Home / ಕವನ / ಕವಿತೆ / ರೇಖೆಗಳು

ರೇಖೆಗಳು

ಕಲಾವಿದನ ಕುಂಚ ಎಳೆದವು
ಕ್ಯಾನ್ವಾಸಿನ ತುಂಬ ಗೆರೆಗಳು
ಮೂಡಿತು ವಿಸ್ತಾರ ಬದುಕು
ಮನಸ್ಸಿನ ಸೌಂದರ್ಯ ಬಿಂಬ
ಕೃತಿಯಲಿ ಆಕೃತಿ ಅರಳಿದವು
ಒಳತೋಟಿಯ ಸರಳ ಸಂಕೀರ್ಣ
ಕಪ್ಪು ಬಣ್ಣಗಳು ಬಿಳಿ ಕಣ್ಣುಗಳು

ಗೆರೆಗಳು ಆದವು ರೇಖೆಗಳು
ಅಭಿವ್ಯಕ್ತಿಯ ನಾಟಕ ರಂಗತಾಲೀಮು
ಕೇಳಿದವು ಎದೆಮೀಟುವ ಹಾಡುಗಳು
ಮನುಕುಲದ ಪಾಡುಗಳು ಹರಿದ
ಭಾವ ಬಿಂದುಗಳು ನದಿಯಾಗಿ
ಒಡಲಸೇರಿದ ಬಣ್ಣಗಳಿಗೆ
ನೂರಾರು ಭಾಷೆಗಳು.

ಸರಳ ರೇಖೆಗಳೆಲ್ಲಾ ಒಂದನ್ನೊಂದು
ಕೂಡದೇ ಹಾಯ್ದು ಹರಿದಾಡಿ
ಇಳಿದು ಅದ್ದಿತೆಗೆದ ಓಕುಳಿಯಲಿ
ಅಗಾಧ ಮೌನ ಕವಿತೆಯ ರಾಗಗಳು
ಬಿಂದು ಬಿಂದು ಸೇರಿದ ಚಲನೆಗತಿ.
ದೀರ್ಘಸುಳ್ಳು ಖರೇ ಅನಿಸಿದ ಕ್ಷಣಗಳು.

ಸೂರ್ಯ ಬಳಿದ ಗಟ್ಟಿ ಬಣ್ಣದ ತಿರುಳು
ಜೀವಭಾವದ ಇಂಚು ಚೈತನ್ಯಗಳರಳಿ
ಹೂವು ಹಣ್ಣು ಹಕ್ಕಿ ಹಾಡು ಧರೆಯ ಕ್ಯಾನ್ವಾಸ್ ತುಂಬ
ಅವರಿವರು ಹಾಕಿದ ರೇಖೆಗಳು ಗೆರೆಗಳು
ಜೀವ ತುಂಬಿದ ಬೆಳಕ ಕಿರಣಗಳು
ಛಾಯೆಯ ಬಣ್ಣಗಳ ಲೋಕದಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...