Home / ಬಾಲ ಚಿಲುಮೆ / ಕವಿತೆ / ತೆಂಗಿನ ಮರವೇ ಆಗ್ತೀಯ!

ತೆಂಗಿನ ಮರವೇ ಆಗ್ತೀಯ!

ನಮ್ಮನೆ ತೆಂಗಿನ ಮರಕ್ಕೆ ಎಂಟು
ವರ್ಷ ಆಯ್ತಂತೆ,
ಆದ್ರೂ ಎಷ್ಟೊಂದ್ ಎತ್ರ! ಮೊದ್ಲು
ಪುಟ್ಟಕ್ಕಿತ್ತಂತೆ

ನನಗೂ ಈಗ ಅಷ್ಟೇ ವರ್ಷ
ಆದ್ರೂ ಚಿಕ್ಕೋನು,
ನಾನ್ಯಾಕ್ ಮತ್ತೆ ಆಗ್ಲೇ ಇಲ್ಲ
ಮರದಷ್ಟ್ ದೊಡ್ಡೋನು?

ಅಪ್ಪನ್ ಕೇಳ್ದೆ ಗದರಿಸಿ ಹೇಳ್ದ
ನನಗೀಗ್ ಬಿಡುವಿಲ್ಲ,
“ನೀ ಚಿಕ್ಕೋನು, ಹೇಳಿದ್ರೂನು
ನನಗದು ತಿಳಿಯೊಲ್ಲ”

ಅಮ್ಮನ್ ಕೇಳ್ದೆ ಹೇಳಮ್ಮಾಂತ
ಬಾಚಿ ತಬ್ಕೊಂಡ್ಲು.
ನಿಧಾನವಾಗಿ ಯಾಕೇನ್ನೋದ
ಎಲ್ಲಾ ಹೇಳಿದ್ಲು.

“ತೆಂಗಿನ್‌ಮರವೋ ಗಲಾಟೆ ಮಾಡ್ದೆ
ಸುಮ್ನೆ ಬೆಳೆಯತ್ತೆ,
ಹಗಲೂ ರಾತ್ರಿ ಬೆಳೆಯೋದನ್ನೇ
ಯೋಚ್ನೆ ಮಾಡತ್ತೆ

ನೀನ್ಹಾಗಲ್ಲ ಐವತ್ತೆಂಟು
ಕೀಟ್ಲೆ ಮಾಡ್ತಿರ್‍ತಿ,
ತಮ್ಮನ್ ಹೊಡ್ದು, ತಂಗೀನ್ ಚಿವುಟಿ
ಅಣ್ಣಂಗ್ ಬಯ್ತಿರ್‍ತಿ.

ಓದಿ ಬರೆದು ಕಲತ್ಕೊ ಒಳ್ಳೇ
ಬುದ್ಧಿ ನಡತೇನ,
ಆಗ ಗುಣದಲ್ ನೀನೂ ತೆಂಗಿನ
ಮರವೇ ಆಗ್ತೀಯ!

ಕಣ್ಣೀಗ್ ಕಾಣೋ ಎತ್ತರ ಒಂದೇ
ಮುಖ್ಯ ಅಲ್ಲ ಮರಿ
ಗುಣದಲ್ ಎತ್ರ ಆಗೋವ್ರೂನೂ
ತೆಂಗಿನ ಮರವೆ ತಿಳಿ”
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...