ಸಂಕ್ರಾಂತಿ

ಎಷ್ಟೋ ಸಂಕ್ರಾಂತಿಗಳ ಬಣ್ಣದ ಕಮಾನುಗಳ
ಹಾದು ಬಂದಿದ್ದೇನೆ ಬಡಿದು ರೆಕ್ಕೆ
ಸುಟ್ಟೂ ಸಂದಿದ್ದೇನೆ ಪ್ರಸ್ತುತಕ್ಕೆ

ಬಂಡೆಗಳ ಮೇಲೆ ಬಿದ್ದರು ಏನು ಸಂದಿಗಳ
ಮಣ್ಣಲ್ಲಿ ಬೇರಿಳಿಸಿ ಎದ್ದ ಬೀಜ
ಹೋರಾಟಗಳ ಕಥೆಯ ನುಡಿವ ಗಾಯ ಸಹಸ್ರ
ಮಾಗಿ ಮಲಗಿರುವ೦ಥ ಚಿತ್ತ ದೇಹ
ತುಕ್ಕು ಹಿಡಿಯದ ವಸ್ತು ಬಳಕೆಗೇ ಸಲ್ಲದೆ
ಒರೆಯ ಆಭರಣವಾಗಿರದ ಬಾಳು
ಕಾಲ ಬಚ್ಚಿಟ್ಟಿರುವ ಮುತ್ತು ಒಡಲೊಳಗಿರುವ
ಚಿಪ್ಪನ್ನು ಹುಡುಕಿ ಹೊರಟಂಥ ಗೀಳು

ನೂರು ಕಕ್ಕಡ ಹೊತ್ತಿ ಆಸೆ ಧಗಧಗಿಸಿದರು
ಕಡೆಗೆ ದೊರೆತದ್ದೆಲ್ಲ ಬರಿಯ ಮಸ್ಟು
ಆದರೂ ಉರಿ ಎದ್ದ ಕ್ಷಣಭಂಗುರದ ಗಳಿಗೆ
ಕೊಟ್ಟ ಬೆಳಕಿಗೆ ನಾ ಕೃತಜ್ಞ ಶುಭಮಸ್ತು
ದಕ್ಕುವುದು ಬದುಕಿಗಷ್ಟೇ ಕಡೆಗೆ, ಎಲ್ಲ ಸುಖ
ಎಲ್ಲಿತ್ತು, ಹಿಂದೆಂದು ? ಇಲ್ಲ ಮುಂದೂ
ರಾಮರಾಜ್ಯವೆ, ಅಗಸ ಕೊಂಡಾಡಿದಾಳ್ವಿಕೆಯೆ ?
ನುಣುಪು ಕಣ್ಣಿಗೆ ದೂರವಿರುವ ಗುಂಡು

ಬರಲಿ ಸಂಕ್ರಾಂತಿ ಹಳೆಚಿಂತೆ ವ್ಯಥೆಗಳ ಪುಳ್ಳೆ-
ರಾಶಿಗೇ ಬೆಂಕಿಯಿಟ್ಟು
ಬಿತ್ತಿದ್ದು ಬೆಳೆಯಲಿಲ್ಲೆಂಬ ವ್ಯರ್ಥಕೃಷಿಯ
ಬಂಜೆನೋವಿಗೆ ಮದ್ದು ಕೊಟ್ಟು

ಕಾದು ಕ್ಯೂ ನಿಂತಿರುವ ಅನಿರೀಕ್ಷಿತಗಳ ಎದೆಯ
ಮರೆಯ ಸರಿಸುವ ಹಸ್ತವಾಗಿ
ಎದುರುಗೊಳ್ಳುವ ವಕ್ಷ ಊರ್ವಶಿಯದಾಗಿರಲಿ
ಅಪ್ಪಿ ಉಣಿಸಲಿ ಎಲ್ಲ ನೀಡಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೨೫
Next post ಪರ್ಯಾಯ ಸಾಂಸ್ಕೃತಿಕ ಚಿಂತನೆಯ ಹರಿಕಾರ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys