ಒಲವು ಬಂಧನವಲ್ಲ

ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ
ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು.
ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ
ಬಂಗಾರದ ಮಿನುಗು ಬಳೆಗಳು
ಹಸಿರು ಗಾಜಿನ ಬಳೆಗಳು
ದಿನಕಳೆದು ಗಡುಸಾದಂತೆ ಕೈಗಳು
ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ..
ಸಂಕೋಲೆಯ ಕಂಕಣ
ಡಂಭ ಜೀವನದ ಸುರುಳಿ
ಬಳೆ ತೊಡುವುದೆಂದರೆ ನನ್ನ
ಕೈಗಳಿಗೆ ಬೇಡಿ.

ಅಂಟಿಕೊಂಡ ಮೂಗುತಿ
ಮೂಗುತಿಯೇ ಇಲ್ಲದ
ನಿರಾಭರಣ ಮುಖಗಳ
ಕಂಡಾಗಲೆಲ್ಲಾ ನನ್ನ ಅಣಕಿಸುತ್ತದೆ.
ಆಗಾಗ ಎಲ್ಲೆಲ್ಲೋ ತೊಡರಿಕೊಂಡು
ಮೂಗು ಘಾಸಿಗೊಳ್ಳುವಾಗಲೆಲ್ಲಾ,
ಅಂದುಕೊಳ್ಳುತ್ತೇನೆ.. ಇದರ ಹಂಗೇ ಬೇಡ.
ತೆಗೆದು ಪಕ್ಕಕ್ಕಿಡಲೇ… ಎಂದು.

ಅರಿಸಿನದ ನಂಜು ತೆಗೆಯುವ ಕೊಂಬು
ಕೆಲವೊಮ್ಮೆ ಕುತ್ತಿಗೆಗೆ ಕೆರೆತ ತಂದಿಡುತ್ತದೆ.
ತಾಳಿಯ ನೀರು ಮೈಮೇಲೆ ಬಿದ್ದರೂ
ಕಡಿತ ಕಾಡುತ್ತದೆ.
ಮುಲಾಮುಗಳ ಸಾಲು ಹೆಚ್ಚು
ಹೆಚ್ಚುತ್ತಾ ಹೋದರೂ
ತುರಿಕೆ ನಿಲ್ಲುವುದಿಲ್ಲ.

ಮುಂಚಿನಂತೆ ಈಗ ನನ್ನ ಕಾಲಿಗೆ
ಗೆಜ್ಜೆ ಶೋಭಿಸುವುದಿಲ್ಲ.
ಗೆಜ್ಜೆಯ ಸುತ್ತ ಕಟ್ಟಿಕೊಂಡ ಆ ಸದ್ದು
ತಾರಕ್ಕೇರಿದಂತೆ ಸಂತೆಯೇ ಭುಗಿಲೇಳುತ್ತದೆ.

ತನು ಬಂಧನದ ಕಡಿವಾಣಗಳು
ಕಟ್ಟಿಹಾಕುವುದ ಅರಿತಿಲ್ಲ-
ಮನಗುದುರೆಗೆ ನಾಗಾಲೋಟ
ಕಲಿಸಬೇಕಿಲ್ಲ.
ಎಂದರೆ ಅವನೆಂದ ಒಳಹೊರಗು ಅರಿತರೆ
ತಾಳಿ, ನತ್ತು, ಬಳೆ ನಿನಗೆ ಬೇಕೆಂದಿಲ್ಲ
ಹೊರಗು ಮಾಡಬೇಕಿಲ್ಲ,
ಒಳಜಡಿದು ಬೀಗ ಹಾಕಬೇಕಿಲ್ಲ.
ಮತ್ತೆಲ್ಲವೂ ನಿನ್ನಿಷ್ಟ,
ನಿನ್ನೊಳಗೆ ನಾ
ನಿರುವುದೇ ನನ್ನ ಅದೃಷ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವುದಿಲ್ಲ ಯಾವುದುಂಟು
Next post ಮಾವೊ : ನೂರು ವರ್ಷದ ನೆನಪು

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys