Home / ಲೇಖನ / ಇತಿಹಾಸ / ಪಾಳಯಗಾರರು

ಪಾಳಯಗಾರರು

ಪಾಳೇಗಾರ

೧.೧ ೧ನೇ ಉಪನ್ಯಾಸ

ಮೈಸೂರು ಡಿಸ್ಟ್ರಿಕ್ಟಿನಲ್ಲಿ ತಲಕಾಡೆಂಬ ಒಂದು ಪುಣ್ಯಸ್ಥಳವಿದೆ. ಅದು ಕಾವೇರಿತೀರವಾಗಿದೆ. ತಿರಮಕೂಡಲಲ್ಲಿ ಕಪಿಲಾ ಕಾವೇರಿ ಸಂಗಮವಾಗಿ ಅಖಂಡ ಕಾವೇರಿಯು ತಲಕಾಡಿಗೆ ಹರಿದುಹೋಗುವುದು. ಈ ನದೀತೀರದಲ್ಲಿ ನೀರಿನ ಅಲೆಯಿಂದ ಮರಳು ಬಂದುಬಿದ್ದು ಅದು ಗಾಳಿಯಿಂದ ತೂರಿಕೊಂಡುಬಂದು ಹಲವು ಮೈಲಿಗಳವರೆಗೂ ಮರಳೇ ಮುಚ್ಚಿಕೊಂಡುಹೋಗಿದೆ. ಒಂದೊಂದು ಕಡೆ ಆ ಮರಳು ದೊಡ್ಡ ಬೆಟ್ಟದ ಹಾಗೆ ರಾಸಿಯಾಗಿ ಅಲ್ಲಲ್ಲಿ ಬಿದ್ದಿದೆ. ಇದೆಲ್ಲಾ ಗಜಾರಣ್ಯಕ್ಷೇತ್ರವೆಂದು ಹೆಸರುಗೊಂಡಿರುವುದಾಗಿ ಸ್ಥಳ ಪುರಾಣವಿದೆ. ಈ ಪ್ರದೇಶ ದಲ್ಲಿ ಅನೇಕ ದೇವಸ್ಥಾನಗಳಿದ್ದವಂತೆ. ಅದೆಲ್ಲಾ ಮರಳಿನಲ್ಲಿ ಮುಚ್ಚಿ ಹೋಗಿರುವುದಾಗಿ ತಿಳಿಯಬರುವುದು. ಕೆಲವು ಮಾಸ ತಿಥಿ ವಾರ ನಕ್ಷತ್ರ ಮೊದಲಾದ ಸಂಯೋಗ ಸಂಭವಿಸಿದಾಗ ಅಲ್ಲಿರುವ ಪ್ರಸಿದ್ದ ವಾದ ವೈದ್ಧೇಶ್ವರ, ಮರಳೇಶ್ವರ, ಪಾತಾಳೇಶ್ವರ, ಗೋಕರ್ಣೇಶ್ವರ, ಮಲ್ಲಿಕಾರ್ಜುನೇಶ್ವರ ಎಂಬ ಐದು ಲಿಂಗಗಳನ್ನು ದರ್ಶನಮಾಡಿದರೆ ಬಹಳ ಪುಣ್ಯ ಉಂಟೆಂದು ಹೇಳುತ್ತಾರೆ. ಇಂಥಾ ಸಂಯೋಗವು ೩ ವರುಷಕ್ಕೆ, ೫ ವರುಷಕ್ಕೆ, ೧೨ ವರುಷಕ್ಕೆ ಒಂದೊಂದು ಸಾರಿ ಹೀಗೆ ಬಿಟ್ಟು ಬಿಟ್ಟು ಬರುವುದು. ಜನರು ಅಪಾರವಾಗಿ ಜಾತ್ರೆಗೆ ನೆರೆಯುವರು. ಮುವತ್ತು ನಲವತ್ತು ಸಾವಿರ ಜನದವರೆಗೂ ಸೇರುವುದು. ಈ ದೊಡ್ಡ ಜಾತ್ರೆಗೆ ಪಂಚಲಿಂಗದರ್ಶನವೆಂದು ಹೇಳುವರು. ಈ ಪುಣ್ಯಕ್ಷೇತ್ರದಲ್ಲಿ ಒಂದು ಐತಿಹ್ಯ ಉಂಟು. ಇಲ್ಲಿ ಅನೇಕ ಶಿವ ದೇವಾಲಯಗಳು ಇದ್ದು ಅವುಗಳೆಲ್ಲಾ ಮರಳು ಮುಚ್ಚಿ ಹೋಗಿವೆಯೆಂದು ಹೇಳುತ್ತಾರೆ. ಪೂರ್‍ವದಲ್ಲಿ ಒಬ್ಬ ವ್ಯಾಪಾರಿಯು ಒಂದು ಸೇರು ಕಡಲೆಯನ್ನು ತಂದು ಆ ಪ್ರದೇಶದಲ್ಲಿ ಶಿವದೇವಾಲಯಗಳ ದೇವರ ಮುಂದೆ ಒಂದು ದೇವರಿಗೆ ಒಂದು ಕಡಲೆಯಂತೆ ಇಟ್ಟು ನಿವೇದನ ಮಾಡುತ್ತಾ ಹೋದನಂತೆ. ಕೊನೆಯಲ್ಲಿ ಮಲ್ಲಿಕಾರ್ಜುನೇಶ್ವರನ ಗುಡಿಯ ಬಳಿಗೆ ಬರುವಾಗ ಒಂದು ಕಡಲೆ ಸಾಲದೆಹೋಯಿತಂತೆ, ಆ ದೇವರು ಮುನಿಸಿಕೊಂಡು ನದಿಯ ಆಚೆಹೋಗಿ ವಿಜಾಪುರವೆಂಬ ಊರಲ್ಲಿ ಕೂತುಕೊ೦ಡಿತಂತೆ. ಆ ಹೇರಿನಲ್ಲಿ ಎಷ್ಟು ಕಡಲೇಕಾಳು ಇತ್ತೊ ಅಷ್ಟು ಲಿಂಗಗಳು ಅಲ್ಲಿ ಪ್ರತಿಷ್ಟೆಯಾಗಿದ್ದು ಈಗ ಅದೆಲ್ಲಾ ಮರಳಲ್ಲಿ ಮುಚ್ಚಿಹೋಗಿದೆ ಎಂದು ಹೇಳುತ್ತಾರೆ.

