ಚಹರೆಪಟ್ಟಿ

ರಿಕಾರ್ಡು ಬರೆದುಕೋ.
ನಾನು ಅರಬ.
ನನ್ನ ಕಾರ್ಡಿನ ನಂಬರು ಐವತ್ತುಸಾವಿರ.
ಎಂಟು ಮಕ್ಕಳು.
ಒಂಬತ್ತನೆಯದು ಈ ಬೇಸಗೆಯಲ್ಲಿ ಆಗಲಿದೆ.
ಇದಕ್ಕೆ ಕೋಪ ಯಾಕೆ?
ರಿಕಾರ್ಡು ಬರೆದುಕೋ.

ನಾನು ಅರಬ
ಗೆಳೆಯರೊಡನೆ ಕಲ್ಲಿನ ಕ್ವಾರಿಯಲ್ಲಿ ಕೆಲಸ.
ಎಂಟು ಮಕ್ಕಳು.
ಅವರ ಬ್ರೆಡ್ಡಿಗೆ, ಬಟ್ಟೆಗೆ, ಸ್ಕೂಲು ಪುಸ್ತಕಕ್ಕೆ
ಕಲ್ಲು ಕದಿಯುತ್ತೇನೆ.
ನಿಮ್ಮ ಮನೆ ಬಾಗಿಲಿಗೆ ಭಿಕ್ಷಕ್ಕೆ ಬಂದಿಲ್ಲವಲ್ಲ,
ನಿಮ್ಮಕಾಲಿಗೆ ಬಿದ್ದು ಬೇಡಿಲ್ಲವಲ್ಲ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ಬಿರುದಿಲ್ಲದ ಹೆಸರಿನವನು,
ಕೋಪದ ಸುಳಿಗೆ ಸಿಕ್ಕ ದೇಶದಲ್ಲಿ
ತಾಳ್ಮೆಯಿಂದ ಇರುವವನು.
ನನ್ನ ಬೇರು ಕಾಲದ ಆದಿಗಿಂತ ಹಳೆಯದು.
ಸಮುದ್ರಗಳು ಹುಟ್ಟುವ ಮುನ್ನ
ಸೈಪ್ರಸ್ಸು ಆಲಿವ್ವು ಮರಗಳು ಹುಟ್ಟುವ ಮುನ್ನ
ಜೊಂಡು ಬೆಳೆಯುವ ಮುನ್ನ
ಮುನ್ನ ಎಂಬ ಮುನ್ನ ಬೇರು ಬಿಟ್ಟಿದ್ದೆ.
ನಮ್ಮಪ್ಪ ನೇಗಿಲ ಕುಲದಿಂದ ಬಂದವನು,
ಶ್ರೀಮಂತ ಸರದಾರನಲ್ಲ,
ನಮ್ಮ ತಾತನೂ ರೈತ.
ವಂಶವೃಕ್ಷವಿಲ್ಲದವನು.
ನಮ್ಮ ಮನೆ
ಕೋಲು ಹೂತು ಹುಲ್ಲು ಹೊದಿಸಿದ ಗುಡಿಸಲು.
ನನ್ನ ಸ್ಥಿತಿಯಿಂದ ಸಮಾಧಾನವಾಯಿತೇ?
ನನ್ನ ಹೆಸರಿನ ಜೊತೆಗೆ ಮನೆತನದ ಹೆಸರು ಇಲ್ಲ.
ರಿಕಾರ್ಡು ಬರೆದುಕೋ.

ನಾನು ಅರಬ.
ಕೂದಲ ಬಣ್ಣ : ದಟ್ಟ ಕಪ್ಪು.
ಕಣ್ಣಿನ ಬಣ್ಣ : ಕಂದು.
ನನ್ನ ಗುರುತಿನ ಚಹರೆ : ನೆತ್ತಿಯ ಮೇಲೆ
ಮುಟ್ಟಿದವರ ಕೈ ಸೀಯಿಸಿಬಿಡುವ
ಮಂತ್ರಾಕ್ಷರಗಳಿವೆ ‘ಇಖಾಲ್’ ನೊಡನೆ ‘ಖೆಫಿಯೆ’
ನನ್ನವಿಳಾಸ : ದೂರದ, ಎಲ್ಲರೂ ಮರೆತ, ಹೆಸರಿಲ್ಲದ ಬೀದಿಗಳ,
ಎಲ್ಲರೂ ಕ್ವಾರಿಯಲ್ಲಿ ಹೊಲದಲ್ಲಿ ದುಡಿಯುವ
ಒಂದು ಹಳ್ಳಿ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ನೀವು ನಮ್ಮತಾತಂದಿರ ದ್ರಾಕ್ಷಿ ತೋಟ ಕದ್ದಿರಿ.
ನಾನು ದುಡಿಯುತ್ತಿದ್ದೆ
ನನ್ನಮಕ್ಕಳು ದುಡಿಯುತ್ತಿದ್ದರು.
ನನಗೆ ನನ್ನ ಮೊಮ್ಮಕ್ಕಳಿಗೆ
ಈ ಕಲ್ಲು ಬಂಡೆ ಮಾತ್ರ ಬಿಟ್ಟಿದ್ದೀರಿ.
ಸರ್ಕಾರ ಇದನ್ನೂ ತೆಗೆದುಕೊಳ್ಳುತ್ತೆಂದು ಹೇಳುತ್ತಾರೆ.
ಹೌದೆ ?

ಹೀಗೆ!
ರಿಕಾರ್ಡು ಬರೆದುಕೋ, ಮೊದಲ ಪುಟದ ಮೇಲುಗಡೆ :
ನನಗೆ ಜನರನ್ನು ಕಂಡರೆ ದ್ವೇಷವಿಲ್ಲ.
ನಾನು ಯಾರ ಜಮೀನಿನೊಳಗೂ ಕಾಲಿಡುವುದಿಲ್ಲ.
ಆದರೂ, ನನಗೆ ಹಸಿವಾದರೆ
ನನ್ನನ್ನು ಓಡಿಸಿದವರ ಮಾಂಸ ತಿನ್ನುತ್ತೇನೆ.
ಹುಷಾರು, ನನ್ನ ಹಸಿವಿನ ಬಗ್ಗೆಹುಷಾರು!
ನನ್ನ ಕೋಪದ ಬಗ್ಗೆ ಹುಷಾರು!
*****
ಮೂಲ: ಮಹಮೂದ್ ದರ್‍ವೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾವಿನ ಹಾಡು
Next post ಆರ್ಥಿಕಾಭಿವೃದ್ಧಿಯಲ್ಲಿ ಹಣದ ಪಾತ್ರ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys