ಜೋಲಿಯಾಟದ ಜಗತ್ತು

ಆಗೊಮ್ಮೆ ಈಗೊಮ್ಮೆ ಜಗದ
ನಿಯಮಗಳು ಬದಲಾಗುತ್ತವೆ.
ಬಿಸಿನೀರಿನಲ್ಲೂ ಜೀವಜಗತ್ತು
ತೆರೆದು ಕೊಳ್ಳುತ್ತದೆ.

ಸಾಗರದ ಬುಡವೂ ನಿಗಿನಿಗಿ ಉರಿಯುತ್ತದೆ.
ಎದೆಯ ಕಡಲಿಗೂ ಬೆಂಕಿ
ಇಳಿಯುತ್ತದೆ,

ಅನ್ವೇಷಣೆಯ ಆಲಂಬನ
ವ್ಯತ್ಯಾಸಗೊಂಡಿದ್ದು ವ್ಯಸನದಿಂದಲೇ
ದೃಷ್ಟಾರರು ನೆಪಮಾತ್ರ ಆಗಿ ಬಿಡುತ್ತಾರೆ

ಮಾತು ಸತ್ತ ಮನಸ್ಸುಗಳು
ಭಾವಶೂನ್ಯತೆಯಲ್ಲಿ ರೂಪಾಂತರಗೊಳ್ಳುತ್ತವೆ
ಕರಕಲು ಕಲ್ಲಿದ್ದಲಿ ರಾಶಿ ಕೆಂಡದಂಗಡಿ
ಮೇಲಿಂದ ಮೇಲೆ ಎದ್ದು
ಒಳಹೊರಗಿನ ರತ್ನಗಂಬಳಿಗಳು
ಕೊಚ್ಚೆ ಮೆತ್ತಿಕೊಂಡಿವೆ.

ಅಕ್ಷರದ ನೆಲೆಯಲ್ಲೂ ರೂಕ್ಷ
ರಕ್ತ ಪಿಪಾಸುಗಳು
ಮಾಂಸಕ್ಕೆ ಮುತ್ತುವ ನೊಣಗಳು
ಮೈತಾಳುತ್ತವೆ.

ಸಂತೆಯಲ್ಲಿ ಅಪ್ಪಚ್ಚಿಯಾಗುತ್ತವೆ
ಹಾರುವ ಅಭಿಲಾಷೆಗೆ ರೆಕ್ಕೆ ಕಟ್ಟಿಕೊಂಡ
ಚಿಟ್ಟೆಗಳು
ಪ್ರೇಮ ಮತ್ತು ಮಸಣಗಳು
ಒಂದೇ ತೊಟ್ಟಿಲಲ್ಲಿ ಜೋಕಾಲಿಯಾಡುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದ್ದವರು, ಇಲ್ಲದವರು
Next post ಜಾತಿಗಳೇ ಜೈಲಾಗದಿರಿ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…