ಸ್ವಧರ್ಮ

ಎಲ್ಲೇ ಹೋಗಲಿ ನೀರು
ಕೆಳಹರಿಯುವುದೇಕೆ?
ಎಷ್ಟೇ ಒತ್ತಿದರು ಚಿಲುಮೆ
ಮೇಲುಕ್ಕುವುದೇಕೆ ?
ಮತ್ತೆ ಮತ್ತೆ ಕಡಿದರು ಮರ
ಸಿಟ್ಟು ಸೆಡವು ಮಾಡದೆ
ಎಂದಿನ ಹಾಗೇ ಮತ್ತೆ
ಫಲ ನೀಡುವುದೇಕೆ ?

ನೀರಿಗೆ ಸ್ವಧರ್ಮ ಮುಖ್ಯ
ಹರಿಯುವುದೇ ಧ್ಯೇಯ,
ಚಿಲುಮೆಗು ಮರಕ್ಕು ಅಷ್ಟೇ
ಚಿಮ್ಮುವುದೇ ಕಾರ್ಯ;
ಸ್ಥಧರ್ಮವೆಂದರೆ ಎಷ್ಟೂ
ಸ್ವಂತಕ್ಕಾಗಿರದೆ
ತನ್ನ ತಾನು ಉರಿಸಬೇಕು
ಉರಿಯುವಂತೆ ಸೂರ್ಯ.

ಸದಾ ಈ ನಡೆಯಲ್ಲೇ
ಆಡಿದೆ ಜಡಪ್ರಕೃತಿ,
ಸ್ವಧರ್ಮದಲ್ಲಿರು ಎಂದ
ಕೃಷ್ಣನಂಥ ಪ್ರಭೃತಿ:
ಸ್ವಧರ್ಮ ಎಂದರೆ ಋತ,
ಸೃಷ್ಟಿ ಎನುವ ರಥ
ಸುಲಲಿತ ಚಲಿಸಲಿ ಎಂದು
ರೂಪಿಸಿಟ್ಟ ಪಥ.

ಋತವೇ, ಪಥದೊಳಗೆಳೆದುಕೊ
ಸ್ವಾರ್ಥಿ ಮನುಜನನ್ನು;
ಬುದ್ಧಿಯುಟ್ಟು ಧರ್ಮದಿಂದ
ಹೊರನಡೆದವನನ್ನು;
ಇಂದ್ರಿಯಗಳನೂರಿ ಜಗವ
ಹೀರುವ ಭರದಲ್ಲಿ
ಬಾಳಿನ ನಿಜಸೌಂದರ್ಯಕೆ
ಕುರುಡಾದವನನ್ನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುಟುಕು
Next post ಮೋಹನ ಗಿರಿಧರ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys