Home / ಕಥೆ / ಕಾದಂಬರಿ / ಸುಭದ್ರೆ – ೪

ಸುಭದ್ರೆ – ೪

ರಾಮರಾಯನು ರಾಮವುರದಲ್ಲಿ ಅಗ್ರಗಣ್ಯನಾದ ಮನುಷ್ಯ ; ದೊಡ್ಡ ಮನೆತನಕ್ವೆ ಸೇರಿದವನು. ತನ್ನ ಮಗಳನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಶೆ ಯಿದ್ದಿತು. ಶಂಕರರಾಯನಿಗೂ ರಾಮರಾಯನಿಗೂ ಪೂರ್ವದಿಂದ ಲೂ ಸ್ನೇಹ, ಅಲ್ಲದೆ ಸ್ವಲ್ಪ ಬಂಧುತ್ವವೂ ಇದ್ದಿತು. ಆದುದರಿಂದ ಕಮಲೆಯನ್ನು ಮಾಧವನಿಗೆ ತಂದುಕೊಳ್ಳಬೇಕೆಂದು ೩-೪ ವರ್ಷಗಳ ಹಿಂದೆಯೆ ಶಂಕರರಾಯನಿಗೆ ಕಾಗದ ಬರೆದಿರಲಾಗಿ ಆತನು, ನಮ್ಮ ಹುಡುಗನಿಗೆ ೨೦ ವರ್ಷ ತುಂಬಿದಲ್ಲದೆ. ಮದುವೆಮಾಡುವುದಿಲ್ಲ ವೆಂದು ಉತ್ತರಕೊಟ್ಟಿದ್ದನು. ಆಗ್ಗೆ ರಾಮರಾಯನು ಸುಮ್ಮನಿದ್ಧು ಬಿಟ್ಟನು. ಹುಡುಗಿಗೆ ೧೨ ವರ್ಷವಾಗಲು, ಇನ್ಸು ‘ನಿಲ್ಲಿಸುವುದ ಕ್ಕಾಗುವುದಿಲ್ಲ, ಈ ವರ್ಷ ಖಂಡಿತವಾಗಿಯೂ ವಿವಾಹವನ್ನು ನೆರ ವೇರಿಸಲೇಬೇಕು` ಎಂದು ತಿರಿಗಿ, ಬರೆದನು. ಶಂಕರರಾಯನಿಗೆ ಸಕಾ ಲವಾಗಿ, ಕಂಡುದರಿಂದಲೂ, ರಾಮರಾಯನಿಗಿಂತ ಯೋಗ್ಯರೂ, ಕುಲೀನರೂ ಸಿಕ್ಕುವುದು ಕಷ್ಟವಾಗಿದ್ದುದರಿಂದಲೂ – “ನಮ್ಮ ಹುಡುಗನು ರಾಮ ಪುರಕ್ವೆ ಬಂದಿದ್ದಾನೆ, ಅವನಿಗೆ ವಯಸ್ಸಾಗಿರು ವುದರಿಂದ ಕನ್ಯೆಯನ್ನೊವ ಭಾರವು ಅವನದಾಗಿದೆ, ಅವನೊ ಪ್ಪಿದರೆ ನನ್ನ ಅಡ್ಡಿಯೇನೂ ಇಲ್ಲ. ನಕ್ಷತ್ರಾನುಕೂಲವಾದರೆ ಸರಿ“. ಎಂದು ಪ್ರತ್ಯುತ್ತರವನ್ನು ಬರೆದನು. ಅದು ಮಾಧವನು ರಾಮ ಪು ರಕ್ಕೆ ಬಂದ ಮಾರನೆಯದಿನ ರಾಮರಾಯನ ಕೈಸೇರಿತು, ಆ˜ಕಾಗದ ವನ್ನು, ತೆಗೆದುಕೊಂಡು ರಾಮರಾಯನು ಮಾಧವನನ್ನು ನೋಡುವು ದಕ್ಕೋಸ್ಕರ ಗಂಗಾಬಾಯಿಯ ಮನೆಗೆ ಹೋದನು. . ಗಂಗಾಬಾ ಯಿಯು ಪಾಠಶಾಲೆಗೆ. ಹೋಗಿದ್ದಳು, ಮಾಧವನೊಬ್ಬನೇ ಮನೆಯ ಲ್ಲಿದ್ದನು. ಮಾಧವನಿಗೂ ರಾಮರಾಯನಿಗೂ ಕುಶಲಪ್ರಶ್ನೆಗಳು ನಡೆದ ಬಳಿಕ ರಾಮರಾಯನು, ಶಂಕರರಾಯನ ಕಾಗದವನ್ನು ತೆಗೆದು ಮಾಧವನ ಕೈಲಿಟ್ಟನು. ಅದನ್ನು ನೋಡಿದಕೂಡಲೆ ಮಾಧವನು “ಸ್ವಾಮೀ ! ನಮ್ಮ ತಂದೆಗಳ ಮಾತಿಗೆ ನಾನುಯಾವಾಗಲೂ ಪ್ರತಿ ಹೇಳುದುದಿಲ್ಲ. ಇದರಲ್ಲಿ ನನಗೆ ಅಭಿಪ್ರಾಯವು ಅನ್ಯಥಾ ಇದ್ದಾಗ್ಗೂ ಅವರ ಅಪ್ಷಣೆಯಾದರೆ ನನ್ನ ಯತ್ನವೇನಿದೆ” ಎಂದನು. ಅದಕ್ಕೆ ರಾಮರಾಯನು –“ಹಾಗಲ್ಲ, ನಮ್ಮ ಮನೆಗೆ ಬಂದು ಕನ್ಯೆಯನ್ನು ನೋಡಿಕೊಂಡು. ಹೋಗುವುದು ಈಗಿನ ಕಾಲದ ಪದ್ಬತಿ. ದಯ ವಿಟ್ಟು ಬಂದು ನೋಡಿಕೊಂಡು ಹೋಗಬೇಕು“ ಎಂದನು. ಮಾಧ ವನು ‘ಮಧ್ಯಾಹ್ನ ಒಂದು ತಮ್ಮ ದರ್ಶನ ತೆಗೆದು ಕೊಳ್ಳುತ್ತೇನೆ“` ಎಂದು ಹೇಳಿ ರಾಮರಾಯನನ್ನು ಕಳುಹಿಸಿಕೊಟ್ಟನು.

