Home / ಕವನ / ಕವಿತೆ / ನಾವಿದ್ದೇವೆಲ್ಲ ಯಾಕೆ?

ನಾವಿದ್ದೇವೆಲ್ಲ ಯಾಕೆ?

ಚಿತ್ರ: ವಿಕಿ ಇಮೇಜಸ್
ಚಿತ್ರ: ವಿಕಿ ಇಮೇಜಸ್

ಸತ್ತ ದನವ ತಿಂದೂ ತಿಂದೂ
ನಾವಿನ್ನೂ ಸತ್ತಿಲ್ಲವಲ್ಲ ಯಾಕೆ?
ಯುಗಯುಗಗಳಿಂದಾ ಪಾಂಡವರಂತೇ…
ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ?
*

ಹೊಲೆಗೇರಿಲಿದ್ದು,
ಯುಗಯುಗಗಳಿಂದಾ
ಸತ್ತ ದನವೇ ನಮಗಾಯಿತಲ್ಲ ಯಾಕೆ?
ಕರೆಬಾನಿಲಿ ಮುಳುಗೆದ್ದರೂ,
ಇವ್ರಿನ್ನು ಸತ್ತಿಲ್ಲವಲ್ಲ ಯಾಕೇ?
*

ಊರ ಹೊರಗಟ್ಟಿದರೂ
ಸತ್ತ ದನವ ತಿನ್ನಲಿಟ್ಟರೂ
ನಮ್ಮ ಮನೆ, ಮಠಗಳಿಗೆ ಬೆಂಕಿಟ್ಟರೂ…
ನಮ್ಮ ಬಗ್ಗೆ, ಪ್ರೀತಿ ಬುಗ್ಗೆ, ಬತ್ತಿಲ್ಲವಲ್ಲ ಯಾಕೇ??
*

ಇಶ್ಟೊಂದು ವರ್ಷದಿ,
ಎಶ್ಟೊಂದು ಹರ್ಷದಿ,
ಈ ನಿಮ್ಮ ಕೂಡಿ, ಕಿತ್ತಾಡಿ, ಜೈಲು ಕಂಡರೂ…
ಇನ್ನು ಜೊತೆಗಿದ್ದೇವೆಲ್ಲ ಯಾಕೇ??
*

ಒಂಭತ್ತು ತಿಂಗಳು ಹೊತ್ತು,
ಕಡುಕಶ್ಟದಲಿ ಹೆತ್ತು,
ಹೊಟ್ಟೆ, ಬಟ್ಟೆ, ನೆತ್ತಿ ಕಟ್ಟಿ,
ವಿದ್ಯೆ, ಬುದ್ಧಿ ಕಲಿಸಿ,
ಓಟು ಹಾಕಿ – ನಿಮ್ಮನ್ನೆಲ್ಲ ಸಾಕಿ, ಸಲ್ವಿ,
ಮಂತ್ರಿ ಮಾಡಿದ್ದೇವಲ್ಲ ಯಾಕೇ??
*

ಈ ಮನೆ, ಮಠಗಳ
ಈ ಕೋಟೆ ಕೊತ್ತಲಗಳ
ಈ ಗುಡಿ ಗೋಪುರಗಳ
ಈ ಕೆರೆ, ಕುಂಟೆ, ಕಾಲುವೆ, ಡ್ಯಾಮುಗಳ ಕಟ್ಟಿ… ಕಟ್ಟಿ…
ಇನ್ನು ಹೊಲೆಮಾದಿಗರಾಗಿ,
ಉಳಿದಿವಲ್ಲ ಯಾಕೇ??
*

ಈ ನಿಮ್ಮ ಮಕ್ಕಳು, ಮೊಮ್ಮಕ್ಕಳನು ಎತ್ತಿ ಮುದ್ದಾಡಿ,
ಈ ನಿಮ್ಮ ಹೊಲ, ಗದ್ದೆ, ತೋಟಗಳನು ಉತ್ತಿ, ಭಿತ್ತಿ ಕಣಗಳ ಮಾಡಿ,
ಧವಸ, ಧಾನ್ಯಗಳ ಕೇರಿ, ತೂರಿ, ಹಸನು ಮಾಡಿ,
ಮೂಟೆ, ಮೂಟೆ, ಕಾಳು, ಕಡಿಗಳ ಹೊತ್ತು,
ಗುಮ್ಮೆ, ಗರ್ಸೆ, ಟಿಕ್ಕೆ, ಕಣಜಗಳ ತುಂಬಿದೆವಲ್ಲ ಯಾಕೇ?
*

