ಮನುಷ್ಯನ ಬದುಕಿನಲ್ಲಿ

ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ,
ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ…
ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು.
ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು.
ಅಳುವುದಕ್ಕೂ ನಗುವುದಕ್ಕೂ ಅವೇ ಎರಡೇ ಕಣ್ಣು.
ಕಲ್ಲು ಎತ್ತಿಕೊಳ್ಳುವುದಕ್ಕೂ ಮತ್ತೆ ಎಸೆಯುವುದಕ್ಕೂ ಅವೇ ಎರಡೇ ಕೈ,
ಮನುಷ್ಯ ಪ್ರೀತಿಯಲ್ಲಿ ಯುದ್ಧ, ಮತ್ತೆ ಯುದ್ದದಲ್ಲೇ ಪ್ರೀತಿ ಮಾಡಬೇಕು.
ಚರಿತ್ರೆಗೆ ಎಷ್ಟೋ ಶತಮಾನದ ಹಿಡಿದದ್ದನ್ನು
ತನ್ನ ಆಯುಷ್ಯದಲ್ಲೆ ದ್ವೇಷಿಸಬೇಕು ಕ್ಷಮಿಸಬೇಕು,
ನೆನೆಯಬೇಕು ಮತ್ತೆ ಮರೆಯಬೇಕು,
ವ್ಯವಸ್ಥೆಗೊಳಿಸಿ ಅವ್ಯವಸ್ಥೆಗೊಳಿಸಿ, ತಿನ್ನಬೇಕು ಮತ್ತೆ ಅರಗಿಸಿಕೊಳ್ಳಬೇಕು.
ಹುಡುಕಿದ್ದನ್ನು ಕಳೆದುಕೊಳ್ಳುತ್ತಾ
ಸಿಕ್ಕಿದಾಗ ಮರೆಯುತ್ತಾ
ಮರೆತಾಗ ಪ್ರೀತಿಸುತ್ತಾ
ಪ್ರೀತಿಸಿದಾಗ ಮರೆಯುತ್ತಾ ಇರುವಾಗ
ಮನುಷ್ಯನ ಬದುಕಿನಲ್ಲಿ ಯಾವುದಕ್ಕೂ ಸಮಯವೇ ಇಲ್ಲ
ಆತ್ಮಸದಾ ಜ್ಞಾನಿ, ಸದಾ ಪರಿಣತ,
ಆದರೆ ದೇಹ ಮಾತ್ರ ಸದಾಕಾಲಕ್ಕೂ ಹವ್ಯಾಸಿ :
ಪ್ರಯತ್ನ ಪಡುತ್ತದೆ, ತಡಕಾಡುತ್ತದೆ, ಎಡವುತ್ತದೆ.
ಏನೂ ಕಲಿಯದೆ ಎಲ್ಲ ಗೊಂದಲ,
ನೋವಿನಲ್ಲೂ ನಲಿವಿನಲ್ಲೂ ಕುಡಿದು ಮತ್ತ, ಕುರುಡ.
ಶರತ್ ಕಾಲದ ಅಂಜೂರದಂತೆ ಸಾಯುತ್ತಾನೆ ಮನುಷ್ಯ.
ಒಣಗಿ, ಕುಗ್ಗಿ ಸಿಹಿಯಾಗಿ, ತನ್ನೊಳಗೆ ತಾನೇ ತುಂಬಿ.
ಉದುರಿದ ಎಲೆಗಳು ಒಣಗುತ್ತವೆ;
ಒಣ ಬತ್ತಲೆ ರೆಂಬೆಗಳು
ಎಲ್ಲಕ್ಕೂ ಯಾವಾಗಲೂ ಸಮಯವೇ ಸಮಯವಿರುವ
ತಾಣದತ್ತ ಬೆರಳು ಮಾಡಿತೋರುತ್ತವೆ.
*****
ಮೂಲ: ಯೆಹೂದಾ ಅಮಿಛಾಯ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?
Next post ಪ್ರಶ್ನೆಯೋ ಉತ್ತರವೋ?

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys