ಯಾತ್ರಿಕರು

ಒಣ ನದಿಯ ದಂಡೆಯಲಿ ನಡೆದಿರ ನೀವು
ಹೀಗೆಷ್ಟು ಸಾವಿರ ವರುಷ?
ಹಗಲಿಗೆ ದಹಿಸುವ ಸೂರ್ಯನ ಕಾವು
ತಿಂಗಳ ಬೆಳಕಿಗೆ ಆಗಿ ಅನಿಮಿಷ

ಸಿಕ್ಕಿದರು ಸಿಗದಂಥ ಪರ್ವತ ಶಿಖರ
ಹತ್ತಿ ನಿಂತಾದ ಅದೆಷ್ಟು ಹೊತ್ತು?
ನೋಡಬೇಕೆಂದುದನು ನೋಡಿದಿರ
ನೆನಪಿದೆಯೆ ಏನದರ ಸುತ್ತುಮುತ್ತು ?

ಯಾವೂರು ಯಾವ ಹೆಸರಿಲ್ಲದ ಕೋಟೆ
ಕಿಟಕಿ ಬಾಗಿಲುಗಳಿಲ್ಲದ ಒಗಟು
ನಿಂತಲ್ಲೆ ಬೆಳೆಯುವುದು ಎಷ್ಟೆತ್ತರ ಕೋಟೆ
ಎಲ್ಲಿ ಸೇರಿದಿರಿ ನೀವೆಲ್ಲಿ ಹೊರಟು?

ದಣಿದು ಮಲಗಿರಲು ಬರಿ ಮಣಲ ಮೇಲೆ
ಹರಿದು ನಿಮ್ಮೆಡೆಗೆ ಬಂದ ಸಂಗೀತ
ಯಾರು ಹಾಡಿದುದು ಯಾವ ನಾಡಿನ ಬಾಲೆ
ಸ್ವಂತದೊಳಗಿಂದಲೆ ಮೂಡಿತ್ತೆ ಸ್ವಗತ?

ಯಾರೂ ಗೊತ್ತಿರದ ಪಟ್ಟಣದೊಳಗೆ
ಹೆಸರೆತ್ತಿ ಕೂಗಿದುದು ಯಾರೊ ?
ಎಲ್ಲಿಂದ ಬಂದ ನಗು ಎಲ್ಲಿಯ ಹುಸಿನಗೆ
ಬೆನ್ನುಹತ್ತಿದುದಾವ ನಿಟ್ಟುಸಿರೊ?

ಬಂದವರಿದ್ದರೆ ನಿಮ್ಮ ಬೀಳ್ಕೊಡಲು
ಬೀದಿಯ ಕೊನೆಯ ತಿರುವಿನ ತನಕ?
ಮುಂದೆ ಎದ್ದುದು ಯಾವ ಬೆಟ್ಟ ಬಯಲು
ಕಳೆದುಕೊಂಡುದು ಯಾವ ಲೋಕ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ ೨
Next post ಮುಂಗಟ್ಟೆ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys