ಈ ಪ್ರಪಂಚದಲ್ಲಿ ನಾನು, ಕೇವಲ

ಈ ಪ್ರಪಂಚದಲ್ಲಿ ನಾನು ಕೇವಲ…
ಪ್ರಪಂಚ… ಅಂದರೆ ಏನು ಅಂತ ನಿನಗೆ ಗೊತ್ತಲ್ಲ…
ಕೇವಲ ನಿನ್ನನ್ನು ಮಾತ್ರ ನೀನು ಅಂತ ಕೂಗಬಹುದು.

ನಾವು ಮಾತಾಡಲ್ಲ.
ಆಡಿದರೂ ನಮಗೆ ನಮ್ಮ ಮಾತಿನ ಸಂಬಂಧ ಇರಲ್ಲ.
ನಾವು ಆಡಿದಕ್ಕಿಂತ ಬೇರೆ ಇನ್ನೇನೋ ನಮ್ಮ ಅರ್ಥ ಇರುತ್ತೆ.

ಅದು, ಕೆಲವು ಸಾರಿ,
(ನಾವು ಒಬ್ಬರೇ ಇರುವಾಗ), ನಮಗೆ
ಗೊತ್ತಾಗಿದೆಯಾ ಅಂತ
ಅನುಮಾನ ಬರುವುದುಂಟು, ಹೌದಲ್ಲಾ?

ಆಗ ನಿನ್ನ ಕಣ್ಣಲ್ಲಿ ತೇವ ಇರುತ್ತೆ.
ಆಗ ನಾವು ಸುಮ್ಮನೆ ಆಗುತ್ತೇವೆ.
ಆಗ ನಮಗೆ ಏನೋ ಗೊತ್ತಾಗುತ್ತೆ.
ಆಗ ನಿನ್ನ ರೆಪ್ಪೆಗಳ ಮೇಲೆ ರೆಪ್ಪೆ
ನಿಧಾನವಾಗಿ ನೆಮ್ಮದಿಯಾಗಿ ಊರುತ್ತೆ.
ತುಂಬ.
ನೀನು ನನ್ನ ಹೆಸರು ಹೇಳುತ್ತೀಯೆ.

ನಾನು ನನ್ನ ಹೆಸರಾಗಿ
ಅದು, ಅದೇ ಎಲ್ಲ ಬೇಕಾದ್ದು ಎಲ್ಲ
ಹೇಳಬೇಕಾದ್ದು, ಎಲ್ಲಾ ಆಗಿ
ನನ್ನಿಂದ ನಿನ್ನ ಹೆಸರಾಗಿ ಬರುತ್ತದೆ.
ಓ, ನಾವು ನಾವು ನೀನು ನಾನು ನಾವು ನಾವು.

ಈ ಪ್ರಪಂಚದಲ್ಲಿ ನಿನ್ನನ್ನು ಮಾತ್ರ
‘ನೀನು’ ಅಂತ ಕೂಗಬಹುದು,
ಅದೆಲ್ಲ ನಮಗೆ ಆಗುತ್ತಿರುವಾಗಲೇ
ಕಳೆದೂ ಹೋಗುತ್ತಿರುತ್ತದೆ.
ನಮಗೆ ಅದು ಆಗಲೇ ಗೊತ್ತಾಗಲ್ಲ.
ಗೊತ್ತಿರಲ್ಲ. ಆಮೇಲೆ, ಗೊತ್ತಾದಾಗ
ಗೊತ್ತಾದಾಗ
(ಮಾತೆಂಬುದು ಬರೀ ಸುಳ್ಳು)
ಹೇಗೆ ಎಂದು ನನಗೆ ಗೊತ್ತಿಲ್ಲ
ನಾನು ಬೇರೆ ನೀನು ಬೇರೆ
ಒಬ್ಬೊಬ್ಬರೇ ಆಗಿರುತ್ತೇವೆ,
ಆದರೆ ಈ ಪ್ರಪಂಚದಲ್ಲಿ ನನಗೆ ನೀನು ಮಾತ್ರವೇ
ನೀನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪ್ಪವ್ವಾ ಉಪ್ಪು
Next post ಚಿತ್ರದುರ್ಗ ಜಿಲ್ಲೆಯ ಅವಿಸ್ಮರಣೀಯ ಸಾಹಿತ್ಯ ಸಿರಿ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…