Home / ಕವನ / ಕವಿತೆ / ನಾವಿದ್ದೇವೆಲ್ಲ ಯಾಕೆ?

ನಾವಿದ್ದೇವೆಲ್ಲ ಯಾಕೆ?

ಚಿತ್ರ: ವಿಕಿ ಇಮೇಜಸ್
ಚಿತ್ರ: ವಿಕಿ ಇಮೇಜಸ್

ಸತ್ತ ದನವ ತಿಂದೂ ತಿಂದೂ
ನಾವಿನ್ನೂ ಸತ್ತಿಲ್ಲವಲ್ಲ ಯಾಕೆ?
ಯುಗಯುಗಗಳಿಂದಾ ಪಾಂಡವರಂತೇ…
ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ?
*

ಹೊಲೆಗೇರಿಲಿದ್ದು,
ಯುಗಯುಗಗಳಿಂದಾ
ಸತ್ತ ದನವೇ ನಮಗಾಯಿತಲ್ಲ ಯಾಕೆ?
ಕರೆಬಾನಿಲಿ ಮುಳುಗೆದ್ದರೂ,
ಇವ್ರಿನ್ನು ಸತ್ತಿಲ್ಲವಲ್ಲ ಯಾಕೇ?
*

ಊರ ಹೊರಗಟ್ಟಿದರೂ
ಸತ್ತ ದನವ ತಿನ್ನಲಿಟ್ಟರೂ
ನಮ್ಮ ಮನೆ, ಮಠಗಳಿಗೆ ಬೆಂಕಿಟ್ಟರೂ…
ನಮ್ಮ ಬಗ್ಗೆ, ಪ್ರೀತಿ ಬುಗ್ಗೆ, ಬತ್ತಿಲ್ಲವಲ್ಲ ಯಾಕೇ??
*

ಇಶ್ಟೊಂದು ವರ್ಷದಿ,
ಎಶ್ಟೊಂದು ಹರ್ಷದಿ,
ಈ ನಿಮ್ಮ ಕೂಡಿ, ಕಿತ್ತಾಡಿ, ಜೈಲು ಕಂಡರೂ…
ಇನ್ನು ಜೊತೆಗಿದ್ದೇವೆಲ್ಲ ಯಾಕೇ??
*

ಒಂಭತ್ತು ತಿಂಗಳು ಹೊತ್ತು,
ಕಡುಕಶ್ಟದಲಿ ಹೆತ್ತು,
ಹೊಟ್ಟೆ, ಬಟ್ಟೆ, ನೆತ್ತಿ ಕಟ್ಟಿ,
ವಿದ್ಯೆ, ಬುದ್ಧಿ ಕಲಿಸಿ,
ಓಟು ಹಾಕಿ – ನಿಮ್ಮನ್ನೆಲ್ಲ ಸಾಕಿ, ಸಲ್ವಿ,
ಮಂತ್ರಿ ಮಾಡಿದ್ದೇವಲ್ಲ ಯಾಕೇ??
*

ಈ ಮನೆ, ಮಠಗಳ
ಈ ಕೋಟೆ ಕೊತ್ತಲಗಳ
ಈ ಗುಡಿ ಗೋಪುರಗಳ
ಈ ಕೆರೆ, ಕುಂಟೆ, ಕಾಲುವೆ, ಡ್ಯಾಮುಗಳ ಕಟ್ಟಿ… ಕಟ್ಟಿ…
ಇನ್ನು ಹೊಲೆಮಾದಿಗರಾಗಿ,
ಉಳಿದಿವಲ್ಲ ಯಾಕೇ??
*

ಈ ನಿಮ್ಮ ಮಕ್ಕಳು, ಮೊಮ್ಮಕ್ಕಳನು ಎತ್ತಿ ಮುದ್ದಾಡಿ,
ಈ ನಿಮ್ಮ ಹೊಲ, ಗದ್ದೆ, ತೋಟಗಳನು ಉತ್ತಿ, ಭಿತ್ತಿ ಕಣಗಳ ಮಾಡಿ,
ಧವಸ, ಧಾನ್ಯಗಳ ಕೇರಿ, ತೂರಿ, ಹಸನು ಮಾಡಿ,
ಮೂಟೆ, ಮೂಟೆ, ಕಾಳು, ಕಡಿಗಳ ಹೊತ್ತು,
ಗುಮ್ಮೆ, ಗರ್ಸೆ, ಟಿಕ್ಕೆ, ಕಣಜಗಳ ತುಂಬಿದೆವಲ್ಲ ಯಾಕೇ?
*

