ಯಾತ್ರಿಕರು

ಒಣ ನದಿಯ ದಂಡೆಯಲಿ ನಡೆದಿರ ನೀವು
ಹೀಗೆಷ್ಟು ಸಾವಿರ ವರುಷ?
ಹಗಲಿಗೆ ದಹಿಸುವ ಸೂರ್ಯನ ಕಾವು
ತಿಂಗಳ ಬೆಳಕಿಗೆ ಆಗಿ ಅನಿಮಿಷ

ಸಿಕ್ಕಿದರು ಸಿಗದಂಥ ಪರ್ವತ ಶಿಖರ
ಹತ್ತಿ ನಿಂತಾದ ಅದೆಷ್ಟು ಹೊತ್ತು?
ನೋಡಬೇಕೆಂದುದನು ನೋಡಿದಿರ
ನೆನಪಿದೆಯೆ ಏನದರ ಸುತ್ತುಮುತ್ತು ?

ಯಾವೂರು ಯಾವ ಹೆಸರಿಲ್ಲದ ಕೋಟೆ
ಕಿಟಕಿ ಬಾಗಿಲುಗಳಿಲ್ಲದ ಒಗಟು
ನಿಂತಲ್ಲೆ ಬೆಳೆಯುವುದು ಎಷ್ಟೆತ್ತರ ಕೋಟೆ
ಎಲ್ಲಿ ಸೇರಿದಿರಿ ನೀವೆಲ್ಲಿ ಹೊರಟು?

ದಣಿದು ಮಲಗಿರಲು ಬರಿ ಮಣಲ ಮೇಲೆ
ಹರಿದು ನಿಮ್ಮೆಡೆಗೆ ಬಂದ ಸಂಗೀತ
ಯಾರು ಹಾಡಿದುದು ಯಾವ ನಾಡಿನ ಬಾಲೆ
ಸ್ವಂತದೊಳಗಿಂದಲೆ ಮೂಡಿತ್ತೆ ಸ್ವಗತ?

ಯಾರೂ ಗೊತ್ತಿರದ ಪಟ್ಟಣದೊಳಗೆ
ಹೆಸರೆತ್ತಿ ಕೂಗಿದುದು ಯಾರೊ ?
ಎಲ್ಲಿಂದ ಬಂದ ನಗು ಎಲ್ಲಿಯ ಹುಸಿನಗೆ
ಬೆನ್ನುಹತ್ತಿದುದಾವ ನಿಟ್ಟುಸಿರೊ?

ಬಂದವರಿದ್ದರೆ ನಿಮ್ಮ ಬೀಳ್ಕೊಡಲು
ಬೀದಿಯ ಕೊನೆಯ ತಿರುವಿನ ತನಕ?
ಮುಂದೆ ಎದ್ದುದು ಯಾವ ಬೆಟ್ಟ ಬಯಲು
ಕಳೆದುಕೊಂಡುದು ಯಾವ ಲೋಕ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ ೨
Next post ಮುಂಗಟ್ಟೆ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…