Home / ಕವನ / ಕವಿತೆ / ನಾವಿದ್ದೇವೆಲ್ಲ ಯಾಕೆ?

ನಾವಿದ್ದೇವೆಲ್ಲ ಯಾಕೆ?

ಚಿತ್ರ: ವಿಕಿ ಇಮೇಜಸ್
ಚಿತ್ರ: ವಿಕಿ ಇಮೇಜಸ್

ಸತ್ತ ದನವ ತಿಂದೂ ತಿಂದೂ
ನಾವಿನ್ನೂ ಸತ್ತಿಲ್ಲವಲ್ಲ ಯಾಕೆ?
ಯುಗಯುಗಗಳಿಂದಾ ಪಾಂಡವರಂತೇ…
ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ?
*

ಹೊಲೆಗೇರಿಲಿದ್ದು,
ಯುಗಯುಗಗಳಿಂದಾ
ಸತ್ತ ದನವೇ ನಮಗಾಯಿತಲ್ಲ ಯಾಕೆ?
ಕರೆಬಾನಿಲಿ ಮುಳುಗೆದ್ದರೂ,
ಇವ್ರಿನ್ನು ಸತ್ತಿಲ್ಲವಲ್ಲ ಯಾಕೇ?
*

ಊರ ಹೊರಗಟ್ಟಿದರೂ
ಸತ್ತ ದನವ ತಿನ್ನಲಿಟ್ಟರೂ
ನಮ್ಮ ಮನೆ, ಮಠಗಳಿಗೆ ಬೆಂಕಿಟ್ಟರೂ…
ನಮ್ಮ ಬಗ್ಗೆ, ಪ್ರೀತಿ ಬುಗ್ಗೆ, ಬತ್ತಿಲ್ಲವಲ್ಲ ಯಾಕೇ??
*

ಇಶ್ಟೊಂದು ವರ್ಷದಿ,
ಎಶ್ಟೊಂದು ಹರ್ಷದಿ,
ಈ ನಿಮ್ಮ ಕೂಡಿ, ಕಿತ್ತಾಡಿ, ಜೈಲು ಕಂಡರೂ…
ಇನ್ನು ಜೊತೆಗಿದ್ದೇವೆಲ್ಲ ಯಾಕೇ??
*

ಒಂಭತ್ತು ತಿಂಗಳು ಹೊತ್ತು,
ಕಡುಕಶ್ಟದಲಿ ಹೆತ್ತು,
ಹೊಟ್ಟೆ, ಬಟ್ಟೆ, ನೆತ್ತಿ ಕಟ್ಟಿ,
ವಿದ್ಯೆ, ಬುದ್ಧಿ ಕಲಿಸಿ,
ಓಟು ಹಾಕಿ – ನಿಮ್ಮನ್ನೆಲ್ಲ ಸಾಕಿ, ಸಲ್ವಿ,
ಮಂತ್ರಿ ಮಾಡಿದ್ದೇವಲ್ಲ ಯಾಕೇ??
*

ಈ ಮನೆ, ಮಠಗಳ
ಈ ಕೋಟೆ ಕೊತ್ತಲಗಳ
ಈ ಗುಡಿ ಗೋಪುರಗಳ
ಈ ಕೆರೆ, ಕುಂಟೆ, ಕಾಲುವೆ, ಡ್ಯಾಮುಗಳ ಕಟ್ಟಿ… ಕಟ್ಟಿ…
ಇನ್ನು ಹೊಲೆಮಾದಿಗರಾಗಿ,
ಉಳಿದಿವಲ್ಲ ಯಾಕೇ??
*

ಈ ನಿಮ್ಮ ಮಕ್ಕಳು, ಮೊಮ್ಮಕ್ಕಳನು ಎತ್ತಿ ಮುದ್ದಾಡಿ,
ಈ ನಿಮ್ಮ ಹೊಲ, ಗದ್ದೆ, ತೋಟಗಳನು ಉತ್ತಿ, ಭಿತ್ತಿ ಕಣಗಳ ಮಾಡಿ,
ಧವಸ, ಧಾನ್ಯಗಳ ಕೇರಿ, ತೂರಿ, ಹಸನು ಮಾಡಿ,
ಮೂಟೆ, ಮೂಟೆ, ಕಾಳು, ಕಡಿಗಳ ಹೊತ್ತು,
ಗುಮ್ಮೆ, ಗರ್ಸೆ, ಟಿಕ್ಕೆ, ಕಣಜಗಳ ತುಂಬಿದೆವಲ್ಲ ಯಾಕೇ?
*