ಏನೆಲ್ಲ ಬಹಿಷ್ಕಾರಗಳ ಮಧ್ಯೆ-
ಈ ನಮ್ಮ ನಾಡು, ನುಡಿ, ಸಂಸ್ಕೃತಿಯ ಉಳಿಸಿ, ಬೆಳೆಸಿದ್ದು ಯಾಕೇ?
ಈ ಗಿಡ, ಮರ, ಬಳ್ಳಿ, ಹಣ್ಣು, ಹೂವು, ವಂಶ, ಊರು ಬೆಳೆಸಿದ್ದು ಯಾಕೇ??
ನಿಮ್ಮೊಂದಿಗೆ ಕೂಡಿ ಬಾಳುವ ಹಂಬಲ,
ನಿಮ್ಮಂತಾಗಲು ಹೋಗಿ, ಹೋಗಿ,
ಇನ್ನು ಇಲ್ಲೇ ಹೊಲೆಗೇರಿಲಿದ್ದೇವೆಲ್ಲ ಯಾಕೆ?!
*

ಏನೆಲ್ಲ ಕಟ್ಟಿ, ಬೆಳೆಸಿ, ಉಳಿಸಿದ ನಾವು-
ಈಗ ಈ ಊರುಕೇರಿಯನು ಒಂದು ಮಾಡಿ,
ಮುರಿದ ಮನೆ, ಮನಗಳ, ಹಸನಾಗಿ, ಹೊಸದಾಗಿ,
ಮತ್ತೆ ಮತ್ತೆ ಕಟ್ಟಬಲ್ಲೆವೆಂಬಾ ಕೆಚ್ಚು, ಸಾಹಸ, ನಮ್ಮಲಿದೆಯಲ್ಲ ಯಾಕೇ??
ಈ ಹಳೇ ಸೂರ್‍ಯ, ಚಂದ್ರ, ನಕ್ಷತ್ರ ರಾಶಿಗಳನ್ನೆಲ್ಲ…
ಗುಡಿಸಿ, ಕುಪ್ಪೆ ಮಾಡಿ, ‘ಮಾದ್ಗಿಂಟ್ಲಿ’ ಕಟ್ಟಬಲ್ಲೆವು!!
ಈ ಭೂಮಿ, ಆಕಾಶದ ತುಂಬೆಲ್ಲ, ಹೊಸ ದೀಪಗಳ ಹಚ್ಚಬಲ್ಲೆವು!
*

‘ಯಾರಂದರು ನಮಗೆ? ನಾವಿಲ್ಲವೆಂದು?
ಸತ್ತ ದನವ ತಿಂದು ತಿಂದೂ…
ಎಂದೋ… ಸತ್ತಿರುವೆವೆಂದೂ…’
‘ಈ ನಮ್ಮ ಹೊಲಗೇರಿಲಿಂದು…
ಹಂದಿ, ನಾಯಿ, ಕತ್ತೆ, ಕುದುರೆ, ಇಲಿ, ಹೆಗ್ಗಣ, ನೊಣಗಳಂತೇ…
ಸತ್ತು ಸತ್ತು… ಬಿದ್ದಿರುವೆವೆಂದೂ…’
*

ಈಗೀಗ-ಸತ್ತ ದನವ ತಿನ್ನುವುದು ಕೈಬಿಟ್ಟು,
ಹೊಲೆಗೇರಿಲಿ… ಬದುಕುವುದಾ ಬಿಟ್ಟು,
ನಿಮ್ಮಕ್ಕ ಪಕ್ಕದಲ್ಲೇ ಬದುಕುವುದ ಕಲಿತ್ತಿದ್ದೇವೆ!
ಈಗೀಗ ಜಾತಿ, ಭೇದ ಮಾಡುವರನ್ನು, ಹುಡುಕುತ್ತಿದ್ದೇವೆ!
ನವರಂಧ್ರಗಳಿಗೆ, ಕೆತ್ತಿಕೆತ್ತಿ… ಬಗಣೆಗೂಟಗಳ ಬಡಿಯಲು,
ನಾವಿದ್ದೇವಲ್ಲ ಸಾಕೇ??
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...