Home / ಕಥೆ / ಕಿರು ಕಥೆ / ಹಿತ್ತಾಳೆ ಕಿವಿ

ಹಿತ್ತಾಳೆ ಕಿವಿ

ಬಿಜ್ಜಳ ಮಹಾರಾಜರ ಬಳಿ ಅಣ್ಣ ಬಸವಣ್ಣನವರು ಮಹಾ ಮಂತ್ರಿಯಾದ ಹೊಸದರಲ್ಲಿ ಕಲ್ಯಾಣ ನಗರಿಯಲ್ಲಿದ್ದ ಚಾಡಿ ಕೋರರಾದ ಮಲ್ಲಪ್ಪ ಶೆಟ್ಟಿ ಕೊಂಡಿ ಮಂಚಣ್ಣ ಮುಂತಾದವರೆಲ್ಲ ಸೇರಿಕೊಂಡು ಒಮ್ಮೆ ಅಣ್ಣ ಬಸವಣ್ಣನವರು ಏಕಾಂತವಾಗಿದ್ದಾಗ ಅಲ್ಲಿಗೆ ಬಂದರು.

‘ಬಿಜ್ಜಳ ಮಹಾರಾಜರು ನಿಮ್ಮ ಬಗ್ಗೆ ಮೊನ್ನೆ ದಿನ ಎಲ್ಲರ ಎದುರಿಗೆ ನಿಮ್ಮನ್ನು ಕೇವಲವಾಗಿ ನಿಂದಿಸಿದರು!’ ಎಂದು ಬಂದವರು ಪೀಠಿಕೆ ಹಾಕಿ ಮಾತಿಗೆ ಮಾತು ಪೋಣಿಸುತ್ತಾ ಕುಳಿತರು.

“ನೀವು ಬಿಜ್ಜಳ ಮಹಾರಾಜರ ಮಾತುಗಳನ್ನು ಸತ್ಯವೆಂದು ನಂಬುವಿರೇನು ? ಅವರು ನಮ್ಮ ಬಗ್ಗೆ ಪ್ರೀತಿಯಿರುವವರು. ನಿಮ್ಮ ಮನಸ್ಥಿತಿ ಹಾಗೆ ಆಲೋಚಿಸಿರಬಹುದು. ಇಲ್ಲವೆ ನೀವು ಪೂರ್‍ವಗ್ರಹ ಪೀಡಿತರಿರಬಹುದು. ನಿಮಗೆ ಯಾವುದು ಸತ್ಯವೆನಿಸುವುದು?” ಅಣ್ಣ ಬಸವಣ್ಣನವರು ಬಂದಿದ್ದವರನ್ನು ಪ್ರಶ್ನಿಸಿ ಅವರ ಮುಖ ನೋಡುತ್ತಾ ಕುಳಿತರು.

ಅಲ್ಲಿದ್ದವರೆಲ್ಲ ಬೆವರ ತೊಡಗಿದರು. ತೊದಲ ತೊಡಗಿದರು.

‘ಮಹಾ ಮಂತ್ರಿಗಳೇ… ಬಿಜ್ಜಳ ಮಹಾರಾಜರು ಏನೆಂದು ನಮಗೇನು ತಿಳಿಯದು. ಸತ್ಯಾಸತ್ಯತೆ ಕುರಿತು ನಾವು ಆಲೋಚಿಸಿಲ್ಲ. ನಿಮ್ಮ ಬಗ್ಗೆ ಹಾಗೆ ಅಂದಿದ್ದನ್ನು ಹೇಳಲು ಬಂದಿದ್ದೆವು’ ಎಂದರು.

“ನಿಮ್ಮ ಚಾಡಿ ಮಾತುಗಳಿಂದೇನು ಲಾಭವಿಲ್ಲ. ಕಲ್ಯಾಣದ ಜನತೆಗೆ ಬಿಜ್ಜಳ ಮಹಾರಾಜರ ಬೊಕ್ಕಸ ತುಂಬಿಸಲು ಚಿಂತಿಸಿ, ಮಹಾರಾಜರ ಜನರ ತಲೆ ತುಂಬಿಸಿ ನೀವೂ ಹಾಳಾಗಬೇಡಿ ! ನೀವು ಮೊದಲು ಹೊರಡಿ. ಇನ್ನೆಂದು ನನ್ನ ಬಳಿ ಅವರಿವರ ಸುದ್ದಿ ತಂದು ನನ್ನ ಸಮಯ ವ್ಯರ್‍ಥ ಮಾಡಬೇಡಿ’ ಎಂದು ಅಣ್ಣ ಬಸವಣ್ಣನವರು ಖಾರವಾಗಿ ಪ್ರತಿಕ್ರಿಯಿಸಿದರು.

‘ನಾವು ನಿಮಗೆ ಉಪಕಾರ ಮಾಡಲು ಬಂದಿದ್ದೆವು. ನೀವು ನಮ್ಮನ್ನು ಅವಮಾನಿಸಿ ಕಳಿಸಿದ್ದು ಸರಿಯಿಲ್ಲ. ಇದರ ಪ್ರತಿಫಲ ಉಂಡೇ ಉಣ್ಣುವಿರಿ…’ ಎಂದು ಬಂದಿದ್ದವರು ಕೂಗಾಡಿದರು.

ಅಣ್ಣ ಬಸವಣ್ಣನವರು ಬಂದಿದ್ದವರನ್ನು ಮೌನ ವ್ರತದಿ ಸಾಗ ಹಾಕಿದರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...