ಅರಿವು

ಒಬ್ಬ ಗೃಹಸ್ಥ ಸಂಸಾರ ಸಾಗರದಲ್ಲಿ ಮುಳಗಿದ್ದ. ಅವನು ಅಪಾರ ಸಂಪತ್ತು ಗಳಿಸಿ ಇಟ್ಟಿದ್ದ. ಅವನಿಗೆ ಹೆಂಡತಿ, ಮಕ್ಕಳು, ಮನೆಮಠ, ಹಣದಿಂದ ಶಾಂತಿ ದೊರೆಯಲಿಲ್ಲ. ಅವನ ಮನೆಗೆ ಒಂದು ದಿನ ಒಬ್ಬ ಸಾಧು ಬಂದಾಗ, ಗೃಹಸ್ಥ ತನ್ನ ಸ್ಥಿತಿಯನ್ನು ಬಿನ್ನವಿಸಿ ಕೂಂಡ.

ಸಾಧು ಹೇಳಿದ- “ನೋಡು ನಿನಗೆ ಎರಡು ಇಲಿಗಳನ್ನು ಕೊಟ್ಟು ಹೋಗುತ್ತೇನೆ. ಒಂದು ಕಪ್ಪು ಇನ್ನೊಂದು ಬಿಳಿ, ಇದನ್ನು ಒಂದು ವರ್ಷ ಕಾಲ ಸಾಕು. ನಾನು ಮತ್ತೆ ತಿರುಗಿ ಬರುತ್ತೇನೆ. ನೀನು ಹೇಗೆ ಇರುವೆ ಎಂದು ಹೇಳು” ಎಂದರು.

ಅದಕ್ಕೆ ಗೃಹಸ್ಥ ಒಪ್ಪಿಕೊಂಡ.

ಒಂದು ವರ್ಷವಾಯಿತು. ಸಾಧು ತಿರುಗಿ ಬಂದರು. ಗೃಹಸ್ಥ ಈಗ ಸನ್ಯಾಸಿಯಂತೆ ಕಾವಿಬಟ್ಟೆ ಉಟ್ಟು ನಿಂತಿದ್ದನು. ಸಾಧು ಕೇಳಿದ- “ಈಗ ಶಾಂತಿ ಇಂದ ಇರುವೆಯಾ?” ಎಂದು. ನೀವು ಕೊಟ್ಟ ಬಿಳಿ ಇಲಿ ಹಗಲಿನಲ್ಲಿ ಸಂಸಾರದ ಎಳೆಯನ್ನು ಕಡೆಯಿತು. ನೀವು ಕೊಟ್ಟ ಕರಿ ಇಲಿ ರಾತ್ರಿಯ ಕತ್ತಲಲ್ಲಿ ನನ್ನ ಹಣದ ನೋಟುಗಳನ್ನೆಲ್ಲಾ ತಿಂದು ಹಾಕಿತು. ಈಗ ನಾನು ನಿಮ್ಮಂತೆ ಶಾಂತಿ ಪಡೆದು ಸನ್ಯಾಸಿಯಾಗಿದ್ದೇನೆ.” ಎಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಥನವಿಲ್ಲದದೆಂತು ಮೌಲ್ಯವರ್‍ಧನೆಯಪ್ಪುದೋ?
Next post ಇರವು-ಅರಿವು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…