Home / ಬಾಲ ಚಿಲುಮೆ / ಕಥೆ / ಶಿಲಾದಿತ್ಯ

ಶಿಲಾದಿತ್ಯ

ಶಿಲಾದಿತ್ಯ ವಲ್ಲಭಿಯ ದೊರೆಯು. ಆತನ ಅರಮನೆಯಲ್ಲಿ ಒಂದು ಸರೋವರವಿತ್ತು. ಆತನು ಯುದ್ಧಕ್ಕೆ ಯೋಗಬೇಕಾದರೆ ತಾನು ಮಿಂದು ಮಡಿಯುಟ್ಟು ಶುಚಿಯಾಗಿ ಬಂದು ಆ ಕೊಳವನ್ನು ಪೂಜಿಸುವನು. ಆಗ ಅಲ್ಲಿಂದ ಏಳುಬಣ್ಣದ ಕುದುರೆಯು ಎದ್ದು ಮೇಲಕ್ಕೆ ಬರುವದು. ಆತನು ಅದನ್ನು ಹತ್ತಿ ಯುದ್ಧಕ್ಕೆ ಹೋಗುವನು. ಅಲ್ಲಿ ಯಾರ ಆಯುಧವೂ ಆತನನ್ನು ಗಾಯ ಪಡಿಸಲಾರದು. ಆತನು ಎಲ್ಲರನ್ನೂ ಗೆದ್ದು ಬಿಡುವನು. ಹೀಗೆಯೇ ಆತನು ಎಷ್ಟೋ ಯುದ್ಧಗಳನ್ನು ಗೆದ್ದು ಚಕ್ರವರ್‍ತಿಯಾಗಿದ್ದನು.

ಒಂದು ಸಲ ಅರಸನು ಅಲ್ಲಿ ಪೂಜೆಗೆ ಹೋಗುವಾಗ ಹಗೆಯವನು ಒಬ್ಬನು ಬಂದು ಕೊಳಕು ಬಟ್ಟೆಯ ಚೂರು ಒಂದನ್ನು ಇಟ್ಟುಕೊಂಡಿದ್ದು, ಅದನ್ನು ಆತನಿಗೆ ಕಾಣದಂತೆ ಉಡಿಯಲ್ಲಿ ಹಾಕಿಬಿಟ್ಟನು. ಅರಸನು ಎಂದಿನಂತೆ ಭಕ್ತಿಯಿಂದ ಪೂಜೆ ಮಾಡಿದರೂ ಏಳು ಬಣ್ಣದ ಕುದುರೆಯು ಬರಲಿಲ್ಲ. ಓಹೋ! ಏನೋ ಮೈಲಿಗೆಯಾಗಿರಬಹುದೆಂದು ನೋಡಲು, ಆತನು ಆರಿಯದಂತೆಯೇ ಆತನ ಉಡಿಯಲ್ಲಿ ಒಂದು ಚೂರು ಮೈಲಿಗೆ ಬಟ್ಟೆಯಿತ್ತು. ಅರಸನಿಗೆ ಆಗ ಕೊಳದಿಂದ ಕುದುರೆಯು ಬರದೆ ಇರಲು ಕಾರಣವೇನು ಎಂಬುದು ತಿಳಿಯಿತು. ಮತ್ತೆ ಮಿಂದು ಮಡಿಯುಟ್ಟು ಪೂಜಿಸಿದನು. ಆದರೂ ಕುದುರೆಯು ಬರಲಿಲ್ಲ. ಒಂದು ಸಲ ಮೈಲಿಗೆ ಸೋಕಿ, ಕೊಳದ ಮಹಿಮೆಯೇ ಹೋಗಿಬಿಟ್ಟಿತು.

ಅಂದಿನ ದಿನವೂ ಯುದ್ಧವಿತ್ತು. ಶಿಲಾದಿತ್ಯನೂ ಹೋದನು. ಆದರೆ ಆತನಿಗೆ ಅಂದಿನ ಯುದ್ಧವೇ ಕೊನೆಯಾಯಿತು. ಆತನು ಅಂದಿನ ರಣರಂಗದಿಂದ ಹಿಂತಿರುಗಲೇ ಇಲ್ಲ. ಆತನು ಅಲ್ಲಿಯೇ ಮಡಿದು ಹೋದನು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...