ಏನೆಲ್ಲ ಬಹಿಷ್ಕಾರಗಳ ಮಧ್ಯೆ-
ಈ ನಮ್ಮ ನಾಡು, ನುಡಿ, ಸಂಸ್ಕೃತಿಯ ಉಳಿಸಿ, ಬೆಳೆಸಿದ್ದು ಯಾಕೇ?
ಈ ಗಿಡ, ಮರ, ಬಳ್ಳಿ, ಹಣ್ಣು, ಹೂವು, ವಂಶ, ಊರು ಬೆಳೆಸಿದ್ದು ಯಾಕೇ??
ನಿಮ್ಮೊಂದಿಗೆ ಕೂಡಿ ಬಾಳುವ ಹಂಬಲ,
ನಿಮ್ಮಂತಾಗಲು ಹೋಗಿ, ಹೋಗಿ,
ಇನ್ನು ಇಲ್ಲೇ ಹೊಲೆಗೇರಿಲಿದ್ದೇವೆಲ್ಲ ಯಾಕೆ?!
*

ಏನೆಲ್ಲ ಕಟ್ಟಿ, ಬೆಳೆಸಿ, ಉಳಿಸಿದ ನಾವು-
ಈಗ ಈ ಊರುಕೇರಿಯನು ಒಂದು ಮಾಡಿ,
ಮುರಿದ ಮನೆ, ಮನಗಳ, ಹಸನಾಗಿ, ಹೊಸದಾಗಿ,
ಮತ್ತೆ ಮತ್ತೆ ಕಟ್ಟಬಲ್ಲೆವೆಂಬಾ ಕೆಚ್ಚು, ಸಾಹಸ, ನಮ್ಮಲಿದೆಯಲ್ಲ ಯಾಕೇ??
ಈ ಹಳೇ ಸೂರ್‍ಯ, ಚಂದ್ರ, ನಕ್ಷತ್ರ ರಾಶಿಗಳನ್ನೆಲ್ಲ…
ಗುಡಿಸಿ, ಕುಪ್ಪೆ ಮಾಡಿ, ‘ಮಾದ್ಗಿಂಟ್ಲಿ’ ಕಟ್ಟಬಲ್ಲೆವು!!
ಈ ಭೂಮಿ, ಆಕಾಶದ ತುಂಬೆಲ್ಲ, ಹೊಸ ದೀಪಗಳ ಹಚ್ಚಬಲ್ಲೆವು!
*

‘ಯಾರಂದರು ನಮಗೆ? ನಾವಿಲ್ಲವೆಂದು?
ಸತ್ತ ದನವ ತಿಂದು ತಿಂದೂ…
ಎಂದೋ… ಸತ್ತಿರುವೆವೆಂದೂ…’
‘ಈ ನಮ್ಮ ಹೊಲಗೇರಿಲಿಂದು…
ಹಂದಿ, ನಾಯಿ, ಕತ್ತೆ, ಕುದುರೆ, ಇಲಿ, ಹೆಗ್ಗಣ, ನೊಣಗಳಂತೇ…
ಸತ್ತು ಸತ್ತು… ಬಿದ್ದಿರುವೆವೆಂದೂ…’
*

ಈಗೀಗ-ಸತ್ತ ದನವ ತಿನ್ನುವುದು ಕೈಬಿಟ್ಟು,
ಹೊಲೆಗೇರಿಲಿ… ಬದುಕುವುದಾ ಬಿಟ್ಟು,
ನಿಮ್ಮಕ್ಕ ಪಕ್ಕದಲ್ಲೇ ಬದುಕುವುದ ಕಲಿತ್ತಿದ್ದೇವೆ!
ಈಗೀಗ ಜಾತಿ, ಭೇದ ಮಾಡುವರನ್ನು, ಹುಡುಕುತ್ತಿದ್ದೇವೆ!
ನವರಂಧ್ರಗಳಿಗೆ, ಕೆತ್ತಿಕೆತ್ತಿ… ಬಗಣೆಗೂಟಗಳ ಬಡಿಯಲು,
ನಾವಿದ್ದೇವಲ್ಲ ಸಾಕೇ??
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...