Home / ಲೇಖನ / ಇತರೆ / ಪ್ರತಿಭಾವಂತ ಜಾದೂಗಾರ

ಪ್ರತಿಭಾವಂತ ಜಾದೂಗಾರ

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನಿವಾಸಿ ಬಶೀರ ಅಹ್ಮದ ಮುಜಾವರ ಅನಿವಾರ್‍ಯ ಕಾರಣಗಳಿಂದ ಶಿಕ್ಷಣ ಮುಂದುವರೆಸಲಾಗಲಿಲ್ಲ. ಇದೇ ಸಮಯದಲ್ಲಿ ಮಂತ್ರ, ತಂತ್ರಗಳ ಕಡೆಗೆ ಒಲವು ಬೆಳೆಯಿತು. ಮೊದಲಿಗೆ ಹಸ್ತ ಸಾಮುದ್ರಿಕದ ಅಭ್ಯಾಸ. ೧೯೭೦ರಲ್ಲಿ ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಶ್ರೀ ನಿತ್ಯಾನಂದ ಸ್ವಾಮಿಗಳ ಪರಿಚಯ, ಅಲ್ಲಿ ರಮಲಶಾಸ್ತ್ರದ ಅಭ್ಯಾಸ, ಜೊತೆಗೆ ಮಂತ್ರಸಾಧನೆ. ಆರು ವರ್ಷಗಳ ಸಾಧನೆಯಲ್ಲಿ ಭೂತೋಚ್ಚಾಟನಂಥ ಪ್ರಕಾರ ಮೊದಲುಗೊಂಡು, ಎಲ್ಲಾ ವಿಭಾಗದಲ್ಲಿ ಪರಿಣತಿ. ಆದರೆ ಇದರಲ್ಲಿ ಏನೋ ಕೊರತೆಯಿದೆಯೆಂಬ ಭಾವನೆ. ಸಾಧಕರು ಜನರ ಮೂಢನಂಬಿಕೆ ಅಜ್ಞಾನದೊಂದಿಗೆ ಸರಸವಾಡುತ್ತಿದ್ದಾರೆಂಬ ಸತ್ಯದ ಅರಿವು ೧೯೭೬ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಎರಡನೆ ದರ್ಜೆಯ ಗುಮಾಸ್ತರ ಭರ್ತಿಗಾಗಿ ನಡೆದ ಪರೀಕ್ಷೆಗೆ ಹಾಜರ. ಪರೀಕ್ಷೆಯನ್ನು ತೃಪ್ತಿಕರವಾಗಿ ಮಾಡಿದ್ದೇವೆಂಬ ಭರವಸೆ. ೧೯೭೭ರಲ್ಲಿ ಆಗಸ್ಟ್‌ನಲ್ಲಿ ಕೆಪಿ‌ಎಸ್‌ಸಿ ಪರೀಕ್ಷೆಯಲ್ಲಿ ಪಾಸು. ಅದೇ ತಿಂಗಳಲ್ಲಿ ಖ್ಯಾತ ಜಾದೂಗಾರ ಪ್ರೊ. ಶಂಕರ ಅವರ ಶಿಷ್ಯನಾಗುವ ಅವಕಾಶ ಲಭ್ಯವಾಗಿದ್ದರೂ, ಯೋಗ ಕೂಡಿಬರಲಿಲ್ಲ. ೧೯೭೮ ಜೂನ್ ತಿಂಗಳಲ್ಲಿ ಕೆಪಿ‌ಎಸ್‌ಸಿಯವರಿಂದ ಜಿಲ್ಲಾ ಖಜಾನೆ ವಿಜಾಪೂರದಲ್ಲಿ ಸರಕಾರಿ ನೌಕರಿ ಪ್ರಾರಂಭ. ೧೯೮೩ರಲ್ಲಿ ಜಗತ್ತಿನ ಎಲ್ಲ ಪವಾಡ ಪುರುಷರೆಂದು ಕರೆಸಿಕೊಳ್ಳುತ್ತಿರುವ ನಕಲಿ ಪವಾಡಪುರುಷರ, ಡೋಂಗಿ ಬಾಬಾಗಳ ಹಾಗೂ ಸಮಾಜವನ್ನು ಶೋಷಿಸುತ್ತಿರುವ, ಮೂಢನಂಬಿಕೆಗಳನ್ನು ಪೋಷಿಸುತ್ತಿರುವವರಿಗೆ ಸಿಂಹಸ್ವಪ್ನವಾಗಿದ್ದ, ಡಾ. ಕೋವೂರ್ ಇವರ ಲೇಖನಗಳ ಅಧ್ಯಯನ. ಇದರ ಫಲವಾಗಿ ಜಾದೂವನ್ನು ಅಭ್ಯಾಸ ಮಾಡಲೇಬೇಕಾದ ಅನಿವಾರ್ಯತೆ. ಆದರೆ ಕಲಿಸಲು ಯಾರೂ ಸಿದ್ಧರಿಲ್ಲದ ಸ್ಥಿತಿ. ೧೯೮೫ರಲ್ಲಿ ವಿಜಾಪೂರದಲ್ಲಿ ಕ್ಯಾಂಪ್ ಮಾಡಿದ್ದ ಶ್ರೀ ವಿಜಯ್ ಜಾದೂಗಾರ ಇವರ ಪರಿಚಯ ಮತ್ತು ಸ್ನೇಹ. ಇವರ ಉದ್ದೇಶವನ್ನು ಮೆಚ್ಚಿ ಅವರಿಂದ ಜಾದೂ ಜಗತ್ತಿನ ಎಲ್ಲ ರಹಸ್ಯಗಳ ಪಾಠ ಪ್ರಾರಂಭ. ಜಾದೂ ಜಗತ್ತಿನ ಎಲ್ಲ ರಹಸ್ಯಗಳನ್ನು ಅರಿತರೂ ಸಮಾಜದ ಮೌಢ್ಯವನ್ನು ತೊರೆಯಲು ಇಷ್ಟೇ ಸಾಲದು ಎಂಬ ಕೊರತೆ. ಅಲ್ಲಿ ಇಲ್ಲಿ ಪೇಪರಿನಲ್ಲಿ ಮೇಲಿಂದ ಮೇಲೆ ಓದುತ್ತಿರುವ ‘ಭಾನಾಮತಿ’ಗೆ ಇಷ್ಟು ಜನರ ಬಲಿ, ಭಾನಾಮತಿಯಿಂದ ಹಾಗಾಯಿತು, ಹೀಗಾಯಿತು ಮುಂತಾದ ಭಾನಾಮತಿಯ ಕಾಟದ ರಹಸ್ಯವನ್ನು ಬಿಡಿಸಲು ಸಮೋಹನಶಾಸ್ತ್ರದ (Hipnotism) ಕಲಿಕೆ ಪ್ರಾರಂಭ, ಜದೂ ಜಗತ್ತಿನ ಎಲ್ಲ ಅತಿರಥ ಮಹಾರಥರನ್ನು ತಯಾರು ಮಾಡಿದ ಪ್ರೊ. ರಾಮದಾಸ್ ನಾಯಕರಿಂದ (ಊರು ಹೆಬ್ರಿ, ಚಿಕ್ಕಮಗಳೂರು ಜಿಲ್ಲೆ) ನಂತರ, ಸಮ್ಮೋಹನ ಜಗತ್ತಿನ ‘ಧೂಮಕೇತು’ ಎಂದೇ ಖ್ಯಾತರಾದ ಪ್ರೊ. ಪಿ.ಎಂ. ಆಚಾರ್ಯ ಇವರಿಂದ ಸಮ್ಮೋಹನದಲ್ಲಿ ವಿಶೇಷ ಪರಿಣತಿ ೧೯೮೮ರಲ್ಲಿ.

