ದೇವರಗೂಡಿನ ದೀಪದ ಹಾಗೇ

ದೇವರ ಗೂಡಿನ ದೀಪದ ಹಾಗೇ
ಅಮ್ಮನ ಕಣ್ಣೂ ಕೂಡ,
ಅಮ್ಮ ತಬ್ಕೊಂಡ್ ಮುದ್ ಮಾಡಿದ್ರೆ
ತಿಂದ್ಹಾಗಿರತ್ತೆ ಫೇಡ!

ಅಮ್ಮ ಯೋಚ್ನೆ ಮಾಡ್ತ ಇದ್ರೆ
ಮೋಡ ಮುಚ್ಚಿದ ಸಂಜೆ,
ಕುಲು ಕುಲು ನಗ್ತ ಮಾತಾಡ್ತಿದ್ರೆ
ಬೆಳಗಿನ ಬಿಸಿಲಿದ್ಹಂಗೆ.

ಅಮ್ಮ ಬೈದ್ರೂ ಇಷ್ಟ ನಂಗೆ
ಸುಳ್ಳೇ ಅಳ್ತಿರ್‍ತೀನಿ!
ಬೇಜಾರಾಯ್ತ ನನ್ ಚಿನ್ನಂಗೆ
ಅನ್ನೋದ್ ಕಾಯ್ತಿರ್‍ತೀನಿ.

ಆಗ್ಲೂ ಅಳ್ತ ಹತ್ರ ಹೋದ್ರೆ
ಅಮ್ಮ ತಬ್ಕೋತಾಳೆ,
ಕೆನ್ನೆ ಸವರಿ ತಿಂಡಿ ತಿನ್ಸಿ
ಎಷ್ಟೊಂದ್ ಮುದ್ ಮಾಡ್ತಾಳೆ!

ಅಮ್ಮ ಬೈದ್ರೆ ಒಳ್ಳೇದೇನೆ
ತಿಂಡಿ, ಮುದ್ದು ಗಟ್ಟಿ!
ಅಪ್ಪಂದ್ ಮಾತ್ರ ಬಲೇ ಕಷ್ಟ
ತಿನ್ಬೇಕ್ ಏಟು ಬಿಟ್ಟಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೬೨
ಚಿತ್ರ: ಅಪೂರ್ವ ಅಪರಿಮಿತ Next post ಮತ ವಿಮತ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys