Home / ಬಾಲ ಚಿಲುಮೆ / ಕಥೆ / ನೇರಿಲು ಹಣ್ಣಿನ ಕಥೆ

ನೇರಿಲು ಹಣ್ಣಿನ ಕಥೆ

ಪಾಂಡವರು ಹನ್ನೆರಡು ವರ್‍ಷ ಕಾಡಿನಲ್ಲಿ ವಾಸ ಮಾಡಿದರು. ಆಗ ಒಂದು ದಿನ ಭೀಮಸೇನನು, ಆನೆಯ ಗಾತ್ರವಿದ್ದ ಒಂದು ನೇರಿಲು ಹಣ್ಣನ್ನು ತಂದನು. ಧರ್‍ಮರಾಯನು ಅಷ್ಟು ದೊಡ್ಡ ಹಣ್ಣನ್ನು ಕಂದು ಆಶ್ಚರ್‍ಯಪಟ್ಟು, “ಇದೇನು? ಇಷ್ಟು ದೊಡ್ಡದಾಗಿರುವುದಲ್ಲ!” ಎಂದು ಅಲ್ಲಿದ್ದ ಋಷಿಗಳನ್ನು ವಿಚಾರಿಸಿದನು. ಅವರು, “ಅಯ್ಯಾ! ಇದು ಕಣ್ವಋಷಿಯ ಆಶ್ರಮದ ಹಣ್ಣು. ಆಲ್ಲಿ ವರ್‍ಷಕ್ಕೊಂದು ಸಲ ಇಂತಹುದೊಂದು ದೊಡ್ಡ ಹಣ್ಣಾಗುವುದು. ಆಗ ಋಷಿಯು ಕಣ್ಣು ಬಿಟ್ಟು ಕೈ ಚಾಚುವನು. ಹಣ್ಣು ಹೋಗಿ ಅವನ ಕೈಯ್ಯಲ್ಲಿ ಕೂಡುವುದು. ಆತನು ಇದನ್ನು ತಿಂದು, ಮತ್ತೆ ತಪಸ್ಸಿಗೆ ಕುಳಿತುಕೊಳ್ಳುವನು” ಎಂದರು.

ಇದನ್ನು ಕೇಳಿ ಧರ್‍ಮರಾಯನಿಗೆ “ಭೀಮನು ಋಷಿಯ ಹಣ್ಣನ್ನು ತಂದು ಬಿಟ್ಟನು. ಇನ್ನಾತನು ಕಣ್ಣು ತೆರೆವ ವೇಳಗೆ ಹಣ್ಣು ಇಲ್ಲದೆ ಇರಲು, ಆತನು ಎಷ್ಟುನೊಂದು ಕೊಳ್ಳುವನೋ! ಇನ್ನೇನು ಗತಿ?” ಎಂದು ದಿಗಿಲಾಯಿತು. ಕೂಡಲೆ ತನಗೆ ದಿಕ್ಕಾದ ಶ್ರೀಕೃಷ್ಣನನ್ನು ನೆನೆದನು. ಆತನೂ ಮಾಡುತ್ತಿದ್ದ ಕೆಲಸವನ್ನು ಬಿಟ್ಟುಬಂದನು. ಕೂಡಲೆ ಧರ್‍ಮರಾಯನು “ಕೃಷ್ಣಾ! ಹೀಗಾಗಿ ಹೋಯಿತು. ಭೀಮನು ಹಣ್ಣು ತಂದು ಬಿಟ್ಟನು. ಇನ್ನೇನು ಗತಿ” ಎಂದು ಅತ್ತನು. ಶ್ರೀಕೃಷ್ಣನು “ಇರಲಿ. ಬಾ” ಎಂದು ಅವರನ್ನೆಲ್ಲಾ ಆ ಮರದ ಬಳಿಗೆ ಕರೆದುಕೊಂಡು ಹೋದನು. ಅಲ್ಲಿ ಪಾಂಡವರನ್ನು ಕುರಿತು “ಅಯ್ಯಾ! ಈ ಹಣ್ಣು ಮೊದಲಿನಂತೆ ತೊಟ್ಟಿಗೆ ಸೇರಿತೊಳ್ಳಬೇಕಾದರೆ, ನಿಮ್ಮ ನಿಮ್ಮ ಮನಸ್ಸಿನಲ್ಲಿರುವುದನ್ನು ಮುಚ್ಚು ಮರೆಯಿಲ್ಲದೆ ಹೇಳಬೇಕು. ನೀವು ಹಾಗೆ ದಿಟ ಹೇಳಿದರೆ, ಅದು ತಾನೇ ಹೋಗಿ ತೊಟ್ಟಿಗೆ ಸೇರಿಕೊಳ್ಳುತ್ತದೆ. ಸುಳ್ಳು ಹೇಳಿದರೆ ಬಿದ್ದು ಹೋಗುತ್ತದೆ” ಎಂದನು.

ಎಲ್ಲರೂ “ಹಾಗೆ ಆಗಲಿ” ಎಂದರು. ಧರ್ಮರಾಯನು ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿದನು. ಹಣ್ಣು ಒಂದಾಳು ಎತ್ತರ ಮೇಲಕ್ಕೆ ಹೋಯಿತು. ಭೀಮನು ನಿಜವನ್ನೇ ನುಡಿದನು. ಇನ್ನೂ ಒಂದಾಳು ಎತ್ತರ ಮೇಲಕ್ಕೆ ಹೋಯಿತು. ಅರ್‍ಜುನನು ಸತ್ಯವನ್ನು ಆಡಿದನು. ಮತ್ತೂ ಒಂದಾಳು ಎತ್ತರ ಹತ್ತಿತು. ನಕುಲ ಸಹದೇವರೂ ನಿಶ್ಚಯವನ್ನೇ ನುಡಿದರು. ದ್ರೌಪದಿಯೂ ತನ್ನ ಮನಸ್ಸಿನಲ್ಲಿ ಇದ್ದುದನ್ನು ಕೊಂಚವೂ ಮುಚ್ಚದೆ ಹೇಳಿದಳು. ಹಣ್ಣು ಹೋಗಿ ತನ್ನ ಎಡೆಯನ್ನು ಸೇರಿತು.

ಪಾಂಡವರು ಬದುಕಿದೆವೆಂದು ಕೃಷ್ಣನನ್ನು ಕೊಂಡಾಡಿದರು. ಕೃಷ್ಣನು “ಅಯ್ಯಾ! ನನ್ನನ್ನು ಏಕೆ ಹೊಗಳುವಿರಿ? ಇದು ನೀವು ಆಡಿದ ದಿಟದ ಮಹಿಮೆ!” ಎಂದು ಹೇಳಿದನು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...