Home / ಕವನ / ಅನುವಾದ / ಮನುಷ್ಯನ ಬದುಕಿನಲ್ಲಿ

ಮನುಷ್ಯನ ಬದುಕಿನಲ್ಲಿ

ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ,
ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ…
ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು.
ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು.
ಅಳುವುದಕ್ಕೂ ನಗುವುದಕ್ಕೂ ಅವೇ ಎರಡೇ ಕಣ್ಣು.
ಕಲ್ಲು ಎತ್ತಿಕೊಳ್ಳುವುದಕ್ಕೂ ಮತ್ತೆ ಎಸೆಯುವುದಕ್ಕೂ ಅವೇ ಎರಡೇ ಕೈ,
ಮನುಷ್ಯ ಪ್ರೀತಿಯಲ್ಲಿ ಯುದ್ಧ, ಮತ್ತೆ ಯುದ್ದದಲ್ಲೇ ಪ್ರೀತಿ ಮಾಡಬೇಕು.
ಚರಿತ್ರೆಗೆ ಎಷ್ಟೋ ಶತಮಾನದ ಹಿಡಿದದ್ದನ್ನು
ತನ್ನ ಆಯುಷ್ಯದಲ್ಲೆ ದ್ವೇಷಿಸಬೇಕು ಕ್ಷಮಿಸಬೇಕು,
ನೆನೆಯಬೇಕು ಮತ್ತೆ ಮರೆಯಬೇಕು,
ವ್ಯವಸ್ಥೆಗೊಳಿಸಿ ಅವ್ಯವಸ್ಥೆಗೊಳಿಸಿ, ತಿನ್ನಬೇಕು ಮತ್ತೆ ಅರಗಿಸಿಕೊಳ್ಳಬೇಕು.
ಹುಡುಕಿದ್ದನ್ನು ಕಳೆದುಕೊಳ್ಳುತ್ತಾ
ಸಿಕ್ಕಿದಾಗ ಮರೆಯುತ್ತಾ
ಮರೆತಾಗ ಪ್ರೀತಿಸುತ್ತಾ
ಪ್ರೀತಿಸಿದಾಗ ಮರೆಯುತ್ತಾ ಇರುವಾಗ
ಮನುಷ್ಯನ ಬದುಕಿನಲ್ಲಿ ಯಾವುದಕ್ಕೂ ಸಮಯವೇ ಇಲ್ಲ
ಆತ್ಮಸದಾ ಜ್ಞಾನಿ, ಸದಾ ಪರಿಣತ,
ಆದರೆ ದೇಹ ಮಾತ್ರ ಸದಾಕಾಲಕ್ಕೂ ಹವ್ಯಾಸಿ :
ಪ್ರಯತ್ನ ಪಡುತ್ತದೆ, ತಡಕಾಡುತ್ತದೆ, ಎಡವುತ್ತದೆ.
ಏನೂ ಕಲಿಯದೆ ಎಲ್ಲ ಗೊಂದಲ,
ನೋವಿನಲ್ಲೂ ನಲಿವಿನಲ್ಲೂ ಕುಡಿದು ಮತ್ತ, ಕುರುಡ.
ಶರತ್ ಕಾಲದ ಅಂಜೂರದಂತೆ ಸಾಯುತ್ತಾನೆ ಮನುಷ್ಯ.
ಒಣಗಿ, ಕುಗ್ಗಿ ಸಿಹಿಯಾಗಿ, ತನ್ನೊಳಗೆ ತಾನೇ ತುಂಬಿ.
ಉದುರಿದ ಎಲೆಗಳು ಒಣಗುತ್ತವೆ;
ಒಣ ಬತ್ತಲೆ ರೆಂಬೆಗಳು
ಎಲ್ಲಕ್ಕೂ ಯಾವಾಗಲೂ ಸಮಯವೇ ಸಮಯವಿರುವ
ತಾಣದತ್ತ ಬೆರಳು ಮಾಡಿತೋರುತ್ತವೆ.
*****
ಮೂಲ: ಯೆಹೂದಾ ಅಮಿಛಾಯ್

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...