ರೇಖೆಗಳು

ಕಲಾವಿದನ ಕುಂಚ ಎಳೆದವು
ಕ್ಯಾನ್ವಾಸಿನ ತುಂಬ ಗೆರೆಗಳು
ಮೂಡಿತು ವಿಸ್ತಾರ ಬದುಕು
ಮನಸ್ಸಿನ ಸೌಂದರ್ಯ ಬಿಂಬ
ಕೃತಿಯಲಿ ಆಕೃತಿ ಅರಳಿದವು
ಒಳತೋಟಿಯ ಸರಳ ಸಂಕೀರ್ಣ
ಕಪ್ಪು ಬಣ್ಣಗಳು ಬಿಳಿ ಕಣ್ಣುಗಳು

ಗೆರೆಗಳು ಆದವು ರೇಖೆಗಳು
ಅಭಿವ್ಯಕ್ತಿಯ ನಾಟಕ ರಂಗತಾಲೀಮು
ಕೇಳಿದವು ಎದೆಮೀಟುವ ಹಾಡುಗಳು
ಮನುಕುಲದ ಪಾಡುಗಳು ಹರಿದ
ಭಾವ ಬಿಂದುಗಳು ನದಿಯಾಗಿ
ಒಡಲಸೇರಿದ ಬಣ್ಣಗಳಿಗೆ
ನೂರಾರು ಭಾಷೆಗಳು.

ಸರಳ ರೇಖೆಗಳೆಲ್ಲಾ ಒಂದನ್ನೊಂದು
ಕೂಡದೇ ಹಾಯ್ದು ಹರಿದಾಡಿ
ಇಳಿದು ಅದ್ದಿತೆಗೆದ ಓಕುಳಿಯಲಿ
ಅಗಾಧ ಮೌನ ಕವಿತೆಯ ರಾಗಗಳು
ಬಿಂದು ಬಿಂದು ಸೇರಿದ ಚಲನೆಗತಿ.
ದೀರ್ಘಸುಳ್ಳು ಖರೇ ಅನಿಸಿದ ಕ್ಷಣಗಳು.

ಸೂರ್ಯ ಬಳಿದ ಗಟ್ಟಿ ಬಣ್ಣದ ತಿರುಳು
ಜೀವಭಾವದ ಇಂಚು ಚೈತನ್ಯಗಳರಳಿ
ಹೂವು ಹಣ್ಣು ಹಕ್ಕಿ ಹಾಡು ಧರೆಯ ಕ್ಯಾನ್ವಾಸ್ ತುಂಬ
ಅವರಿವರು ಹಾಕಿದ ರೇಖೆಗಳು ಗೆರೆಗಳು
ಜೀವ ತುಂಬಿದ ಬೆಳಕ ಕಿರಣಗಳು
ಛಾಯೆಯ ಬಣ್ಣಗಳ ಲೋಕದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಕಾಶ(ವ್ವ)
Next post ಹುಟ್ಟು – ಸಾವು

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys