ಅಣ್ಣ ಬಸವಣ್ಣನಿಗೆ ಪ್ರಶ್ನೆ…

ಅಣ್ಣ ಬಸವಣ್ಣ ಇದೆಲ್ಲ ಏನಣ್ಣ?
ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ?
ಜಾತಿ ಹೀನನಾ ಮನೆಯ ಜ್ಯೋತಿ ನೀ…
ಹೀನ ಜಾತಿಗಳ ಪೊರೆದ ದೊರೆ ನೀ…!
*

ಕಲ್ಯಾಣದ ಬೆಂಕಿ ನೀ
ಕೆಳ ಜಾತಿ, ಮತ, ವರ್ಗಗಳಿಗೆ, ಕಣ್ಣು ನೀ
‘ಹೌದು! ಮಾದಿಗರ ಮನೆ ಮಗ ನೀ…’
…ನೀ ಎನಂದರೂ ನಂಬದಾ ಜನಾ-ನಾವು!
*

ಎಲ್ಲರ ಅಣ್ಣ, ಬಸವಣ್ಣನಾಗಿರುವಾಗ,
ಯಾರಿಗೂ ಸಿಗದೇ, ಕ್ರಾಂತಿಯಲ್ಲಡಗಿರುವಾಗ,
‘ನೀ ನಮ್ಮವ! ನೀ ಯಾರವ? ಅವ ಬೇರವ…’
ಎಂಬುವವರ ಕೆರದಿಂದ ಹೊಡೆಯೆಂಬೆಯೇನು??
*

ಜಾತಿ, ಜಾತಿ, ನೀ ಹೋಗು, ಊರಾಚೆಂದರೂ…
ಬಿಡದು, ಅಣ್ಣ ಬಸವಣ್ಣನಿಗೂ… ದೇವನಿಗೂ…
ಈ ಜಾತಿ, ವಿಜಾತಿನ ಇನ್ನೆಂಥಾ ಅಂಟಿನಿಂದ,
ಮಾಡಿರುವರೆಂದು, ನೀನಾದರೂ ಹೇಳಣ್ಣ?!
*

ಅಣ್ಣ ನೀ, ಯಾರಾದರೇನು? ಮನುಶ್ಯನೆಂಬುದು ಖರೇ…
ನಿನ್ನ ವಚನ, ಕಾಯಕ, ನಮಗೆ ಸ್ಫೂರ್ತಿದಾಯಕ!
ಅಣ್ಣ ನೀ, ನಮ್ಮವನಾದರೇನು??
ನಮ್ಮ ಭವಣೆ, ಇನ್ನು ತೀರಿಲ್ಲವಲ್ಲ ಯಾಕೆ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರ ಹೇಳಿದ್ದು
Next post ಕುಲಗೆಟ್ಟ ಹೆಣ್ಣು

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…