Home / ಕಥೆ / ಕಿರು ಕಥೆ / ಅಜ್ಜಿ-ಮೊಮ್ಮಗ

ಅಜ್ಜಿ-ಮೊಮ್ಮಗ

ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? “ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು” ಅಂತ. “ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ ಬೇಡ” ಅಂತು. ಆದ್ರೂ ಕೇಳದಿದ್ದೆ ಅಜ್ಜವಿಕೈಲ್ ಮೂರ್ ರೊಟ್ಟಿ ಸುಡ್ಸಕಂಡಿ ಹೋದ., ಹೋಗ ಸುಮಾರ್ ರಾತ್ರೆಯಾಗೆಬಿಟ್ತು. ರಾತ್ರಿ ಯೇನ್ ಮಾಡೋಕೆ ಬತ್ತದೆ?

ಗೌಡ-ಗೌಡತಿ ಮಾಳ ಕಾಯ್ತ ಇದ್ರು. ಮೂರ ರಾಗಿರೊಟ್ಟಿ ತಂದ್ಕಂಡು, “ನಂಗೆ ಹೆಚ್ಚು…” “ನಂಗೆ ಹೆಚ್ಚು…” ಅಂದಿ ಜಗಳ ಮಾಡ್ತ ಕೂತಿದ್ರು. ಇವನ ರೊಟ್ಟಿ ದಾರೀಲಿ ಕರ್ಚಾಗ ಬಿಡ್ತದೆ. ಇವ ಹೋದ.

“ನಮಗೆ ಯೆರಡೆರಡ್ ಬೇಡ. ಅವನಿಗೆ ವಂದ ಕೊಟ್ಕಂಡಿ ತಿಂಬನಿ” ಅಂತ. ಹಿಂಡ್ತಿ ಬೇಡ ಅಂತದೆ, ಆದ್ರೂ ಕೊಟ್ಕಂಡ್ ತಿಂದ.

ಬೆಳಗಾಗ, “ಯೆಲ್ಲ್ ಹೋಗ್ವವ? ಯೆಲ್ಲಿದ್ ಬಂದವ?” ಕೇಳತ್ರು. “ತಾ ಕಾಶಿಗೆ ಹೋಗ ಬತ್ತೆ. ಅಜ್ಜವಿ ಮೊಮ್ಮಗ”, “ತಾ ವಂದ್ ಸುದ್ದಿ ಕೇಳ್ಗೆ. ಕೆಳಕ್ಕಂಬಾ ಕಾಶೀಲಿ. ತಾ ಮಾಳಕಾಯ್ತೆ,. ಮಾಳದಾಗ ಹಂದಿ ರಾಶಿ ಬತ್ತದೆ. ಬರ್ವದ ಕಮ್ಮಿಯಾಗೂದೋ ಕೇಳ್ಳ ಬಾ” ಅಂತ. ಮುಂದೆ ಹೋದ ಕೂಡ್ಲೆಯ ಅವಗೆ ವಂದ ನರಿ ಶಿಕ್ತದೆ. “ಯಲ್ಲ್ ಹೋಗ್ವವ?” ಕೇಳ್ತದೆ. “ತಾನು ಕಾಶಿಗೆ ಹೋತೆ” ಅಂತ. “ನಂಗ್ ಹೋದ್ ಹೋದಲ್ಲಿ ಮಾಂಸ ಶಿಕ್ಕೂದೋ ಶಿಕ್ಕೂದಿಲ್ವೊ? ಕೇಳು” ಅಂತದೆ. “ಆಗೂದು” ಅಂತ.

ಮುಂದೆ ಹೋತಾ ಇರಬೇಕಾರೆ, ವಂದ ಮಾಯಿನ ಮರದ ಅಡಿ ಕೂತ್ಕಂತ. ಮಾಯಿನ ಹಣ್ಣು ಪುಟಿ ಪುಟಿ ಪುಟಿ ಬೀಳ್ತದೆ. ಇವಗೆ ಯೇನ ಹಸವಾಗಿ ಮರದ ಅಡಿ ಕುಳ್ಳುತನ ವಂದೇ ಹಣ್ ಹೆಕ್ಕಂಡಿ ತಿಂಬೂಕೆ ಹೋದ- ಹುಳವಾಗ ಹೋತದೆ.

ಹಸ್ವಾಗಿ ಮಾತೆಲ್ಲ. ಅಂದಿ ಚಿಂತಿ ಮೇನೆ ಅಲ್ಲೆ ಕೂತ್ ಬಿಡ್ತ. ತೀಡ್ತ ಕುಂತ ಕೂಡ್ಲೆ ಪಾರ್ವತಿ-ಪರಮೇಶ್ವರ ವನವಾಸ್ಕ ಹೋಗ್ ಬರವರು. ಗಂಡನ ಕೈಲಿ, “ಯಾರು ತೀಡ್ವರು. ನೋಡ್ ಬರವ” ಅಂತು. “ನರಮನಸರ ಈ ಕಾಡಲ್ ಯೆಲ್ಲವ್ರೆ?” ಕೇಳ್ತ. ಆದ್ರೂ ಕೇಳ್ಗದೆ ಕರಕ ಬತ್ತದೆ. ಮಾಯಿನ ಮರದ ಅಡಿಗೆ ಬತ್ತರೆ, “ಯೇನ್ ತಾನ? ಯಲ್ಲ್ ಹೋಗ್ವವ?” ಕೇಳತ್ರು. ಕೇಳೂತನವ, “ಅಜ್ಜವಿ ಮೊಮ್ಮಗ್ನಾಗಿತ್ತು. ದಿನಾ ಬೇಡ್ಕಂಬಂದ ತಿಂಬವ್ನಾಗಿತ್ತು. `ಕಾಶೀಗೆ ಹೋತೆ` ಅಂದ ಹೇಳ್ ಮೂರ್ ರೊಟ್ಟಿ ಸುಡ್ಸಕಂಡ ಬಂದೆ ತಾನು. ಆಸ್ರ ಬಾಯಿಗೆ ಆಸ್ರಿಲ್ಲ. ಉಂಬೂಕಿ ಕೂತನೆ. ಆಯಾರಿಲ್ಹೆ ಬಿದ್ದನೆ.”

