ಮನವೆಂಬ ಮನೆಯಲ್ಲಿ

ಮನವೆಂಬ ಮನೆಯಲ್ಲಿ
ಶ್ರೀಮಂತ ನಾನು
ಗುಡಿ ಎಂಬ ನೆಲದಲ್ಲಿ
ನಡೆಯುವಾತ ನಾನು ||

ನಾನಲ್ಲ ಬಡವ
ನಾನೆಂಬಾತ ಬಡವನು
ನನಗಿಲ್ಲ ಯಾರ ಪರಿವೆಯೂ
ಬೇಕಿಲ್ಲ ಯಾರ ಕರುಣೆಯೂ ||

ನಡೆಸುವಾತನಿಹನು
ನಡೆಯುವಾತ ನಾನು
ಅವನಿಗಿವನು ಗೊಂಬೆಯು
ಇವನಿಗವನೇ ನೆರಳು ||

ಗುಡಿಸಲೆಂಬೊ ಗುಡಿಯಲ್ಲಿ
ನನ್ನಾಕೆ ಲಕ್ಷ್ಮಿಯು
ನನ್ನ ಮಕ್ಕಳೆ ದೀವಿಗೆ
ಕಿರಣಗಳೆ ಜೀವನಕೆ ||
ಬೆಳಕಾಗಿಹರು ಬಾಳಿಗೆ
ಹಸಿರಾಗಿಹರು ಜೀವಕೆ

ಹಿಟ್ಟು ಅಂಬಲಿಯ ಮೃಷ್ಟಾನ್ನ
ಕಷ್ಟ ಸುಖಗಳೇ ಚಿನ್ನಾಭರಣ
ನೆಮ್ಮದಿಯ ನೆರಳಲ್ಲಿ
ಹಸಿರು ಉಸಿರೆ ಪಾವನವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತಾಂತರ – ಒಂದು ಪ್ರತಿಕ್ರಿಯೆ
Next post ಮಾತು

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…