ರವಿವರ್ಮನ ಹೆಂಗಸರು

ದಪ್ಪವೆನ್ನುವರು ವಿಮರ್ಶಕರು ನಮ್ಮನ್ನು ಸ್ವಲ್ಪ
ದುಂಡಗಿದ್ದೆವು ನಿಜ. ಆ ಕಾಲದ ಮ೦ದಿಗೆ
ರುಚಿಗಳೇ ಬೇರೆ ನೋಡಿ, ಇನ್ನು ನಮ್ಮ ಮೊಲೆ
ರಬ್ಬರಿನ ಚೆಂಡುಗಳಂತೆ ಖಂಡಿತ ಇರಲಿಲ್ಲ

ನಮ್ಮ ಬಗ್ಗೆ ನಾವೇ ಹೇಳುವುದು ತರವಲ್ಲ
ಕೆಲವರಿಗಾದರೂ ಅದಮ್ಯ ಸ್ಫೂರ್ತಿಯ ಸೆಲೆ-
ಯಾಗಿ ನಾವಿದ್ದುದೇನು ಸುಳ್ಳಲ್ಲವಲ್ಲ, ನಿಜ
ಕೆಲವೊಂದು ವಿಷಯಗಳು ತಿಳಿದಿರಲಿಲ್ಲ ನಮಗೆ

ಮುಚ್ಚುವುದು ಬಿಚ್ಚುವುದು ಎಲ್ಲಿ ಯಾವಾಗ ಹೇಗೆ
ಇತ್ಯಾದಿ. ಈಗ ನೋಡಿದರೆ ಅದೂ ಒಂದು ಮಜ
ಅನಿಸುವುದು ಯಾವ ಮುಚ್ಚುಮರೆ ಕೂಡ ಇರದೆ
ಒಪ್ಪಿಕೊಳ್ಳುವುದು ಸಹಜ ಆಯಾ ಕ್ಷಣದ ಒಲವು

ಆದರೂ ಮೊದ್ದುಗಳೇನಾಗಿರಲಿಲ್ಲ ಬಿಡಿ ನಾವು
ನಿಮಗೇನು ಗೊತ್ತು ನಿಜಕ್ಕೂ ನಮ್ಮ ಎದೆ-
ಯೊಳಗಿನದು? ಚಿತ್ರಿಸಲು ಇದ್ದುದನಿದ್ದ ಹಾಗೆ
ಯಾತಕೆ ಬೇಕು ರಂಗು ರೇಖೆಗಳ ಕಲ್ಪ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದಲಾವಣೆ: ಮಾತು ಕೇಳುವುದು ಮತ್ತು ಕೇಳಿಸಿಕೊಳ್ಳುವುದು
Next post ಷೋಡಷಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys