Home / ಕವನ / ಕವಿತೆ / ಸ್ವಾತಂತ್ರ್ಯ ಬಂದಿದೆ

ಸ್ವಾತಂತ್ರ್ಯ ಬಂದಿದೆ

ನಮಗೆ ಸ್ವಾತಂತ್ರ್ಯ ಬಂದಿದೆ ಸ್ವಾಮೀ ನಮಗೆ ಸ್ವಾತಂತ್ರ್ಯ ಬಂದಿದೆ,
ನಮ್ಮ ಹಡೆದ ತಂದೆ ತಾಯಿಗಳ ಕಾಲಿಂದೊದೆಯಲು
ನಮ್ಮ ತಿದ್ದಿ ಬೆಳೆಸಿದ ಗುರು ಹಿರಿಯರನೂ ಅಲ್ಲಗಳೆಯಲು
ಆಡಳಿತದಾಡುಂಬೊಲದಲ್ಲಿ ಬೇಲಿ ಎದ್ದು ಹೊಲ ಮೇಯಲು
ಜನಸೇವಾ ಭವನಗಳಲ್ಲಿ ಇಲಿ ಹೆಗ್ಗಣಗಳು ಕೊಬ್ಬಲು
ಕುರಿಮಂದಿಯ ಕರಾರಿಲ್ಲದೆ ತಿಂಬ ತೋಳಗಳು ಬೆಳೆಯಲು
ದೀನ ದಲಿತರ ಹೆಸರು ಕೂಗಿಕೂಗಿ ದಬ್ಬಾಳಿಕೆಯ ಬಸಿರುಬ್ಬಿಸಲು

ನಮ್ಮ ಹೂದೋಟಗಳಲ್ಲಿ ಮುಳ್ಳುಕಂಟಿಗಳ ಧಾರಾಳ ಬೆಳೆಸಲು
ನಮ್ಮ ಮನೆಯಂಗಳಗಳಲ್ಲೆ ತಿಪ್ಪೆಯೊಟ್ಟಿಕೊಳ್ಳಲು
ಪೂರ್ವ ಶಿಖಿಯ ಕತ್ತರಿಸಲು ಪಾಶ್ಚಾತ್ಯ ಕಸಿಯ ತಲೆತುಂಬಾ
ಸಿಕ್ಕಾಪಟ್ಟೆ ಬೆಳೆಸಲು ಸ್ವಾತಂತ್ರ್ಯ ಬಂದಿದೆ.

ಬೇಕು ಬೇಕಾದವರ ಬೇಕಾದೆಡೆಗಳಲ್ಲಿ ತುಂಬಿಸಿಕೊಳ್ಳಲು
ಬೇಡಾದವರ ಆಗದವರ ಮೇಲೆಲ್ಲಾ ರೊಚ್ಚೆ ಚಿಮ್ಮಿಸಲು
ದುಡಿದು ತಿಂಬವರ ಒಡಲ ತುಳಿದು ನಮ್ಮ ಬೊಜ್ಜು ಬೇಕಾದಂತೆ
ಬೆಳೆಸಲು ಸ್ವಾತಂತ್ರ್ಯ ಬಂದಿದೆ

ಕುಡಿದು ಬೇಕಾದಷ್ಟು ಬೀದಿಯಲ್ಲಿ ಹೊರಳಾಡಿ ಸ್ವರ್ಗಕಾಣಲು
ಮಾತುಗಳೊಲೆಯ ಮೇಲೆ ಸ್ವಾರ್ಥದಡಿಗೆ ಬೇಯಿಸಿಕೊಳ್ಳಲು
ಬುದ್ದಿ ಶಕ್ತಿ, ಯೋಗ್ಯತೆ, ಗುಣಗಳನ್ನು
ಹೆಣಮಾಡಿ ಹೂಳಿಡಲು
ಗೂಂಡಾ ಗುಂಪುಗಾರಿಕೆ, ಹಣಗಳನ್ನು ಸಿಂಹಾಸನಕ್ಕೇರಿಸಲು
ಕೆಳಬಿದ್ದವರನೆಬ್ಬಿಸುವ ನೆಪದಲ್ಲಿ ಎದ್ದವರ ಹೊಡೆದು ಬೀಳಿಸಲು
ಸ್ವಾತಂತ್ರ್ಯ ಬಂದಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...