Home / ಕವನ / ಕವಿತೆ / ಸಂಕ್ರಾಂತಿ

ಸಂಕ್ರಾಂತಿ

ಎಷ್ಟೋ ಸಂಕ್ರಾಂತಿಗಳ ಬಣ್ಣದ ಕಮಾನುಗಳ
ಹಾದು ಬಂದಿದ್ದೇನೆ ಬಡಿದು ರೆಕ್ಕೆ
ಸುಟ್ಟೂ ಸಂದಿದ್ದೇನೆ ಪ್ರಸ್ತುತಕ್ಕೆ

ಬಂಡೆಗಳ ಮೇಲೆ ಬಿದ್ದರು ಏನು ಸಂದಿಗಳ
ಮಣ್ಣಲ್ಲಿ ಬೇರಿಳಿಸಿ ಎದ್ದ ಬೀಜ
ಹೋರಾಟಗಳ ಕಥೆಯ ನುಡಿವ ಗಾಯ ಸಹಸ್ರ
ಮಾಗಿ ಮಲಗಿರುವ೦ಥ ಚಿತ್ತ ದೇಹ
ತುಕ್ಕು ಹಿಡಿಯದ ವಸ್ತು ಬಳಕೆಗೇ ಸಲ್ಲದೆ
ಒರೆಯ ಆಭರಣವಾಗಿರದ ಬಾಳು
ಕಾಲ ಬಚ್ಚಿಟ್ಟಿರುವ ಮುತ್ತು ಒಡಲೊಳಗಿರುವ
ಚಿಪ್ಪನ್ನು ಹುಡುಕಿ ಹೊರಟಂಥ ಗೀಳು

ನೂರು ಕಕ್ಕಡ ಹೊತ್ತಿ ಆಸೆ ಧಗಧಗಿಸಿದರು
ಕಡೆಗೆ ದೊರೆತದ್ದೆಲ್ಲ ಬರಿಯ ಮಸ್ಟು
ಆದರೂ ಉರಿ ಎದ್ದ ಕ್ಷಣಭಂಗುರದ ಗಳಿಗೆ
ಕೊಟ್ಟ ಬೆಳಕಿಗೆ ನಾ ಕೃತಜ್ಞ ಶುಭಮಸ್ತು
ದಕ್ಕುವುದು ಬದುಕಿಗಷ್ಟೇ ಕಡೆಗೆ, ಎಲ್ಲ ಸುಖ
ಎಲ್ಲಿತ್ತು, ಹಿಂದೆಂದು ? ಇಲ್ಲ ಮುಂದೂ
ರಾಮರಾಜ್ಯವೆ, ಅಗಸ ಕೊಂಡಾಡಿದಾಳ್ವಿಕೆಯೆ ?
ನುಣುಪು ಕಣ್ಣಿಗೆ ದೂರವಿರುವ ಗುಂಡು

ಬರಲಿ ಸಂಕ್ರಾಂತಿ ಹಳೆಚಿಂತೆ ವ್ಯಥೆಗಳ ಪುಳ್ಳೆ-
ರಾಶಿಗೇ ಬೆಂಕಿಯಿಟ್ಟು
ಬಿತ್ತಿದ್ದು ಬೆಳೆಯಲಿಲ್ಲೆಂಬ ವ್ಯರ್ಥಕೃಷಿಯ
ಬಂಜೆನೋವಿಗೆ ಮದ್ದು ಕೊಟ್ಟು

ಕಾದು ಕ್ಯೂ ನಿಂತಿರುವ ಅನಿರೀಕ್ಷಿತಗಳ ಎದೆಯ
ಮರೆಯ ಸರಿಸುವ ಹಸ್ತವಾಗಿ
ಎದುರುಗೊಳ್ಳುವ ವಕ್ಷ ಊರ್ವಶಿಯದಾಗಿರಲಿ
ಅಪ್ಪಿ ಉಣಿಸಲಿ ಎಲ್ಲ ನೀಡಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...