Home / ಕಥೆ / ಸಣ್ಣ ಕಥೆ / ಮುದಿ ಕಪ್ಪೆ

ಮುದಿ ಕಪ್ಪೆ

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ.

ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿದ. ಕಪ್ಪೆ ಕದಲಲಿಲ್ಲ. ಅವನ ಹೆಂಡತಿಯೇ ಅವನಿಗೆ ಹೆದರುವದಿಲ್ಲ. ಅಂದ ಮೇಲೆ ಕಪ್ಪೆ ಬೆದರುತ್ತದೆಯೇ? ಕಪ್ಪೆಗೇ ಹೊಡೆಯಲು ಅವನ ಮನಸ್ಸಾಗಲಿಲ್ಲ. ಈ ಕಪ್ಪೆಯನ್ನೋಡಿಸಲು ಹಿಂದೆ ಮುಂದೆ ನೋಡುವವರು ಯುದ್ಧಗಿದ್ದಕ್ಕೆ ಹೋದರೆ….” ಎಂದು ಉಮೆ ಚುಚ್ಚಿದಳು. ತನಗೆ ಕಪ್ಪೆಯೆನ್ನೊಡಿಸುವ ಧೈರವೂ ಇಲ್ಲವೆಂದು ಮಡದಿ ತೀರ್ಮಾನಿಸಿ ಕೊಂಡಳಲ್ಲ ಎಂದು ಉಮೇಶನಿಗೆ ನಾಚಿಕೆಯಾಯಿತು. ಆದರೆ ಅವನ ಸಂಕಟ ಅವಳಿಗೆಲ್ಲಿ ತಿಳಿಯಬೇಕು? ಕುರುಕ್ಷೇತ್ರದಲ್ಲಿ ಬಿಲ್ಲು ಬಾಣ ಬಿಸಾಡಿ ನಿಂತ ಅರ್ಜುನನಂತಾಗಿದ್ದ ಉಮೇಶ ಅವನ ತಲೆತುಂಬ ವಿಚಾರ.

ಪಾಪ, ಈ ಕಪ್ಪೆ ಕಚ್ಚುವದಿಲ್ಲ. ಏನೂ ಕದ್ದು ತಿನ್ನುವದಿಲ್ಲಸುಮ್ಮನೆ ನೀರಿನ ತಂಪಿಗಾಗಿ ಕೊಡದ ಬಳಿಗೆ ಕುಳಿತಿದೆ. ಹೊಡೆದರೆ
ಸಾಯುವದು. ನನ್ನ ಮೇಲೆ ತಿರುಗಿ ಬೀಳುವ ಪಾಶ್ವೀವೃತ್ತಿಯದಲ್ಲ. ಇಂಥ ಪ್ರಾಣಿಯನ್ನು ಓಡಿಸಬೇಕೇ? ಏಕೆ? ನನ್ನ ಮನೆಯೊಳಗೆ ಬಂದಿತೆಂದೇ? ಹೆಂಡತಿ ಹೇಳುತ್ತಾಳೆಂದೇ? ನನಗೆ ಈ ಕಪ್ಪೆಯನ್ನು ಹೊಡೆಯಲು ಯಾವ ಅಧಿಕಾರವಿದೆ? ನನ್ನ ಮನೆಯೊಳಗೆ ಬಂದಿತೆಂದು…ನಿಜ. ಆದರೆ ಈ ಮನೆ ನನ್ನದು ಎಷ್ಟರ ಮಟ್ಟಿಗೆ? ಬಾಡಿಗೆ ಕೊಟ್ಟು ಬಿಟ್ಟರೆ ಮನೆ ನನ್ನದಾಗಲಿಲ್ಲ. ನಾಳೆ ಮಾಲಿಕನು ಬಂದು ಹೊರಡಿರಿ ಎಂದರೆ ನಾನು- ನಾವು- ಕಪ್ಪೆಯಂತೆ ಕುಳಿತುಕೊಳ್ಳುತ್ತೇವೆ! ಇನ್ನು ನಾನು…. ಎಂದರೆ ಹತ್ತುವರುಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಎಲ್ಲಿಯೋ ಹೇಗೋ ದಿನ ಕಳೆಯುತ್ತಿದ್ದಾಗ ಜ್ವರ ಬಂದು ನರಳುತ್ತಿದ್ದಾಗ ಈ ಕಪ್ಪೆಯಂತೆ ಒಂದು ಮೂಲೆಯಲ್ಲಿ ಬಿದ್ದಿದ್ದಾಗ ಯಾರೋ ತಾಯಿಯಂತೆ ಆರೈಕೆ ಮಾಡಿ ಬದುಕಿಸದಿದ್ದರೆ….