ಈ ಸ್ಥಳೀಯವಾದ ಒಂದು ಐತಿಹ್ಯವನ್ನು ಈ ನಮ್ಮ ಭರತಖಂಡವೆಂಬ ಮಹಾರಾಜ್ಯಕ್ಕೆ ಹೋಲಿಸಿ ಚರಿತ್ರೆ ಎಂಬ ದುರ್ಬನ್ ಅಥವಾ ನಾಳಕಾಯಂತ್ರದಿಂದ ಶೋಧಿಸಿ ನೋಡಿದರೆ, ಇಲ್ಲಿ ಆಳಿದ ದೊರೆಗಳಿಗೆ ಹೆಸರಿಗೊಂದು ಕಡಲೇಕಾಳನ್ನು ನಜರಾಗಿ ಹಾಕುತ್ತಾ ಬಂದಾಗ್ಯೂ ಅಂಥಾ ಕಡಲೆ ಹೇರು ಅನೇಕವಾಗಬಹುದು. ಅಷ್ಟೊಂದು ಜನ ರಾಜರು ಇಲ್ಲಿ ಆಳಿದರು. ಈ ರಾಜರುಗಳಲ್ಲಿ ಕೆಲವರು ದೊಡ್ಡದಾಗಿ ಸೀಮೆಯನ್ನು ಕಟ್ಟಿ ಚಕ್ರಾಧೀಶ್ವರರೆನ್ನಿಸಿಕೊಂಡರು. ಇನ್ನು ಕೆಲವರು ಚಿಕ್ಕ ಚಿಕ್ಕ ರಾಜ್ಯಗಳನ್ನು ಆಳುತಾ ಸ್ವತಂತ್ರರಾಗಿದ್ದರು. ಮತ್ತು ಅವರು ಒಂದೊಂದು ವೇಳೆ ಅಲ್ಲಲ್ಲಿ ಚಕ್ರಾಧೀಶ್ವರರೆನ್ನಿಸಿಕೊಂಡಿದ್ದವರಿಗೆ ವಶವರ್ತಿಗಳಾಗಿ ಆಳಿಕೊಂಡಿದ್ದರು. ಇಂಥಾ ಚಿಕ್ಕ ರಾಜಾಧಿಪತಿಗಳಲ್ಲಿ ಹಲವರಿಗೆ ಈಚೆಗೆ ಪಾಳಯಗಾರರೆಂದು ಹೆಸರು ಬಂದಿದೆ. ಇಂಥಾ ಪಾಳಯಗಾರರ ಸಂಸ್ಥೆಯನ್ನು ಕುರಿತು ಕನ್ನಡಭಾಷೆಯಲ್ಲಿ ಉಪನ್ಯಾಸ ಮಾಡಬೇಕೆಂದು ಮೈಸೂರು ಯೂನಿವರ್ಸಿಟಿ ಎಂಬ ವಿದ್ಯಾ ನಿಲಯದವರು ನನ್ನನ್ನು ನೇಮಕಮಾಡಿದ ಕಾರಣ, ಈ ವಿಷಯದಲ್ಲಿ ನನಗೆ ತಿಳಿದ ಕೆಲವು ಸಂಗತಿಯನ್ನು ತಮಗೆ ಅರಿಕೆ ಮಾಡಿಕೊಳ್ಳುತ್ತೇನೆ, ಸಾವಾಧಾನಚಿತ್ತದಿಂದ ಲಾಲಿಸಬೇಕು.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...