ನಗೆಡಂಗುರ-೧೨೫

ಪಂಡಿತ ಮದನ ಮೋಹನ ಮಾಳವೀಯರದ್ದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬಹುದೊಡ್ಡ ಹೆಸರು ಒಂದು ದಿನ ಅವರು ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದಾಗ ತಮ್ಮಭಾರಿ ಮೀಸೆಯನ್ನೂ ಸಹ ಬೋಳಿಸಿಕೊಂಡರು ಹೊರಗಡೆ ಸಂಚಾರ ಹೊರಟಾಗ ಎದುರಾದ ಸ್ನೇಹಿತರೂಬ್ಬರು ಇವರನ್ನು ಕಂಡು “ಇದೇನು ತಮ್ಮಮೀಸೆಯನ್ನೂ ಇಂದು ಬೋಳಿಸಿ ಕೊಂಡಿರುವಿರಲ್ಲಾ ಏಕೆಂದು ಕೇಳಬಹುದೆ? ಅದು ಇದ್ದಿದ್ದರೆ ನಿಮಗೇನು ತೊಂದರೆಯಾಗಿರುತ್ತಿತ್ತು?” ಕೇಳಿದರು ಆ ಮಿತ್ರ. ಅದಕ್ಕೆ ಮಾಳವೀಯರ ಉತ್ತರ ಸಿದ್ದವಾಗಿತ್ತು. “ಇದಕ್ಕೆ ಕಾರಣ ಇಷ್ಟೆ; ನಮ್ಮ ಭರತ ಭೂಮಿಯಲ್ಲಿ ಎಲ್ಲ ಸಹೋದರರು ಪಡಬಾರದ ಕಷ್ಟವನ್ನು ಅನುಭವಿಸುತ್ತಿರುವಾಗ ಅವರಿಗೆ ಯಾವ ಸಹಾಯವನ್ನು ಮಾಡಲಾಗದಿರುವ ಈ ಪುರುಷತ್ವದ ಮೀಸೆ ಏತಕ್ಕಾಗಿ ಬೇಕು? ಅದಕ್ಕಾಗಿ ನಾನು ನನ್ನ ಮೀಸೆಯನ್ನು ಬೋಳಿಸಿದ್ದೇನೆ” ಎಂದರು ಮಾಳವೀಯರು.
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲೇರಿಯಾ ಮಾತ್ರೆ ಪರೀಕ್ಷೆ
Next post ನಿನ್ನ ಹೂಬನದಲ್ಲಿ ಮಾಲಿ ಮಾಡಿಕೋ ನನ್ನ

ಸಣ್ಣ ಕತೆ

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…