“ಬೇಗ ಓಡಿಸಿ ಅಂದ್ರೆ” ಎಂದು ಉಮೆಯು ತನ್ನ ‘ಗೀತೆ’ಯನ್ನು ನುಡಿದಳು. ಉಮೇಶನು ತನ್ನ ಹತ್ತರ ಸಾಧ್ಯವಿಲ್ಲವೆಂದು ಸೌದೆಯನ್ನು ಬಿಸಾಡಿ ಕೋಣೆಯೊಳಗೆ ನಡೆದನು. ಅವಳು ನಕ್ಕು, ತನ್ನ ಅತ್ತೆಯನ್ನು ಕರೆದು ಹೇಳಿ ಚೇಷ್ಟೆ ಮಾಡಿದಳು. “ಕಲಿತವರೆಲ್ಲಾ ಹೀಗೇ, ಪುಕ್ಕರು. ಕಪ್ಪೆ ಓಡಿಸಲಿಕ್ಕೂ ಬರುವದಿಲ್ಲ!” ಎಂದು ಅತ್ತೆ ಸೊಸೆಯರಿಬ್ಬರೂ ಕೂಡಿ ಟೀಕಿಸಿದರು. ಉಮೇಶ ಕೇಳಿಯೂ ಕೇಳದವನಂತೆ ಮಲಗಿದ.

ಹೊರಗೆ ಮಲಗಿದ ಆಳನ್ನು ಕರೆದು ಒಂದೇ ನಿಮಿಷದೊಳಗೆ ಓಡಿಸಿ ಬಂದು ಗಂಡನಿಗೆ “ನಿಮ್ಮ ಹತ್ತಿರ ಆಗದಿದ್ದರೇನು? ಸುಬ್ಬ ಒಂದೇ ಪೆಟ್ಟಿಗೆ ಓಡಿಸಿಬಿಟ್ಟ, ಓಹೋ!” ಅಂದಳು ಉಮೆ.

ಉಮೇಶನಿಗೆ ನಿದ್ದೆಯೇ ಹತ್ತಲಿಲ್ಲ. ತಾನು ಹೇಡಿಯೇ? ಎಂದು ತನ್ನನ್ನೇ ಕೇಳಿಕೊಂಡ. ಹೇಡಿಯಾಗಿದ್ದರೆ ದಾರಿದ್ರದ ದಿನಗಳನ್ನು ದಾಟಿ ಊರೂರಲೆದು ಕಲಿಯಲು ಸಮರ್ಥನಾಗುತ್ತಿದ್ದಿಲ್ಲ. ಆದರೆ ಸಾಹಸಕ್ಕೂ ಕಪ್ಪೆಯನ್ನು ಹೊಡೆದೋಡಿಸುವದಕ್ಕೂ ಯಾವ ಸಂಬಂಧ? ಈ ಕೆಲಸದಲ್ಲಿ ಹೇಡಿಯೇ ಆದೆ. ಆಗಲಿ, ಅಡ್ಡಿಯಿಲ್ಲ. ಆದರೆ ಹೆಂಡತಿಯೂ ಚೇಷ್ಟೆ ಮಾಡುವಂತಾಯಿತಲ್ಲ.

ಬದಿಗೆ ಉಮೆಯು ನಿದ್ದೆ ಹೋಗಿದ್ದಳು. ಉಮೇಶನು ಎದ್ದು ಆ ಕಪ್ಪೆಯನ್ನು ಹೊರಗೆ ಹಾಕಿ ಮುಚ್ಚಿದ ಬಾಗಿಲನ್ನೇ ತೆರೆದ. ಬೇಟ್ರಿ ಹಿಡಿದು ನೋಡಿದ. ಅಲ್ಲೇ ಇತ್ತು ಆ ಮುದಿಕಪ್ಪೆ! ಅದು ಉಬ್ಬಸಬಿಡುವದೂ ಅವನಿಗೆ ಕಂಡಿತು. ಅದಕ್ಕೆ ಮಾತಾಡಲು ಬರುತ್ತಿದ್ದರೆ ಎನೆಲ್ಲ ಹೇಳುತ್ತಿತ್ತೋ! ಉಮೇಶ ಎನೇನು ಹೇಳುತ್ತಿದ್ದನೋ! ಒಂದೆರಡು ನಿಮಿಷ ಅವನು ಏನೋ ವಿಚಾರಿಸಿದ. ಮೂರು ನಾಲ್ಕು ಸಲ ಬೇಟ್ರಿಯ ಬೆಳಕು ಬಿಟ್ಟು ನೋಡಿದ. ಕೊನೆಗೆ ಒಂದು ತಂಬಿಗೆ ನೀರು ತಂದು ಅದರ ಬಳಿಗೆ ಸುರಿದು ಬಾಗಿಲ ಹಾಕಿಕೊಂಡು ಬಂದ.

“ಎಲ್ಲಿಗೆ ಹೋಗಿದ್ದಿರಿ?” ಉಮೆಗೆ ಎಚ್ಚರವಾಗಿಬಿಟ್ಟಿತ್ತು!

“ನಿತ್ಯದಂತೆ ಹೊರಗೆ ಹೋಗಿದ್ದೆ” ಎಂದು ಮಲಗಿದ. ಅವನಿಗೆ ಹಿಂದಿನ ದಾರಿದ್ರ್ಯವೆಲ್ಲ ನೆನಪಾಗಿ ಕನಸಿನಲ್ಲಿಯೂ ತೋರಿಸಿಕೊಂಡವು. ಹೀಗೆ ಸ್ಮೃತಿ ಪಟಲವನ್ನು ತಟ್ಟಿದವರು ಯಾರು? ಮುದಿಕಪ್ಪೆಯೋ ಮಡದಿಯೋ ಎಂಬುದು ಮಾತ್ರ ಅವನಿಗೆ ತಿಳಿಯಲಿಲ್ಲ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...