ಅವರ ಮೊದಲ ಸಾರ್ವಜನಿಕ ಜಾದೂ ಪ್ರದರ್ಶನ ೧೯೮೭ರಲ್ಲಿ, ಬೆಂಗಳೂರಿನಲ್ಲಿ ಜರುಗಿದ ಖಜಾನೆ ಇಲಾಖೆಯ ನೌಕರರ ರಾಜ್ಯಮಟ್ಟದ ಮೂರನೆಯ ಸಮ್ಮೇಳನದಲ್ಲಿ (ಸ್ಥಳ: ಗುರುನಾನಾಕ ಭವನ, ಬೆಂಗಳೂರು), ನಂತರ ೧೯೮೮ ಜನವರಿ ೨೬ರಂದು ಅಥಣಿಯಲ್ಲಿ ಆಗಿನ ತಹಸೀಲ್ದಾರ್‌ ಮಲ್ಲಾಪುರ ಇವರಿಂದ ಪ್ರಶಸ್ತಿ ಪತ್ರದ ಕೊಡುಗೆ. ೮೮ರ ಗಣೇಶ ಚತುರ್ಥಿಯಲ್ಲಿ ಅಥಣಿ ಪಿಡಬ್ಲ್ಯೂ‍ಡಿ ಗಣಪತಿಯವರಿಂದ ಜಾದೂ ಪ್ರದರ್ಶನ, ಮರುದಿನವೇ ತಮ್ಮ ಊರಾದ ಕೊಕಟನೂರಿನಲ್ಲಿ ಸುಮಾರು ೫ ಸಾವಿಗೆ ಜನರೆದುರು ಭವ್ಯ ಪ್ರದರ್ಶನ. ಮುಂದೆ ಅಲ್ಲಿ ಇಲ್ಲಿ ಮಿತ್ರರ, ಮನೆಯಲ್ಲಿ ಹಿತೈಷಿಗಳ ಮುಂದೆ ಪ್ರದರ್ಶನ, ದಿ. ೧೬.೧೧.೯೧ರಂದು ಜಿಲ್ಲಾ ಖಜಾನೆ ಬೆಳಗಾವಿಯಲ್ಲಿ ಪ್ರದರ್ಶನ.

