Home / ಲೇಖನ / ವಿಜ್ಞಾನ / ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ವಿಶ್ವವಿಖ್ಯಾತ ವಿಜ್ಞಾನಿ ಐನ್‍ಸ್ಟನ್ ಅವರ ಹೆಸರನ್ನು ವಿಜ್ಞಾನ ರಂಗದಲ್ಲಿ ಕೇಳದವರೇ ಇಲ್ಲ. ಇವರ ಚಿಂತನ, ಪ್ರಯೋಗ, ಸಿದ್ಧಾಂತ ಮತ್ತು ಸಂಶೋಧನೆಗಳು ಜಗತ್ತಿಗೆ ಇಂದು ಮಾರ್ಗದರ್ಶಿಯಾಗಿವೆ. ಇಂತಹ ಐನ್‌ಸ್ಟನ್ ಅವರ ತಲೆಯೊಳಗಿನ ಮಿದುಳೇನಾದರೂ ವಿಶೇಷತೆಗಳಿಂದ ಕೂಡಿದೆಯೇ? ಎಂದು ಇವರ ಮಿದುಳಿನ ಅಧ್ಯಯನವನ್ನು ಸಾಂಡ್ರಾ ಬಿ ಟೆಲ್ಸನ್ ಅವರು ನಡೆಯಿಸಿ ಅವರು ಹಲವು ಅಭಿಪ್ರಾಯಗಳನ್ನು ದೃಢಪಡಿಸಿದ್ದಾರೆ ಮತ್ತು ‘ಲಾನ್ಸೆಟ್’ ಪತ್ರಿಕೆಯಲ್ಲಿ ಐನ್‌ಸ್ಪನ್ ಬುದ್ಧಿಶಕ್ತಿಗೆ ಇವರ ಮಿದುಳೇ ಕಾರಣವೆಂದು ಹೇಳಿದ್ದಾರೆ.

೧೯೫೫ ರಲ್ಲಿ ತಮ್ಮ ೭೬ ನೇ ವಯಸ್ಸಿನಲ್ಲಿ ಮಿದುಳಿನ ರಕ್ತಸ್ರಾವದಿಂದ ಪ್ರಾಣಬಿಟ್ಟಿದ್ದರು. ಇವರ ಶವ, ಪರೀಕ್ಷೆ ಮಾಡಿದ ವೈದ್ಯ ಥಾಮಸ್ ಹಾರ್ವೇಗೆ ತನ್ನ ಮರಣಾಂತರ ತನ್ನ ಮಿದುಳಿನ ಪರೀಕ್ಷೆ ಮಾಡಬಹುದೆಂದು ಐನ್‌ಸ್ಟನ್ ಹೇಳಿದ್ದರ ಮೇರೆಗೆ ಅವರ ಮಿದುಳನ್ನು ಹೊರತೆಗೆದು ಅದನ್ನು ೮-೧೦ ಹೋಳುಗಳನ್ನಾಗಿ ಮಾಡಿ ಕೆಡದಂತೆ ಪಾರ್ಮಾಲ್ಡಿ ಹೈಡ್ ದ್ರವದಲ್ಲಿ ಅದ್ದಿ
ಉಪ್ಪಿನಕಾಯಿಯ ರೀತಿ ಒಂಡು ಬಾಟಲಿಯಲ್ಲಿ ರಕ್ಷಿಸಿದ್ದರು.

ಆಂಟಾರಿಯೋದ ಹ್ಯಾಮಿಲ್ಟನ್‌ನ ಮ್ಯಾಕ್ ಮಾಸ್ಪರ್ ವಿಶ್ವವಿದ್ಯಾಲಯದ ತಮ್ಮ ಸಹೋದ್ಯೋಗಿಗಳ ಜತೆಗೂಡಿ ಐನ್‌ಸ್ಟನ್ ಅವರ ಮೆದುಳಿನ ಅಧ್ಯಯನ ನಡೆಯಿಸಿದ ಸಾಂಡ್ರಾ ಅವರು ಸಾಮಾನ್ಯ ಬುದ್ಧಿಮತ್ತೆಯನ್ನು ಹೊಂದಿದ ೩೫-ಪುರುಷರು, ೫೬-ಮಹಿಳೆಯರ ಮಿದುಳಿನ ಜತೆಗೆ ಐನ್‌ಸ್ಟನ್ ಅವರ ಮೆದುಳನ್ನು ಹೋಲಿಸಿ ಅಧ್ಯಯನ ನಡೆಯಿಸಿದರು. ಐನ್‌ಸ್ಟನ್ ಅವರ ಮೆದುಳು ಸಾಮಾನ್ಯರ ಮೆದುಳಂತೆ ಇದೆಯಾದರೂ ಸಾಮಾನ್ಯ ಜನರಲ್ಲಿರುವಂತೆ ಪೆರಿಟರ್ ಅಸರ್‌ಕ್ಯೂಲಮ್ ಇಲ್ಲದಿರುವುದು ಮೆದುಳಿನ ಎರಡು ಕಡೆಗಿರುವ ಇನ್‌ಪೆರಿಯರ್ ಪೆರಿಟರ್ ಭಾಗ ವಿಜ್ಞಾನಿಯ ಮೆದುಳಲ್ಲಿ ವಿಸ್ತಾರವಾಗಿ ಬೆಳೆದಿದ್ದು ಇದು ಮಿದುಳಿನ ಎರಡು ದಿಕ್ಕಿಗೆ ಶೇ.೧೫ ರಷ್ಟು ಹೆಚ್ಚಿನ ಭಾಗಕ್ಕೆ ವಿಸ್ತರಿಸಿದ್ದರಿಂದ ಐನ್‍ಸ್ಟನ್ ಅವರ ಅಪಾರ ಬುದ್ಧಿಮತ್ತೆಗೆ ಕಾರಣವಾಗಿರಬಹುದೆಂದು ಸಂಶೋಧಕರು ವಾದಿಸುತ್ತಾರೆ. ಸಾಮಾನ್ಯವಾಗಿ ಎಲ್ಲರ ಮೆದುಳಲ್ಲೂ ಮಧ್ಯದಲ್ಲೊಂದು ಗೀರು ಇರುತ್ತದೆ. ಇದ್ಗು ನೆತ್ತಿಯ ಮೂಲಕ ಮೆದುಳಿನ ಹಿಂಭಾಗಕ್ಕೆ ಕತ್ತಿನವರೆಗೂ ಇರುತ್ತದೆ. ಆದರೆ ಇವರ ಮಿದುಳಿನಲ್ಲಿ ಆಗೀರು ಹಿಂಭಾಗಕ್ಕೆ ಬಂದಿರುವುದಿಲ್ಲ. ಬೇರೆಯಾವ ಮಿದುಳಿನಲ್ಲಿಯೂ ಕಾಣದ ಅಪರೂಪದ ಲಕ್ಷಣ ಇದಾಗಿದೆ. ಇಲ್ಲಿ ನರತಂತುಗಳು ಪರಸ್ಪರ ಬೆಸುಗೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನರಸಂದೇಶಗಳ ವಿನಿಮಯ ಚುರುಕಾಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳುತ್ತ ಈ ಕಾರಣವಾಗಿ ಇವರ ಬುದ್ಧಿಶಕ್ತಿಗೆ ಇದೇ ಕಾರಣವೆಂದು ವಾದಿಸುತ್ತಾರೆ.
*

Tagged:

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...