ಗಂಗಾಬಾಯಿ ಪಾಠಶಾಲೆಯಿಂದ ಬಂದಕೂಡಲೆ ಮಾಧ ವನ್ನು ಆಕೆಗೆ. ಈ ವೃತ್ತಾಂತವನ್ನು ತಿಳಿಸಿದನು. ಅವಳು –“ಅಪ್ಪಾ ಕಮಲೆಯು ಗರ್ವಿತಳು, ನಿನಗೆ ತಕ್ಕವಳಲ್ಲ, ನಿಮ್ಮ ತಂದೆಯು ರಾಮ ರಾಯನ ಭಾಗ್ಯಕ್ಕೆ ಬೆರಗಾಗಿ ಬಂಧುತ್ವ ಬಳೆಸಬೇಕೆಂದು ಇಷ್ಟ ಪಟ್ಟಿರಬಹುದು,, ಮಧ್ಯಾಹ್ನ ಹೋಗಿ ನೋಡಿಕೊಂಡ್ಲು. ಬಾ. ಮುಂದಿನ ಕೆಲಸ ನೋಡೋಣ” ಎಂದಳು.

ಮಧ್ಯಾಹ್ನ ರಾಮರಾಯನು ಬಂದು ಮಾಧವನನ್ನು ಮನೆಗೆ ಕರೆದುಕೊಂಡು ಹೋಗಿ ಉಪ್ಪರಿಗೆಯಮೇಲೆ “ಸೋಫಾ”ದ ಮೇಲೆ ಕುಳ್ಳಿರಿಸಿದನು. ಅನಂತರ ಹೆಂಡತಿಯನ್ನು ಕರೆದು “ನಿನ್ನ ಅಳಿಯನನ್ನು ನೋಡು ಬಾ” ಎಂದನು. ಆಕೆಯು ಎಷ್ಟಾವೃತ್ತಿ ನೋಡಿದರೂ ತೃಪ್ತಿಯಾಗದೆ ನೆರೆಹೊರೆಯವರನ್ನು ಕರೆದುಕೊಂಡು ಬಂದಳು. ಹಾಗೆಯೆ ಕಮಲೆಯನ್ನು ಮಾಧವನ ಬಳಿ ನಿಲ್ಲಿಸಿ ಅನಂ ತರ ಸೋಘಾದ ಮೇಲೆ ಕುಳ್ಳಿರಿಸಿದರು. ಮಾಧವನಿಗೆ, ಅವಳನ್ನು ನೋಡಿದೊಡನೆಯೆ ಜಿಗುಪ್ಸೆಯುಂಟಾಯಿತು. ಅವಳ ರೂಪಲಾವ ಣ್ಯವೆಲ್ಲವೂ ಉಡಿಗೆ, ತೊಡಿಗೆಗಳನ್ನು ಸೇರಿದ್ದಿತೇ ಹೊರತು ಅವಳಲ್ಲಿ ನೈಜವಾದ ಸೊಬಗಾವುದೂ ಕಂಡುಬರಲಿಲ್ಲ, ಅಲ್ಲದೆ ಮುಖದಲ್ಲಿ ಗರ್ವವು ಉಕ್ಕಿ ಬರುವಂತಿದ್ದಿತು. ಕೂಡಲೆ ಮಾಧವನಿಗೆ ಸುಭದ್ರೆಯ ಜ್ಞಾಪಕವು ಬಂದಿತು. ಆವಳಿಗೂ ಇವಳಿಗೂ ಇರುವ ತಾರತಮ್ಯ ವನ್ನು ಮನಸ್ಸಿನಲ್ಲೆ ಗಣಿಸುತ್ತಿದ್ದನು.

ನೆರಹೊರಿಯ ಹೆಂಗಸರಲ್ಲರೂ ಬಂದು ನೋಡಿ ವರಸಾಮ್ಯ ವನ್ನು ಬಹಳ ಶ್ಲಾಘನೆಮಾಡಿದರು. ಕಮಲೆಯ ತಾಯಿಯ ಸಂ ತೋ ಷವೆಷ್ಟೆಂದು ಹೇಳಬೇಕಾದುದೇ ಇಲ್ಲ. ಬಂದಿದ್ದವರೆಲ್ಲರಿಗೂ ಯಥೋಚಿತವಾಗಿ ಸತ್ಕಾರಮಾಡಿ ಕಳುಹಿಸಿದಳು.. ಮಾಧವನೂ ರಾಮರಾಯನ ಅಪ್ಪಣೆ ತೆಗೆದುಕೊಂಡು. ಹೊರಟುಹೋದನು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...