ಜಾದೂ ಪ್ರದರ್ಶನದ ಉದ್ದೇಶ, ಶೂನ್ಯದಿಂದ ವಿಭೂತಿಯನ್ನೊ ಅಥವಾ ಇನ್ನೇನನ್ನೋ ಸೃಷ್ಟಿಸುತ್ತೇವೆಂದು ಲಕ್ಷಾಂತರ ಜನರನ್ನು ಮೋಸಪಡಿಸುತ್ತಿರುವ ಢೋಂಗಿ ಪವಾಡ ಪುರುಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಲು ಸಾರ್ವಜನಿಕರಿಗೆ ತಿಳುವಳಿಕೆ ಕೊಡುವುದು. ಸಂಮೋಹನದ ಉದ್ದೇಶ, ‘ಭಾನಾಮತಿ’ಯ ಬಾಧೆಗೆ ಒಳಪಟ್ಟಿರುವ ‘ಮಾನಸಿಕ ರೋಗಿಗಳನ್ನು’ ನಕಲಿ ಮಂತ್ರವಾದಿಗಳ ಕೈಗೆ ಒಪ್ಪಿಸದೇ, ಸಂಮೋಹನ ಚಿಕಿತ್ಸೆಯಿಂದ ವೈಜ್ಞಾನಿಕವಾಗಿ ಗುಣಪಡಿಸುವುದು ಪ್ರಾರಂಭಿಸಿದರು.

ಈ ರೀತಿಯಾಗಿ ಮುಂದುವರೆಯಲು ಈಗಿನ ದಿನಗಳಲ್ಲಿ ಸಮೂಹ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾದ್ದರಿಂದ, ಸತ್ಯವನ್ನು ಗುರುತಿಸುವ, ಒಳ್ಳೆಯದನ್ನು ಪ್ರಚಾರ ಪಡಿಸುವ ಉದ್ದೇಶದ ಹಾಗೂ ಸಮಾನ ಮನಸ್ಕ ವ್ಯಕ್ತಿಗಳ ಸ್ನೇಹ ಬೆಳೆಸುವದು ಅವರ ಗುರಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...