Home / ಕವನ / ಕವಿತೆ / ಓಡಿ ಬಾ

ಓಡಿ ಬಾ

ಕ್ರಾಂತಿ ಕಂದ
ನಿನ್ನ ಅಂದ
ಕಾಣಲೆಂದ
ಕವಿಗೆ ಬಂಧ
ಮುಕ್ತಿ ನೀಡು ಬಾ

ನಗೆಗಡಲಲಿ ನಲಿದು ಬಾ
ಸುಳಿಯೊಡಲಲಿ ಸುಳಿದು ಬಾ
ಮುಗಿಲಲೆಯಲಿ ಮುಳಿದು ಬಾ-ಓಡಿ ಬಾ ||

ಅಂಧಕಾರದಲ್ಲಿ ಬಂದು
ಮುಗಿಲಮಡಿಲಿನಲ್ಲಿ ನಿಂದು
ತಂಬೆಳಕನು ತಂದು ತಂದು
ಎಳೆಯೆಳೆಯಲಿ ಹರಡುವಂತೆ
ಬಾನಿನಲ್ಲಿ ಹೊಳೆವಸಂತೆ ಬಾ….

ಜೀವನದಿಂದುಕ್ಕಿ ಉಕ್ಕಿ
ಸಾವಕಡಲ ಎಣೆಯ ಮಿಕ್ಕಿ
ನೋವನೆಲ್ಲ ಸೆದೆಯನಿಕ್ಕಿ ಬಾ….

ಜೀವನದಲಿ ಸಾವಿನಲ್ಲಿ
ಕನಸಿನಲ್ಲಿ ನನಸಿನಲ್ಲಿ
ಸಪ್ತಜಗಗಳೊಡಲಿನಲ್ಲಿ
ಹರಿಯುತಿರುವ ಹೊನಲೆ ಬಾ
ಕಂದ ಕರೆಯುತಿರುವೆ ಬಾ….

ಗುಡುಗು ಗುಡುಗಿ ಸಿಡಿಲು ಸಿಡಿದು
ವಿಶ್ವಕರ್ಮನೆದೆಯನೊಡೆದು
ಭೂಗರ್ಭದ ಶಾಂತಿ ಕಡೆದು
ಜೀವತಂತಿ ಮಿಡಿದು ಮಿಡಿದು
ಹೊಸ ಜಗವನು ಸೃಜಿಸು ಬಾ
ಓ ಓಡಿಬಾ….

ಕಾವಿಲ್ಲದೆ ಜೀವವೆಲ್ಲಿ
ಕ್ರಾಂತಿ ಕಾವೆ ಬಾ
ನೋವಿಲ್ಲದೆ ಕಾವುದೆಲ್ಲಿ
ನೋವ ನುಡಿಯೆ ಬಾ
ಅಳಿವಿಲ್ಲದೆ ಉಳಿವು ಎಲ್ಲಿ
ಅಳಿವಿನುಳುಮೆ ಬಾ….

ಜೀವ ಸಂಗ್ರಾಮದಲ್ಲಿ
ಬಾಳಿನಿರುಳ ರಂಗದಲ್ಲಿ
ಸುಳಿಗಾಳಿಯ ಮಡುವಿನಲ್ಲಿ
ಸುಳಿಸುಳಿಯುತ ಬಾ
ಸುಖಸೃಜಿಸುವ ಬಾ….

ಬಾಳಬಯಲ ಬಳಸಿ ಸುತ್ತ
ಆಳುತಿರುವ ಗೋಳನತ್ತ
ಬೀಳುಗೊಳಿಸಿ ಅತ್ತ ಇತ್ತ
ನಗೆ ಹೊನಲನು ಹರುಡು ಬಾ

ಸುಖದ ಸುಗ್ಗಿ
ಬೆಳೆದು ಅಳೆದು
ಜೀವ ಹುಗ್ಗಿ
ಅಳೆದು ಅಳೆದು
ಎಲ್ಲ ಚೆಲ್ಲು ಬಾ
ಓ!

ಕ್ರಾಂತಿ ಕಂದ
ನಿನ್ನ ಅಂದ
ಕಾಣ ಲೆಂದ
ಕವಿಗೆ ಬಂಧ
ಮುಕ್ತಿ ನೀಡು ಬಾ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...