ಬುವಿಗಿಳಿದ ಸ್ವರ್ಗ

ದೂರದ ಸ್ವರ್ಗ ಬುವಿಗಿಳಿದು ಆಗಿದೆ ಕರುನಾಡು
ಲೋಕದ ಕಣ್ಮನ ಸೆಳೆಯುತಿಹ ಸುಂದರ ಸಿರಿನಾಡು ||ಪ||

ಸುಂದರ ಸಿರಿನಾಡು ನಮ್ಮ ಕಲಿಗನ್ನಡನಾಡು
ಶ್ರೀಗಂಧದ ಬೀಡು ಸರ್ವ ಚೇತನಮಯ ನಾಡು ||ಅ.ಪ||

ಕವಿ ಕೋಗಿಲೆಗಳು ಹಾಡಿರುವ ಸ್ಫೂರ್ತಿಯ ನೆಲೆವೀಡು
ನಾಟ್ಯ ಸರಸ್ವತಿ ನರ್ತಿಸಿಹ ನವರಂಗದ ಬೀಡು
ಕಲಿ ಗಂಡೆದೆಗಳು ಮೆರೆದಿರುವ ಸಿಡಿಲಿನ ಮರಿನಾಡು
ಇತಿಹಾಸದ ಪುಟ ಪುಟದಲ್ಲು ಬೆಳಗಿಹ ಕರುನಾಡು
ಕೃಷ್ಣ ಶರಾವತಿ ಕಾವೇರಿ ಹರಿದಿಹ ಹೊಳೆನಾಡು
ಮಲೆನಾಡಿನ ಗಿರಿಶೃಂಗಗಳು ಕಂಗೊಳಿಸಿಹ ಬೀಡು
ಪಡುವಣ ಕಡಲಲಿ ಬಿಂಬಿಸುವ ಕರಾವಳಿಯ ನೋಡು
ರತಿ ರೂಪಸಿಯರ ನಾಚಿಸುವ ಸುಂದರ ಕರುನಾಡು
ಮುಗಿಲನು ಮುಟ್ಟಿ ನಿಂತಿರುವ ಗೊಮ್ಮಟನ ನಾಡು
ವಿಶ್ವಖ್ಯಾತಿ ಕುಶಲಕಲಾ ಗುಮ್ಮಟಗಳ ಬೀಡು
ಮಾನವೀಯ ದನಿಗಳಿಗೆ ಜನ್ಮವಿತ್ತ ನಾಡು
ವಿಶ್ವಮಾನವತೆ ಸಾರುತಿಹ ಹೆಮ್ಮೆಯ ಕರುನಾಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಬಿ
Next post ಆಡಿ ನಲಿಯೋಣ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…