ಯದುಮಣಿಯ ಜನುಮದಿನ

ಯಾದವರ ಜಿವಸುಳಿ ವುರಿಗೆರೆಯು ಮೈಸೂರು
ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು
ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು

ಆದಿಯಿಂ ರಾಜ ಕಂಠೀರವರ ದೇವಚಾ
ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ
ಮೋದದಲಿ ರಾಜಸಿರಿ ಹಾದಿಯಲಿ ಎಣಿಸಿಹಳು ಮಹಿಷರ ನೆನಹಿನಲ್ಲಿ

ದಳವಿ ನ್ನೊಂದರಳುತಲಿದೆ ನೋಡಿರಿ
ತಿಳಿಹೃದಯದ ತೆರೆ ತೆಗೆಯುತಲಿರುವುದು
ತಿಳಿ! ಯಾದವ ಶಕುತಿಯ ದಳವೆದ್ದಿತು! ಈ ದಿನ ಜನುಮದಿನ

ಸುಳಿಸುಳಿ ಕಂಪಿನ ಸುಳಿಯಲಿ ಪ್ರಜೆಗಳು
ಕಳಕಳ ರವದಲಿ ಕೂಡುತ ಹರಿದರು
ಇಳೆಯೊಳು ಹೊಸದಿನ ವೊಂದುರಿಯುತಲಿದೆ ಕಾಂತಿಯ ನೋಡೆನುತ

ವನವನಾಂ ತರದಿಂದ ಹೊರಸೂಸು ತಿರಸುರಭಿ
ಘನಪಥದಲತಿಥಿ ಜನ ಮನಮರೆದು ಸುಳಿಸುಳಿಯೆ
ಸನುಮತದ ಸುಳಿಯಿಡುತ ಚಿರದಿನದ ಗೆಳೆತನವು
ಬಲು ಬಿರಿದು ಸುರಿಯೆ ಮಧುವು

ಮನವರಳಿ ಕಂಪೊಗೆಯೆ ಮಹಿಷೂರ ನಾಡೊಳಗೆ
ಜನುಮದಿನ ಜನವಿದಕೆ! ಜನುಮದಿನ ಯಾದವರ
ಘನಜೋತಿಲತೆಗಿದುವೆ! ಜನುಮದಿನ ವೈಭವಕೆ!
ಜನುಮದಿನ! ಸುಖಶಾಂತಿಗೆ

ಜಗದಲಿ ಕೋಲಾ ಹಲವಿದು ಹೊಳಲಿಡೆ
ಚಿಗುರಲು ಹೊಸದಿನ ವರಳಲು ರವಿಸುಮ
ಬಗೆಬಗೆ ನಿಧಿಗಳ ನೊಗೆದಿಡೆ ಧರಣಿಯು ಕೈಗಾಣಿಕೆಯೆನುತ

ಮಿಗೆಸವಿ ಪುರುಳನು ಪ್ರಜೆಗಳು ತರುತಿರೆ
ಸೊಗೆಯಿಪ ನೆನಹವು ಹಾರುತಬರುತಿರೆ
ಗಗನಕೆ ನೆಗೆದಿತು ಹಳದಿನದಂಚೆಯು ಹೊಸದಿನ ದನಿಗೊಡಲು

ನುಂಗುತಲಿ ಮಲಗೆದ್ದು ಹಳೆದಿನದ ದುಗುಡಗಳ
ಸಂಗಡಲೆ ಚಿಗಿದೆದ್ದು ಗಂಡಭೇರುಂಡವದು
ಕಂಗಳಿರೆ ಭರವಸೆಯ ಜೋತಿಯೆರಡೆನುವಂತೆ ಮೀಯುತಿರೆ ಆಗಸದಲಿ

ಕೆಂಗಿರುಣದಲಿ ಮಿಂದು ಯದುಮಣಿಯ ಮನವಿಂದು
ಸಿಂಗರಿಸಿ ಕೈಬಿಗಿದ ಜನವೃಂದವನು ಬಿಗಿದು
ಕಂಗಳಾಹೊಳಹಿನಲಿ! ಕಂಬನಿಯ ಮಿಡಿಯೆ! ನವ
ಜೀವಕಾದಿಯಿದು! ಎನುತ

ಮಂಜುಳ ರವವೇ ನೆನ್ನುತ ಚಿನನ
ಕಂಜಗಳರಳಲು ಕೇಶವಗವಿಯಿಂ
ದಂಜುತ ಬರುತಲೆ ಗೊಂದಲ ವೇನನೆ! ಚಂಡಿಯು ನಸುನಗಲು

“ನಂಜಿನ ಕೋರೆಯು ಸಡಲಿವೆಕಾಲಗೆ!
ಆಂಜದಿರಂಜದಿರವಮುಳಿದರೆ! ನೀ”
ನಂಜನಗೂಡಲಿ ಧೈರ್ಯದ ನುಡಿಬರೆ ಕೊಂಡಿಯು ಸಡಲಿದವು

ದಿನದೇರು ಬಹಮುಂದೆ ಬಿಳಿಗೊಳದ ಕಳಶದಲಿ
ಹನಿಸಿಡುವೆ ಸೈಕತವ ಗೋದೆಯಲಿ ನಾಮಿಂದು
ಮನವಾಜಿಯೇರುತಲಿ ತುಂಬುವೆನು ತುಂಗೆಯಲಿ
ಭದ್ರೆಯಲಿ ಶುಭಜಲವನು

ವನಪಥವ ಕಾವೇರಿ ಬಿಡುವುದರ ಮುಮ್ಮುಂದೆ
ಹನಿಸಿಡುವೆ ಕಳಶಕ್ಕೆ! ಶಿರಿಯುಗದ ಜೀವನವ!
ಘನಪಾದವೆರಡನ್ನು ತೊಳೆಯುವೆನು ಬಾ! ವಿಭುವೆ!
ಕರುನಾಡ ಹೃದಯದಲ್ಲಿ

ನಲಿದೆದ್ದು ಹಂಪೆಯಲಿ ಶಿಖಿಯೆತ್ತೆ ಕೊಳಲನ್ನು
ಜಲ! ಜೋಗ ಪಾತ್ರದಲ್ಲಿ ಜಯಘೋಷ ಮಾಡುತಿರೆ
ತಿಳಿನೆನಹ ಗಂಗರಸ ಚಾಲುಕ್ಯ ಹೊಯ್ಸಳರು
ಶುಭದಿನವು ! ಸಾಧುವೆನಲು

ಅಲೆಯೆದ್ದು ತೀರಗಳ ನಪ್ಪುತಲೆ ಬೆಳೆಯಿರೆನೆ
ಕಳಕಳವು ಕಾಳೆಯಿಡಲರಿವಿನಟಿವಿಯ ದೂರಿ
ಘಳಿರನಿದೂ! ವೈತಾಳಿ! ಮಹಿಷೂರಮಂಗಳಕೆ
ಶ್ರೀ ಕೃಷ್ಣ ಏಳೆನುತಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರದ ಬಯಕೆ
Next post ಗಾಯಗಳು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys