ಸ್ವಧರ್ಮ

ಎಲ್ಲೇ ಹೋಗಲಿ ನೀರು
ಕೆಳಹರಿಯುವುದೇಕೆ?
ಎಷ್ಟೇ ಒತ್ತಿದರು ಚಿಲುಮೆ
ಮೇಲುಕ್ಕುವುದೇಕೆ ?
ಮತ್ತೆ ಮತ್ತೆ ಕಡಿದರು ಮರ
ಸಿಟ್ಟು ಸೆಡವು ಮಾಡದೆ
ಎಂದಿನ ಹಾಗೇ ಮತ್ತೆ
ಫಲ ನೀಡುವುದೇಕೆ ?

ನೀರಿಗೆ ಸ್ವಧರ್ಮ ಮುಖ್ಯ
ಹರಿಯುವುದೇ ಧ್ಯೇಯ,
ಚಿಲುಮೆಗು ಮರಕ್ಕು ಅಷ್ಟೇ
ಚಿಮ್ಮುವುದೇ ಕಾರ್ಯ;
ಸ್ಥಧರ್ಮವೆಂದರೆ ಎಷ್ಟೂ
ಸ್ವಂತಕ್ಕಾಗಿರದೆ
ತನ್ನ ತಾನು ಉರಿಸಬೇಕು
ಉರಿಯುವಂತೆ ಸೂರ್ಯ.

ಸದಾ ಈ ನಡೆಯಲ್ಲೇ
ಆಡಿದೆ ಜಡಪ್ರಕೃತಿ,
ಸ್ವಧರ್ಮದಲ್ಲಿರು ಎಂದ
ಕೃಷ್ಣನಂಥ ಪ್ರಭೃತಿ:
ಸ್ವಧರ್ಮ ಎಂದರೆ ಋತ,
ಸೃಷ್ಟಿ ಎನುವ ರಥ
ಸುಲಲಿತ ಚಲಿಸಲಿ ಎಂದು
ರೂಪಿಸಿಟ್ಟ ಪಥ.

ಋತವೇ, ಪಥದೊಳಗೆಳೆದುಕೊ
ಸ್ವಾರ್ಥಿ ಮನುಜನನ್ನು;
ಬುದ್ಧಿಯುಟ್ಟು ಧರ್ಮದಿಂದ
ಹೊರನಡೆದವನನ್ನು;
ಇಂದ್ರಿಯಗಳನೂರಿ ಜಗವ
ಹೀರುವ ಭರದಲ್ಲಿ
ಬಾಳಿನ ನಿಜಸೌಂದರ್ಯಕೆ
ಕುರುಡಾದವನನ್ನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುಟುಕು
Next post ಮೋಹನ ಗಿರಿಧರ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…