Home / ಕಥೆ / ಕಿರು ಕಥೆ / ಶಾಂತಿಗಾಗಿ

ಶಾಂತಿಗಾಗಿ

ಒಬ್ಬ ನಿಷ್ಟಾವಂತ ಸಾಧಕ ಶಾಂತಿಯನ್ನು ಹುಡುಕಿಕೊಂಡು ಹೊರಟ. ಕಾಡುಮೇಡು, ಬೆಟ್ಟಗುಡ್ಡ ಸುತ್ತಿ ನದಿ ನಾವೆಯಲ್ಲಿ ತೇಲಿ ಕೊನೆಗೆ ಒಂದು ದಟ್ಟ ಅರಣ್ಯದ ಬೆಟ್ಟದಡಿಯ ಗುಹೆಯ ಬಳಿ ಬಂದು ನಿಂತ. ಬಹಳ ಶ್ರಮಿಸಿದ್ದ. ಅವನ ಕೈಕಾಲಿನಲ್ಲಿ ತ್ರಾಣವಿರಲಿಲ್ಲ. ಎದೆಯಲ್ಲಿ ಹತ್ತಿಕ್ಕಿ ತಿನ್ನುತಿತ್ತು ಶಾಂತಿಯ ಹಂಬಲ. ಬಳಲಿದ ಶರೀರ, ಕಾಂತಿಹೀನ ಕಣ್ಣುಗಳು ಅವನ ಆಂತರ್ಯದ ಅಳಲನ್ನು ಹರಿಸುತಿತ್ತು.

ಗುರುವೇ! “ಶಿಷ್ಯನ ಧ್ವನಿ ಕೇಳಿಸಲಿಲ್ಲವೇ?” ಎಂದು ಆರ್ತ ಧ್ವನಿಯಲ್ಲಿ ಕೂಗಿಕೊಂಡ.

“ಶಿಷ್ಮಾ! ನಿನಗೇನು ಬೇಕು? ಏಕ ತೊಳಲುತ್ತಿರುವೇ?” ಹೇಳು ಎಂದರು. ಗುರುವೇ! “ನನಗೆ ಶಾಂತಿ ಬೇಕು. ಅದಕ್ಕೆ ನಾ ಏನಾದರು ಕೊಡ ಬಯಸುವೆ. ನನ್ನ ಕೈ ಕಾಲು, ಮೈ, ತಲೆ, ಎದೆ, ಎಲ್ಲದೂ ನಿಮ್ಮದೇ ಗುರುವೇ, ನನಗೆ ಶಾಂತಿ ಮಾತ್ರ ಕೊಡಿರಿ” ಎಂದ.

“ಶಿಷ್ಕಾ! ನನಗೆ ನಿನ್ನ ದೇಹ ಬೇಡ, ನಾನೇನು ಮಾಂಸಾಹಾರಿಯಲ್ಲ. ನನ್ನ ಕೈ ಕಾಲು ಇರುವಾಗ ನಿನ್ನ ಕೈಕಾಲು ನನಗೆ ಬೇಡ. ಇನ್ನು ಇಬ್ಬರ ತಲೆ ಇಂದ ಇನ್ನೊಬ್ಬರಿಗೆ ಖಂಡಿತ ಉಪಯೋಗವಿಲ್ಲ. ಇನ್ನು ನಿನ್ನ ಎದೆ ಬಡಿತದಿಂದ ನಾ ಬದುಕಿರಲಾರೆ. ನಿನ್ನ ಭಾವದಿಂದ ನಾಹಾಡಲಾರೆ, ಕುಣಿಯಲಾರೆ. ನಾನು ಒಂದೇ ಒಂದು ಕೇಳುತ್ತೇನೆ. ನೀನು ಅದನ್ನು ಕೂಡು” -ಎಂದರು.

ಗುರುಗಳೇ! “ನಾನೇನು ಮಾಡಬೇಕು ಹೇಳಿ” ಎಂದ.

“ನೋಡು ಈ ಗುಹೆಯ ದ್ವಾರದಲ್ಲಿ ಒಂದು ಲಕ್ಷ್ಮಣ ರೇಖೆ ಎಳದಿರುವೆ. ನೀನು ನಿನ್ನ ಮನವನ್ನು ಗೆರೆಯ ಹೊರಗೆ ಬಿಟ್ಟು ನೀನು ಮಾತ್ರ ಗೆರೆಯದಾಟಿ ಗುಹೆಯ ಒಳಗೆ
ಬಾ ನಿನಗೆ ಬೇಕಾದಷ್ಟು ಶಾಂತಿ ದೋಚಿಕೊಂಡು ಹೋಗು” ಎಂದರು.

ಮನವನ್ನು ತೊರೆದ ಶಿಷ್ಯ ಗುಹೆಯ ದ್ವಾರದಲ್ಲಿ ಶಿಲೆಯಂತೆ ನಿಂತು ಬಿಟ್ಟ. ಶಿಷ್ಯ ಒಳಗೆ ಬಾರದಿದ್ದನ್ನು ನೋಡಿ ಗುರುಗಳು ಬಂದು “ನೋಡಿದಿಯಾ! ಈಗ ನಿನ್ನ ಎದೆ ತುಂಬಾ ಶಾಂತಿ ತುಂಬಿ ಬಿಟ್ಟಿದೆ” ಎಂದರು.

“ಧನ್ಯೋಸ್ಮಿ!” ಎಂದು ಶಿಷ್ಯ ನಮಸ್ಕರಿಸಿ ಹಿಂತಿರುಗಿದ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...