Home / ಬಾಲ ಚಿಲುಮೆ / ಕಥೆ / ರಾಮೂ ಶ್ಯಾಮೂ

ರಾಮೂ ಶ್ಯಾಮೂ

ರಾಮೂ ಶ್ಯಾಮೂ ಇಬ್ಬರೂ ಒಳ್ಳೆಯ ಸಂಗಾತಿಗಳು. ಯಾವಾಗಲು ಅವರು ಜತೆಯಲ್ಲೇ ಇರುವರು. ಅಡುವಾಗ ಇಬ್ಬರೂ ಒಟ್ಟಿಗೆ ಆಡುವರು. ಓದುವಾಗ ಇಬ್ಬರೂ ಓದುವರು ಆದರೂ ಇವರಿಬ್ಬರಿಗೂ ಒಂದು ಭೇದವಿತ್ತು. ರಾಮು ಹೊತ್ತಿಗೆ ಸರಿಯಾಗಿ ಶಾಲೆಗೆ ಬರುವನು. ಶ್ಯಾಮು ಹೊತ್ತು ಹೋಗಿಯೇ ಬರುವನು. ಎಂಟು ಘಂಟೆಗೆ ಬರಬೇಕಾದರೆ ಎಂಟೂವರೆಗೆ ಬರುವನು.

ಮಹಾರಾಜರ ವರ್‍ಧಂತಿ ಬಂತು. ಉಪಾಧ್ಯಾಯರು ಬಂದು “ಈ ದಿನ ಎಲ್ಲರಿಗೂ ಲಾಡು ಕೊಡುತ್ತದೆ. ಎಲ್ಲರೂ ಮೂರು ಘಂಟೆಯ ವೇಳೆಗೆ ಸರಿಯಾಗಿ ಇಲ್ಲಿಗೆ ಬಂದು ಇರಬೇಕು” ಎಂದು ಹೇಳಿದರು.

ರಾಮೂಗೆ ಗೊತ್ತು ಶ್ಯಾಮು ಹೊತ್ತಾಗಿ ಬರುತ್ತಾನೆ ಎಂದು. ಆದರೆ ಶ್ಯಾಮೂಗೆ ಲಾಡು ತಪ್ಪಿ ಹೋಗುವುದು ಅವನಿಗೆ ಇಷ್ಟವಿಲ್ಲ. ಅದಕ್ಕಾಗಿ ಅವನು ಶ್ಯಾಮು ಮನೆಗೆ ಒಂದೂವರೆಗೇ ಹೋದನು, ಅವನು ಇನ್ನೂ ಊಟವೇ ಮಾಡಿರಲಿಲ್ಲ. “ಶಾಲೆಗೆ ಬರುವುದಿಲ್ಲವೇನೋ? ಲಾಡು ಕೊಡುತ್ತಾರೆ” ಎಂದನು. “ಹೌದಪ್ಪ! ಬೇಗ ಹೋಗಬೇಕು” ಎಂದು ಶ್ಯಾಮೂ ಅವಸರಪಟ್ಟು, ಬೇಗ ಬೇಗ ಊಟಮಾಡಿದನು. ಮಡಿಬಟ್ಟೆಗಳನ್ನು ಉಟ್ಟು ತೊಟ್ಟು ಕೊಂಡನು. ರಾಮೂ ಜತೆಯಲ್ಲಿ ಶಾಲೆಗೆ ಬಂದನು. ಅವನಿಗೆ, ಏನೋ ಬಹಳ ಜಾಗ್ರತೆ ಬಂದಂತೆ ಇದ್ದರೂ, ಎರಡೂ ಮುಕ್ಕಾಲು ಘಂಟೆಯಾಗಿತ್ತು. ಶ್ಯಾಮು ಹೊತ್ತಿಗೆ ಸರಿಯಾಗಿ ಬಂದುದು ಎಲ್ಲರಿಗೂ ಆಶ್ಚರ್‍ಯ. ಮೂರು ಘಂಟೆಗೆ ಸರಿಯಾಗಿ ಘಂಟೆಯು ಬಾರಿಸಿತು. ಹುಡುಗರೆಲ್ಲರೂ ಬಂದು ಶಾಲೆಯ ಅಂಗಳದಲ್ಲಿ ಸೇರಿದರು. ಉಪಾಧ್ಯಾಯರು ಬಾಗಿಲಲ್ಲಿ ನಿಂತು, ಒಬ್ಬೊಬ್ಬರಿಗೆ ಒಂದೊಂದು ಲಾಡು ಕೊಟ್ಟು ಕಳುಹಿಸಿದರು.

ರಾಮೂ ಶ್ಯಾಮೂ ಲಾಡುವನ್ನು ಈಸಿ ಕೊಂಡು ಈಚೆಗೆ ಬಂದರು. ಬಾಗಿಲಲ್ಲಿ ಭೀಮನು ಅಳುತ್ತ ನಿಂತಿದ್ದನು. ಉಪಾಧ್ಯಾಯರು “ನಿನಗೆ ಅದೇ ಶಿಕ್ಷೆ! ಕೊಡುವುದಿಲ್ಲ ಹೋಗು” ಎನ್ನುತ್ತಿದ್ದರು. ಭೀಮನು ಅಳುತ್ತಿದ್ದನು. ರಾಮುವು “ಶ್ಯಾಮೂ! ನೋಡಿದೆಯಾ? ನಿನಗೂ ಹೀಗೆ ಆಗಬೇಕಾಗಿತ್ತು. ನೀನು ನಿತ್ಯ ಬರುತ್ತಿದ್ದ ಹಾಗೆ ಇವನು ಹೊತ್ತುಮೀರಿ ಬಂದನು. ಇವನಿಗೆ ಲಾಡು ತಪ್ಪಿ ಹೋಯಿತು” ಎಂದನು.

ಆವತ್ತು ಅವನಿಗೆ ತಾನು ಮಾಡುತ್ತಿದ್ದ ತಪ್ಪು ತಿಳಿಯಿತು. “ನಿತ್ಯವೂ ಹೊತ್ತಿಗೆ ಸರಿಯಾಗಿ ಶಾಲೆಗೆ ಹೋಗು” ಎಂದು ತಂದೆ ತಾಯಿಗಳು ಹೇಳುತ್ತಿದ್ದರು ಅವನೂ ಹೂ ಎಂದುಕೊಂಡಿದ್ದನು ಅಷ್ಟೆ. ಆದರೆ ಆವತ್ತು ಅವನಿಗೆ ತಿಳಿಯಿತು. ಇನ್ನು ಮೇಲೆ ಯಾವತ್ತೂ ಹೊತ್ತುಹೋಗಿ ಶಾಲೆಗೆ ಹೋಗುವುದಿಲ್ಲ ‌ಎಂದು ಮಸ್ಸಿನಲ್ಲಿ ಗಟ್ಟಿ ಮಾಡಿದನು. ಅದೇ ಮೇರೆಗೆ ಹೊತ್ತಿಗೆ ಸರಿಯಾಗಿ ಬರಲಾರಂಭಿಸಿದನು.

ಈಗ ಅದೇ ಶ್ಯಾಮು ದೊಡ್ಡ ವ್ಯಾಪಾರಿಯಾಗಿದ್ದಾನೆ. ಈಗ ಅವನನನ್ನು ಕೇಳಿದರೆ “ಹುಡುಗರು ಯಾವಾಗಲೂ ಹೊತ್ತು ಮೀರಿ ಹೋಗಬಾರದು” ಎಂದು ತನ್ನ ಕಥೆಯನ್ನು ಹೇಳುತ್ತಾನೆ.
*****

Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...