ಸಿರಿವಂತ ಸೂಳೆಯರ ಹಾಡು

ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ
ನಮಗು ಮುದಕು ನೇರಾ
ಭವದೂರಾ.

ಹಸುರೊಳು ಹೊಳೆಯುವ ಹಿಮಮಣಿಯಂತೆ
ಅಲೆಮೇಲಾಡುವ ಹೊಂಬಿಸಿಲಂತೆ
ಮನುಜರಾಸೆ ಮೇಲೆ
ಆಗಲೆಮ್ಮ ಲೀಲೆ
ಹಗುರುಬಗೆಯ ನಗೆಯ ಹೊಗರ ನೆರೆ
ಹರುಷವಹುದಪಾರಾ.

ಒಲಿವೆನೊಲಿವೆನೆನೆ ಒಲಿಯೆವು ನಾವು
ನಮ್ಮ ಸಿರಿಗನ್ನ ನಿಮ್ಮೆದೆ ನೋವು
“ಚೆಲುವೆ ಓ, ನಲವೆ ಹಾ, ಕೊಳುವೆಯಾ ಅಸುವಾ”
ಎಂಬ ದೈನ್ಯಕಾನಂದಿಸುವಾ
ಹರಳುಬಿಗಿಯ ಹುರುಳಿನೆದೆಯ ಹೊರ-
ಹೊಳಪ ತೋರ್ವೆವಾವು.

ನಮ್ಮಾಸೆನಂಜು ನಿಮಗೇರ್ವುದಲಾ
ನಿಮ್ಮಾಸೆನಂಜು ನಮಗೇರದಲಾ
ಪಡಿಯರತಿಯೊಲೆದೆಬಾಗಿಲ ಬಳಿ ನಿಂದಿರೆ ಸಿರಿಯು
ತನುಮನ ನಡೆಸಲು ಸರಸತಿಯು
ನೇಹವಿರದ ಮೋಹವೆರೆದು ಜಗವೆಲ್ಲ ಗೆಲ್ವೆವಾವು.

ಬನ್ನಿರೇ ಸಖಿ, ಎನ್ನಿರೇ- ನಲವೊಂದೆಯೇ ಸಾರ
ನಮಗು ಮುದಕು ನೇರಾ-ಭವ ದೂರಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಕ್ತಿ ಸಂಕೇತದ ಸೂಕಿ
Next post ಈ ಗಿಣಿಯೆ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…