Home / ಬಾಲ ಚಿಲುಮೆ / ಕವಿತೆ / ತೆಂಗಿನ ಮರವೇ ಆಗ್ತೀಯ!

ತೆಂಗಿನ ಮರವೇ ಆಗ್ತೀಯ!

ನಮ್ಮನೆ ತೆಂಗಿನ ಮರಕ್ಕೆ ಎಂಟು
ವರ್ಷ ಆಯ್ತಂತೆ,
ಆದ್ರೂ ಎಷ್ಟೊಂದ್ ಎತ್ರ! ಮೊದ್ಲು
ಪುಟ್ಟಕ್ಕಿತ್ತಂತೆ

ನನಗೂ ಈಗ ಅಷ್ಟೇ ವರ್ಷ
ಆದ್ರೂ ಚಿಕ್ಕೋನು,
ನಾನ್ಯಾಕ್ ಮತ್ತೆ ಆಗ್ಲೇ ಇಲ್ಲ
ಮರದಷ್ಟ್ ದೊಡ್ಡೋನು?

ಅಪ್ಪನ್ ಕೇಳ್ದೆ ಗದರಿಸಿ ಹೇಳ್ದ
ನನಗೀಗ್ ಬಿಡುವಿಲ್ಲ,
“ನೀ ಚಿಕ್ಕೋನು, ಹೇಳಿದ್ರೂನು
ನನಗದು ತಿಳಿಯೊಲ್ಲ”

ಅಮ್ಮನ್ ಕೇಳ್ದೆ ಹೇಳಮ್ಮಾಂತ
ಬಾಚಿ ತಬ್ಕೊಂಡ್ಲು.
ನಿಧಾನವಾಗಿ ಯಾಕೇನ್ನೋದ
ಎಲ್ಲಾ ಹೇಳಿದ್ಲು.

“ತೆಂಗಿನ್‌ಮರವೋ ಗಲಾಟೆ ಮಾಡ್ದೆ
ಸುಮ್ನೆ ಬೆಳೆಯತ್ತೆ,
ಹಗಲೂ ರಾತ್ರಿ ಬೆಳೆಯೋದನ್ನೇ
ಯೋಚ್ನೆ ಮಾಡತ್ತೆ

ನೀನ್ಹಾಗಲ್ಲ ಐವತ್ತೆಂಟು
ಕೀಟ್ಲೆ ಮಾಡ್ತಿರ್‍ತಿ,
ತಮ್ಮನ್ ಹೊಡ್ದು, ತಂಗೀನ್ ಚಿವುಟಿ
ಅಣ್ಣಂಗ್ ಬಯ್ತಿರ್‍ತಿ.

ಓದಿ ಬರೆದು ಕಲತ್ಕೊ ಒಳ್ಳೇ
ಬುದ್ಧಿ ನಡತೇನ,
ಆಗ ಗುಣದಲ್ ನೀನೂ ತೆಂಗಿನ
ಮರವೇ ಆಗ್ತೀಯ!

ಕಣ್ಣೀಗ್ ಕಾಣೋ ಎತ್ತರ ಒಂದೇ
ಮುಖ್ಯ ಅಲ್ಲ ಮರಿ
ಗುಣದಲ್ ಎತ್ರ ಆಗೋವ್ರೂನೂ
ತೆಂಗಿನ ಮರವೆ ತಿಳಿ”
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...