ಜೋಲಿಯಾಟದ ಜಗತ್ತು

ಆಗೊಮ್ಮೆ ಈಗೊಮ್ಮೆ ಜಗದ
ನಿಯಮಗಳು ಬದಲಾಗುತ್ತವೆ.
ಬಿಸಿನೀರಿನಲ್ಲೂ ಜೀವಜಗತ್ತು
ತೆರೆದು ಕೊಳ್ಳುತ್ತದೆ.

ಸಾಗರದ ಬುಡವೂ ನಿಗಿನಿಗಿ ಉರಿಯುತ್ತದೆ.
ಎದೆಯ ಕಡಲಿಗೂ ಬೆಂಕಿ
ಇಳಿಯುತ್ತದೆ,

ಅನ್ವೇಷಣೆಯ ಆಲಂಬನ
ವ್ಯತ್ಯಾಸಗೊಂಡಿದ್ದು ವ್ಯಸನದಿಂದಲೇ
ದೃಷ್ಟಾರರು ನೆಪಮಾತ್ರ ಆಗಿ ಬಿಡುತ್ತಾರೆ

ಮಾತು ಸತ್ತ ಮನಸ್ಸುಗಳು
ಭಾವಶೂನ್ಯತೆಯಲ್ಲಿ ರೂಪಾಂತರಗೊಳ್ಳುತ್ತವೆ
ಕರಕಲು ಕಲ್ಲಿದ್ದಲಿ ರಾಶಿ ಕೆಂಡದಂಗಡಿ
ಮೇಲಿಂದ ಮೇಲೆ ಎದ್ದು
ಒಳಹೊರಗಿನ ರತ್ನಗಂಬಳಿಗಳು
ಕೊಚ್ಚೆ ಮೆತ್ತಿಕೊಂಡಿವೆ.

ಅಕ್ಷರದ ನೆಲೆಯಲ್ಲೂ ರೂಕ್ಷ
ರಕ್ತ ಪಿಪಾಸುಗಳು
ಮಾಂಸಕ್ಕೆ ಮುತ್ತುವ ನೊಣಗಳು
ಮೈತಾಳುತ್ತವೆ.

ಸಂತೆಯಲ್ಲಿ ಅಪ್ಪಚ್ಚಿಯಾಗುತ್ತವೆ
ಹಾರುವ ಅಭಿಲಾಷೆಗೆ ರೆಕ್ಕೆ ಕಟ್ಟಿಕೊಂಡ
ಚಿಟ್ಟೆಗಳು
ಪ್ರೇಮ ಮತ್ತು ಮಸಣಗಳು
ಒಂದೇ ತೊಟ್ಟಿಲಲ್ಲಿ ಜೋಕಾಲಿಯಾಡುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದ್ದವರು, ಇಲ್ಲದವರು
Next post ಜಾತಿಗಳೇ ಜೈಲಾಗದಿರಿ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys