ಒಲವು ಬಂಧನವಲ್ಲ

ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ
ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು.
ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ
ಬಂಗಾರದ ಮಿನುಗು ಬಳೆಗಳು
ಹಸಿರು ಗಾಜಿನ ಬಳೆಗಳು
ದಿನಕಳೆದು ಗಡುಸಾದಂತೆ ಕೈಗಳು
ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ..
ಸಂಕೋಲೆಯ ಕಂಕಣ
ಡಂಭ ಜೀವನದ ಸುರುಳಿ
ಬಳೆ ತೊಡುವುದೆಂದರೆ ನನ್ನ
ಕೈಗಳಿಗೆ ಬೇಡಿ.

ಅಂಟಿಕೊಂಡ ಮೂಗುತಿ
ಮೂಗುತಿಯೇ ಇಲ್ಲದ
ನಿರಾಭರಣ ಮುಖಗಳ
ಕಂಡಾಗಲೆಲ್ಲಾ ನನ್ನ ಅಣಕಿಸುತ್ತದೆ.
ಆಗಾಗ ಎಲ್ಲೆಲ್ಲೋ ತೊಡರಿಕೊಂಡು
ಮೂಗು ಘಾಸಿಗೊಳ್ಳುವಾಗಲೆಲ್ಲಾ,
ಅಂದುಕೊಳ್ಳುತ್ತೇನೆ.. ಇದರ ಹಂಗೇ ಬೇಡ.
ತೆಗೆದು ಪಕ್ಕಕ್ಕಿಡಲೇ… ಎಂದು.

ಅರಿಸಿನದ ನಂಜು ತೆಗೆಯುವ ಕೊಂಬು
ಕೆಲವೊಮ್ಮೆ ಕುತ್ತಿಗೆಗೆ ಕೆರೆತ ತಂದಿಡುತ್ತದೆ.
ತಾಳಿಯ ನೀರು ಮೈಮೇಲೆ ಬಿದ್ದರೂ
ಕಡಿತ ಕಾಡುತ್ತದೆ.
ಮುಲಾಮುಗಳ ಸಾಲು ಹೆಚ್ಚು
ಹೆಚ್ಚುತ್ತಾ ಹೋದರೂ
ತುರಿಕೆ ನಿಲ್ಲುವುದಿಲ್ಲ.

ಮುಂಚಿನಂತೆ ಈಗ ನನ್ನ ಕಾಲಿಗೆ
ಗೆಜ್ಜೆ ಶೋಭಿಸುವುದಿಲ್ಲ.
ಗೆಜ್ಜೆಯ ಸುತ್ತ ಕಟ್ಟಿಕೊಂಡ ಆ ಸದ್ದು
ತಾರಕ್ಕೇರಿದಂತೆ ಸಂತೆಯೇ ಭುಗಿಲೇಳುತ್ತದೆ.

ತನು ಬಂಧನದ ಕಡಿವಾಣಗಳು
ಕಟ್ಟಿಹಾಕುವುದ ಅರಿತಿಲ್ಲ-
ಮನಗುದುರೆಗೆ ನಾಗಾಲೋಟ
ಕಲಿಸಬೇಕಿಲ್ಲ.
ಎಂದರೆ ಅವನೆಂದ ಒಳಹೊರಗು ಅರಿತರೆ
ತಾಳಿ, ನತ್ತು, ಬಳೆ ನಿನಗೆ ಬೇಕೆಂದಿಲ್ಲ
ಹೊರಗು ಮಾಡಬೇಕಿಲ್ಲ,
ಒಳಜಡಿದು ಬೀಗ ಹಾಕಬೇಕಿಲ್ಲ.
ಮತ್ತೆಲ್ಲವೂ ನಿನ್ನಿಷ್ಟ,
ನಿನ್ನೊಳಗೆ ನಾ
ನಿರುವುದೇ ನನ್ನ ಅದೃಷ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವುದಿಲ್ಲ ಯಾವುದುಂಟು
Next post ಮಾವೊ : ನೂರು ವರ್ಷದ ನೆನಪು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…