Home / ಕವನ / ಕವಿತೆ / ಸಂಕ್ರಾಂತಿ

ಸಂಕ್ರಾಂತಿ

ಎಷ್ಟೋ ಸಂಕ್ರಾಂತಿಗಳ ಬಣ್ಣದ ಕಮಾನುಗಳ
ಹಾದು ಬಂದಿದ್ದೇನೆ ಬಡಿದು ರೆಕ್ಕೆ
ಸುಟ್ಟೂ ಸಂದಿದ್ದೇನೆ ಪ್ರಸ್ತುತಕ್ಕೆ

ಬಂಡೆಗಳ ಮೇಲೆ ಬಿದ್ದರು ಏನು ಸಂದಿಗಳ
ಮಣ್ಣಲ್ಲಿ ಬೇರಿಳಿಸಿ ಎದ್ದ ಬೀಜ
ಹೋರಾಟಗಳ ಕಥೆಯ ನುಡಿವ ಗಾಯ ಸಹಸ್ರ
ಮಾಗಿ ಮಲಗಿರುವ೦ಥ ಚಿತ್ತ ದೇಹ
ತುಕ್ಕು ಹಿಡಿಯದ ವಸ್ತು ಬಳಕೆಗೇ ಸಲ್ಲದೆ
ಒರೆಯ ಆಭರಣವಾಗಿರದ ಬಾಳು
ಕಾಲ ಬಚ್ಚಿಟ್ಟಿರುವ ಮುತ್ತು ಒಡಲೊಳಗಿರುವ
ಚಿಪ್ಪನ್ನು ಹುಡುಕಿ ಹೊರಟಂಥ ಗೀಳು

ನೂರು ಕಕ್ಕಡ ಹೊತ್ತಿ ಆಸೆ ಧಗಧಗಿಸಿದರು
ಕಡೆಗೆ ದೊರೆತದ್ದೆಲ್ಲ ಬರಿಯ ಮಸ್ಟು
ಆದರೂ ಉರಿ ಎದ್ದ ಕ್ಷಣಭಂಗುರದ ಗಳಿಗೆ
ಕೊಟ್ಟ ಬೆಳಕಿಗೆ ನಾ ಕೃತಜ್ಞ ಶುಭಮಸ್ತು
ದಕ್ಕುವುದು ಬದುಕಿಗಷ್ಟೇ ಕಡೆಗೆ, ಎಲ್ಲ ಸುಖ
ಎಲ್ಲಿತ್ತು, ಹಿಂದೆಂದು ? ಇಲ್ಲ ಮುಂದೂ
ರಾಮರಾಜ್ಯವೆ, ಅಗಸ ಕೊಂಡಾಡಿದಾಳ್ವಿಕೆಯೆ ?
ನುಣುಪು ಕಣ್ಣಿಗೆ ದೂರವಿರುವ ಗುಂಡು

ಬರಲಿ ಸಂಕ್ರಾಂತಿ ಹಳೆಚಿಂತೆ ವ್ಯಥೆಗಳ ಪುಳ್ಳೆ-
ರಾಶಿಗೇ ಬೆಂಕಿಯಿಟ್ಟು
ಬಿತ್ತಿದ್ದು ಬೆಳೆಯಲಿಲ್ಲೆಂಬ ವ್ಯರ್ಥಕೃಷಿಯ
ಬಂಜೆನೋವಿಗೆ ಮದ್ದು ಕೊಟ್ಟು

ಕಾದು ಕ್ಯೂ ನಿಂತಿರುವ ಅನಿರೀಕ್ಷಿತಗಳ ಎದೆಯ
ಮರೆಯ ಸರಿಸುವ ಹಸ್ತವಾಗಿ
ಎದುರುಗೊಳ್ಳುವ ವಕ್ಷ ಊರ್ವಶಿಯದಾಗಿರಲಿ
ಅಪ್ಪಿ ಉಣಿಸಲಿ ಎಲ್ಲ ನೀಡಿ
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...