ಮನುಷ್ಯನ ಬದುಕಿನಲ್ಲಿ

ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ,
ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ…
ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು.
ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು.
ಅಳುವುದಕ್ಕೂ ನಗುವುದಕ್ಕೂ ಅವೇ ಎರಡೇ ಕಣ್ಣು.
ಕಲ್ಲು ಎತ್ತಿಕೊಳ್ಳುವುದಕ್ಕೂ ಮತ್ತೆ ಎಸೆಯುವುದಕ್ಕೂ ಅವೇ ಎರಡೇ ಕೈ,
ಮನುಷ್ಯ ಪ್ರೀತಿಯಲ್ಲಿ ಯುದ್ಧ, ಮತ್ತೆ ಯುದ್ದದಲ್ಲೇ ಪ್ರೀತಿ ಮಾಡಬೇಕು.
ಚರಿತ್ರೆಗೆ ಎಷ್ಟೋ ಶತಮಾನದ ಹಿಡಿದದ್ದನ್ನು
ತನ್ನ ಆಯುಷ್ಯದಲ್ಲೆ ದ್ವೇಷಿಸಬೇಕು ಕ್ಷಮಿಸಬೇಕು,
ನೆನೆಯಬೇಕು ಮತ್ತೆ ಮರೆಯಬೇಕು,
ವ್ಯವಸ್ಥೆಗೊಳಿಸಿ ಅವ್ಯವಸ್ಥೆಗೊಳಿಸಿ, ತಿನ್ನಬೇಕು ಮತ್ತೆ ಅರಗಿಸಿಕೊಳ್ಳಬೇಕು.
ಹುಡುಕಿದ್ದನ್ನು ಕಳೆದುಕೊಳ್ಳುತ್ತಾ
ಸಿಕ್ಕಿದಾಗ ಮರೆಯುತ್ತಾ
ಮರೆತಾಗ ಪ್ರೀತಿಸುತ್ತಾ
ಪ್ರೀತಿಸಿದಾಗ ಮರೆಯುತ್ತಾ ಇರುವಾಗ
ಮನುಷ್ಯನ ಬದುಕಿನಲ್ಲಿ ಯಾವುದಕ್ಕೂ ಸಮಯವೇ ಇಲ್ಲ
ಆತ್ಮಸದಾ ಜ್ಞಾನಿ, ಸದಾ ಪರಿಣತ,
ಆದರೆ ದೇಹ ಮಾತ್ರ ಸದಾಕಾಲಕ್ಕೂ ಹವ್ಯಾಸಿ :
ಪ್ರಯತ್ನ ಪಡುತ್ತದೆ, ತಡಕಾಡುತ್ತದೆ, ಎಡವುತ್ತದೆ.
ಏನೂ ಕಲಿಯದೆ ಎಲ್ಲ ಗೊಂದಲ,
ನೋವಿನಲ್ಲೂ ನಲಿವಿನಲ್ಲೂ ಕುಡಿದು ಮತ್ತ, ಕುರುಡ.
ಶರತ್ ಕಾಲದ ಅಂಜೂರದಂತೆ ಸಾಯುತ್ತಾನೆ ಮನುಷ್ಯ.
ಒಣಗಿ, ಕುಗ್ಗಿ ಸಿಹಿಯಾಗಿ, ತನ್ನೊಳಗೆ ತಾನೇ ತುಂಬಿ.
ಉದುರಿದ ಎಲೆಗಳು ಒಣಗುತ್ತವೆ;
ಒಣ ಬತ್ತಲೆ ರೆಂಬೆಗಳು
ಎಲ್ಲಕ್ಕೂ ಯಾವಾಗಲೂ ಸಮಯವೇ ಸಮಯವಿರುವ
ತಾಣದತ್ತ ಬೆರಳು ಮಾಡಿತೋರುತ್ತವೆ.
*****
ಮೂಲ: ಯೆಹೂದಾ ಅಮಿಛಾಯ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?
Next post ಪ್ರಶ್ನೆಯೋ ಉತ್ತರವೋ?

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…