Home / ಕವನ / ಅನುವಾದ / ಮನುಷ್ಯನ ಬದುಕಿನಲ್ಲಿ

ಮನುಷ್ಯನ ಬದುಕಿನಲ್ಲಿ

ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ,
ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ…
ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು.
ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು.
ಅಳುವುದಕ್ಕೂ ನಗುವುದಕ್ಕೂ ಅವೇ ಎರಡೇ ಕಣ್ಣು.
ಕಲ್ಲು ಎತ್ತಿಕೊಳ್ಳುವುದಕ್ಕೂ ಮತ್ತೆ ಎಸೆಯುವುದಕ್ಕೂ ಅವೇ ಎರಡೇ ಕೈ,
ಮನುಷ್ಯ ಪ್ರೀತಿಯಲ್ಲಿ ಯುದ್ಧ, ಮತ್ತೆ ಯುದ್ದದಲ್ಲೇ ಪ್ರೀತಿ ಮಾಡಬೇಕು.
ಚರಿತ್ರೆಗೆ ಎಷ್ಟೋ ಶತಮಾನದ ಹಿಡಿದದ್ದನ್ನು
ತನ್ನ ಆಯುಷ್ಯದಲ್ಲೆ ದ್ವೇಷಿಸಬೇಕು ಕ್ಷಮಿಸಬೇಕು,
ನೆನೆಯಬೇಕು ಮತ್ತೆ ಮರೆಯಬೇಕು,
ವ್ಯವಸ್ಥೆಗೊಳಿಸಿ ಅವ್ಯವಸ್ಥೆಗೊಳಿಸಿ, ತಿನ್ನಬೇಕು ಮತ್ತೆ ಅರಗಿಸಿಕೊಳ್ಳಬೇಕು.
ಹುಡುಕಿದ್ದನ್ನು ಕಳೆದುಕೊಳ್ಳುತ್ತಾ
ಸಿಕ್ಕಿದಾಗ ಮರೆಯುತ್ತಾ
ಮರೆತಾಗ ಪ್ರೀತಿಸುತ್ತಾ
ಪ್ರೀತಿಸಿದಾಗ ಮರೆಯುತ್ತಾ ಇರುವಾಗ
ಮನುಷ್ಯನ ಬದುಕಿನಲ್ಲಿ ಯಾವುದಕ್ಕೂ ಸಮಯವೇ ಇಲ್ಲ
ಆತ್ಮಸದಾ ಜ್ಞಾನಿ, ಸದಾ ಪರಿಣತ,
ಆದರೆ ದೇಹ ಮಾತ್ರ ಸದಾಕಾಲಕ್ಕೂ ಹವ್ಯಾಸಿ :
ಪ್ರಯತ್ನ ಪಡುತ್ತದೆ, ತಡಕಾಡುತ್ತದೆ, ಎಡವುತ್ತದೆ.
ಏನೂ ಕಲಿಯದೆ ಎಲ್ಲ ಗೊಂದಲ,
ನೋವಿನಲ್ಲೂ ನಲಿವಿನಲ್ಲೂ ಕುಡಿದು ಮತ್ತ, ಕುರುಡ.
ಶರತ್ ಕಾಲದ ಅಂಜೂರದಂತೆ ಸಾಯುತ್ತಾನೆ ಮನುಷ್ಯ.
ಒಣಗಿ, ಕುಗ್ಗಿ ಸಿಹಿಯಾಗಿ, ತನ್ನೊಳಗೆ ತಾನೇ ತುಂಬಿ.
ಉದುರಿದ ಎಲೆಗಳು ಒಣಗುತ್ತವೆ;
ಒಣ ಬತ್ತಲೆ ರೆಂಬೆಗಳು
ಎಲ್ಲಕ್ಕೂ ಯಾವಾಗಲೂ ಸಮಯವೇ ಸಮಯವಿರುವ
ತಾಣದತ್ತ ಬೆರಳು ಮಾಡಿತೋರುತ್ತವೆ.
*****
ಮೂಲ: ಯೆಹೂದಾ ಅಮಿಛಾಯ್

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್