“ಕಾಶಿಗೆ ನೆಡ್ದ ಹೋಕ್ಕೆ ಸಾದ್ದಿಲ್ಲ… ಹಿಂದೆ ಹೋಕ್ಕೆ ಸಾದ್ದಿಲ್ಲ. ನನ್ ಜೀವ ಇಲ್ಲೇ ಹಾನಿ” ಅಂದ ಹೇಳ್ಳ ತೀಡ್ತ. ಮೂರ ಹಳ್ ಮಂತ್ರಸ ಕೊಟ್ರು. “ನೀನು ತಿರಗಿ ಕಾಶಿಗೆ ಹೋಬೇಡ. ಮನಿಗೂ ಹೋಬೇಂಡ. ಬೆಳಿಗ್ಗೆ ಯೆದ್ದವ, `ಹನ್ನಯ್ಡು ಅಂಕಣ ಮನ್ಯಾಲಿ ಕನ್ನಡಿ ಕಡಕಟ್ಟಾಲಿ, ಈಳ್ಯಾಲಿ ಬಾಳ್ಯಾಲಿ` ಅಂದ್ ಹೇಳಿ ಮಂತ್ರಸ ಹೊಡಿ” ಅಂದ್ ಹೇಳಿ ಹೇಳತ್ರು.

ಆವಾಗ್ ಅವ ಹಾಗೆ ಹೇಳಿ ಹೊಡಿತ. ಊರೊರ್ಗೆಲ್ಲ ದಂಗ್ಲ ಸಾರ್ತ. “ಬೇಡ್ ಬೇಡ್ ಬೇಡ್ ಕಾಶಿಗ ಹೋಗುಕೆ ಬಂದನೆ. ಮುಂದೆ ಹೋಗುಕೆ ಅಂಥ್ ಪುಣ್ಯ ಸಿಕ್ಲೆಲ್ಲ. ಮನಿಕಟ್ ಮನೆವಳಗೆ ಗ್ರಾಪ್ರವೇಸ ಮಾಡ್ತೆ” ಅಂದಿ ದಂಗ್ಲ ಸಾರ್ದ. ಸಾರಿ, ಅಲ್ಲಿ ಜನ ಕೂಡತ್ರು ಆವಗೆ.

ಅವ ಯೇನ ಹೇಳ್? “ಕಾಶಿಗೆ ಹೋಗ್ಗೆ ಹೇಳಿ ಅಜ್ಜವಿ ಕಲಿ ಮೂರ್ ರೊಟ್ಟಿ ಸುಡ್ಸಕಂಡ ಬಂದಿದೆ. ರೊಟ್ಯೆಲ್ಲಾ ತೀರ್ತು.” ಗೌಡ-ಗೌಡತಿ ರೊಟ್ಟಿ ಕೊಟ ಇಟ್ಕಂಡ್ರು.

“ಕೊಯ್ಡ್ ಕುತ್ರಿ ಹಾಕುತನ, ಇದೆ ನಮನಿ ಹಂದ್ ಬತ್ತದ್ಯೋ” ಕೇಳಿರು. ಮುಂದೆ ಕಾಶಿಗೆ ಹೋಕ್ ಮುಂದ್ ಬಂದೆ, ಬರುತನ ಮಾಯ್ನ್ ಮರದ ಅಡಿ ಕೂತೆ,. ನಂಗೆ ಊಟಯೆಲೆ ಆಯಾರ ಯೆಲ್ಡೆ ಕುಂತ್ಕಂಡ್ ತೀಡ್ತಾ ಇರಬೇಕಾರೆ ಪಾರ್ವತಿ-ಪರಮೇಶ್ವರ ಬಂದ. ಮೂರ ಹಳ್ ಮಂತ್ರಸ ಕೊಟ್ಟ. `ಕಾಶಿಗೆ ಹೋಗೋದೆ ಬೇಡ, ಮನಿಗೆ ಹೋಗೂದು ಬೇಡ. ಹನ್ನೆಯ್ಡ್ ಅಂಕಣದ ಮನ್ಯಾಲಿ ಹೇಳಿ ಕಲ್ ಹಳ್ ಹೊಡಿ` ಅಂದ್ರು. `ಸಣ್ಣಕ್ಕಿ ದೊಡ್ದಕ್ಕಿ ಯೆಲ್ಲಾ ಆಲಿ. ಊರೂರ್ಯೆಲ್ಲಾ ಕರ್ದ್ ಬಡ್ಸ್ಟಟ್ಟು ಜಾತಿ ಅಡ್ಲಿ ಆಗ್ಲಿ` ಅಂದಿ ಬೇಡಕಂಡಿದ್ದೆ. ಊರೂರ್ಗೆ ಯೆಲ್ಲಾ ಊಟ ಹಾಕ್ಷೆ ಅಂದಿ” ಅಂತ ಊಟ ಹಾಕ್ತ. ