ್ಲಿದ್ದಾರೆ
Next post ಲಿಂಗಮ್ಮನ ವಚನಗಳು – ೬೪

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys