Home / ಕವನ / ಕವಿತೆ / ಆ ಪುಟ್ಟ ಹುಡುಗಿ

ಆ ಪುಟ್ಟ ಹುಡುಗಿ

ಸೂರ್‍ಯ ಹುಟ್ಟುವ ಮುನ್ನ
ಆ ಪುಟ್ಟ ಹುಡುಗಿಯ
ಬರಿಗಾಲಿನ ನಡೆಗೆ ಆರಂಭ
ಹರಡಿದ್ದ ತಲೆಗೂದಲು
ಬಾಚಿಕೊಳ್ಳುವ ಗೊಡವೆಯಿಲ್ಲ
ತಡವಾದರೆ ಚಿಂದಿ, ಪ್ಲಾಸ್ಟಿಕ್
ಬೇರೆಯವರು ಆಯ್ದುಕೊಂಡಾರು
ಕಣ್ಣುಜ್ಜಿಕೊಳ್ಳುತ್ತಲೇ ಎದ್ದು
ಕೊಳಕು ಚೀಲವೊಂದು ಹೆಗಲಿಗೇರಿಸಿ
ಹೊರಟಳು ಆ ಪುಟ್ಟ ಹುಡುಗಿ
ಯುದ್ಧಕ್ಕೆ ಸಿದ್ಧವಾದ ಯೋಧಳಂತೆ
ನಡೆದಳು ತಿಪ್ಪೆ ತಿಪ್ಪೆ ಸುತ್ತಿದಳು
ಹೊಟ್ಟೆ ಪಾಡಿನ ಯುದ್ಧವನು
ಒಂಟಿಯಾಗಿ ಎದುರಿಸಿದಳು
ಅಕ್ಷರ ಕಲಿವ ಹೊತ್ತು
ಬಾಳ ನೊಗವೇರಿಸಿ ನಿಂತ
ಆ ಚಿಂದಿ ಆಯುವ ಹುಡುಗಿಗೆ
ಶಾಲೆ ಕನಸಿನ ಮಾತು
ನೀರಾ, ನೀರೆಯರಲಿ
ಮುಳುಗೇಳುವ ಅವಳಪ್ಪ
ಸಂಸಾರದ ನೊಗಕ್ಕೆ
ಕತ್ತನೆಂದೂ ನೀಡಿದವನಲ್ಲ
ಅಮ್ಮನಿಗೆ ಆಸರೆ ಆ ಹುಡುಗಿ
ಬಿಟ್ಟು ಹೊರಟಿದ್ದಾಳೆ ಹಿಂದೆ
ಬರಿಗಾಲಿನ ಹೆಜ್ಜೆ ಗುರುತುಗಳ
ಅಂತ್ಯ ಗೊತ್ತಿಲ್ಲ ಭವಿಷತ್ತು!
ಭವಣೆ ತಪ್ಪಲಿಲ್ಲ ಎಂದಿಗೂ
ತಿಪ್ಪೆಯಲಿ ಹುಟ್ಟಿದ ಅವಳ ಕನಸುಗಳು
ತಿಪ್ಪೆಯಲ್ಲಿ ಬಿಕ್ಕುತ್ತಿದ್ದವು.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...