ಏನೆಲ್ಲ ಬಹಿಷ್ಕಾರಗಳ ಮಧ್ಯೆ-
ಈ ನಮ್ಮ ನಾಡು, ನುಡಿ, ಸಂಸ್ಕೃತಿಯ ಉಳಿಸಿ, ಬೆಳೆಸಿದ್ದು ಯಾಕೇ?
ಈ ಗಿಡ, ಮರ, ಬಳ್ಳಿ, ಹಣ್ಣು, ಹೂವು, ವಂಶ, ಊರು ಬೆಳೆಸಿದ್ದು ಯಾಕೇ??
ನಿಮ್ಮೊಂದಿಗೆ ಕೂಡಿ ಬಾಳುವ ಹಂಬಲ,
ನಿಮ್ಮಂತಾಗಲು ಹೋಗಿ, ಹೋಗಿ,
ಇನ್ನು ಇಲ್ಲೇ ಹೊಲೆಗೇರಿಲಿದ್ದೇವೆಲ್ಲ ಯಾಕೆ?!
*

ಏನೆಲ್ಲ ಕಟ್ಟಿ, ಬೆಳೆಸಿ, ಉಳಿಸಿದ ನಾವು-
ಈಗ ಈ ಊರುಕೇರಿಯನು ಒಂದು ಮಾಡಿ,
ಮುರಿದ ಮನೆ, ಮನಗಳ, ಹಸನಾಗಿ, ಹೊಸದಾಗಿ,
ಮತ್ತೆ ಮತ್ತೆ ಕಟ್ಟಬಲ್ಲೆವೆಂಬಾ ಕೆಚ್ಚು, ಸಾಹಸ, ನಮ್ಮಲಿದೆಯಲ್ಲ ಯಾಕೇ??
ಈ ಹಳೇ ಸೂರ್‍ಯ, ಚಂದ್ರ, ನಕ್ಷತ್ರ ರಾಶಿಗಳನ್ನೆಲ್ಲ…
ಗುಡಿಸಿ, ಕುಪ್ಪೆ ಮಾಡಿ, ‘ಮಾದ್ಗಿಂಟ್ಲಿ’ ಕಟ್ಟಬಲ್ಲೆವು!!
ಈ ಭೂಮಿ, ಆಕಾಶದ ತುಂಬೆಲ್ಲ, ಹೊಸ ದೀಪಗಳ ಹಚ್ಚಬಲ್ಲೆವು!
*

‘ಯಾರಂದರು ನಮಗೆ? ನಾವಿಲ್ಲವೆಂದು?
ಸತ್ತ ದನವ ತಿಂದು ತಿಂದೂ…
ಎಂದೋ… ಸತ್ತಿರುವೆವೆಂದೂ…’
‘ಈ ನಮ್ಮ ಹೊಲಗೇರಿಲಿಂದು…
ಹಂದಿ, ನಾಯಿ, ಕತ್ತೆ, ಕುದುರೆ, ಇಲಿ, ಹೆಗ್ಗಣ, ನೊಣಗಳಂತೇ…
ಸತ್ತು ಸತ್ತು… ಬಿದ್ದಿರುವೆವೆಂದೂ…’
*

ಈಗೀಗ-ಸತ್ತ ದನವ ತಿನ್ನುವುದು ಕೈಬಿಟ್ಟು,
ಹೊಲೆಗೇರಿಲಿ… ಬದುಕುವುದಾ ಬಿಟ್ಟು,
ನಿಮ್ಮಕ್ಕ ಪಕ್ಕದಲ್ಲೇ ಬದುಕುವುದ ಕಲಿತ್ತಿದ್ದೇವೆ!
ಈಗೀಗ ಜಾತಿ, ಭೇದ ಮಾಡುವರನ್ನು, ಹುಡುಕುತ್ತಿದ್ದೇವೆ!
ನವರಂಧ್ರಗಳಿಗೆ, ಕೆತ್ತಿಕೆತ್ತಿ… ಬಗಣೆಗೂಟಗಳ ಬಡಿಯಲು,
ನಾವಿದ್ದೇವಲ್ಲ ಸಾಕೇ??
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...