ಭಯವೇತಕೆ ಮನವೇ

ಭಯವೇತಕೆ ಮನವೇ
ಬದುಕು ಬಯಲಿನಾಟದ ನಿಲುವು ||

ಹುಟ್ಟಿರಲು ಭಯಕಾಡಲಿಲ್ಲ
ಮೆಟ್ಟಿರಲು ಭಯವೆಂಬುದಿಲ್ಲ
ಬರಲು ಮುಪ್ಪು ಭಯವೇತಕೆ
ಸಾವು ನೇರಳಿನಾಟದೆ ಬೆಪ್ಪನಾದೆ ನೀನು ||

ಪಾಪಿ ನಾನು ಪುಣ್ಯ ಧಾರೆ ಎರೆದು
ಧರ್‍ಮಕರ್‍ಮ ಪಕಳೆ ತೆರೆದು
ತಾನು ಆನು ನೀನು ಎಂದೆಲೆಯ ಬುತ್ತಿ ಹೊತ್ತು
ಸಂತೆಗೆ ನಡೆವಾಗ ಭಯ ಪಡಲಿಲ್ಲ ||

ಹೆಣ್ಣು ಹೊನ್ನು ಮಣ್ಣಿನ ಮಾಯವು
ಕಂಡು ಕಾಣದಾಗಿನ ಜಾಲವ ಬೀಸಿ
ಅಂತರ ಮಂಥರ ಜಪತಪ ಕಾಯಕ
ಕಂಕಣಬದ್ಧ ಸಂತರ ಭಕುತಿ ಕಾಣಲಿಲ್ಲ ||

ಮಾನ ಸಮ್ಮಾನಕೆ ಮಣಿಯದೆ
ಕಾನನ ಪಶುಪಕ್ಷಿ ಜಾತಕ ಅರಿಯಲು
ಕಾರಣ ನಿನ್ನ ನೀನು ಅರಿಯದೆ ಬಾಳಿನ
ಹಸಿರ ಕಿವುಚಿ ತಬ್ಬಿಬ್ಬಾದೆ ಏತಕೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಪನ ಒಂದು ಪದ್ಯ
Next post ಸಾರ್ಸ್‌ಮಾರಿ ರೋಗ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys