ನನಗೆ ನನ್ನ ಬೊಬ್ಬರ್ಯ

ನನಗೆ ನನ್ನ ಬೊಬ್ಬರ್ಯ ಬೇಕು
ಕೆಂಪು ಮಣ್ಣಿನ ಹಾದಿ ಬೇಕು

ದಾರಿಯಲಿ ಕಾಲುಗಳು ಸೊಲದಂತೆ
ಕಲ್ಲು ಮುಳ್ಳುಗಳು ತಾಗದಂತೆ
ನನಗೆ ನನ್ನ ಬೊಬ್ಬರ್ಯ ಬೇಕು
ಕೆಂಪು ಮಣ್ಣಿನ ಹಾದಿ ಬೇಕು

ಬಾಯಾರಿ ದಣಿದು ಬೆಂಡಾಗದಂತೆ
ನಡುದಾರಿಯಲಿ ಕುಸಿದು ಬೀಳದಂತೆ
ನನಗೆ ನನ್ನ ಗೇರುಮರ ಬೇಕು
ಮರದ ತುಂಬ ಹಣ್ಣು ಬೇಕು

ಇಳಿರಾತ್ರಿಯಲಿ ಸಿಕ್ಕಿ ದಿಕ್ಕುಗೆಡದಂತೆ
ದಟ್ಟ ಕತ್ತಲೆಗೆ ಹೆದರಿಕೊಳದಂತೆ
ನನಗೆ ನನ್ನ ಚಂದ್ರ ಬೇಕು
ಆಕಾಶದ ತುಂಬ ಬೆಳಕು ಬೇಕು

ಗಾಳಿಮಳೆಯಲಿ ಮೈ ತೊಯ್ಯದಂತೆ
ಮನವ ಬೇಸರ ಸುಯ್ಯದಂತೆ
ನನಗೆ ನನ್ನ ಆಲ ಬೇಕು
ಅಲ್ಲಿ ಇನ್ನೂ ಯಾರೊ ಬೇಕು

ನನಗೆ ನನ್ನ ಬೊಬ್ಬರ್ಯ ಬೇಕು
ಕೆಂಪು ಮಣ್ಣಿನ ಹಾದಿ ಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವನ್ನು ವೈಭವೀಕರಿಸಿದ ಎಮಿಲಿ ಡಿಕಿನ್ಸನ್
Next post ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…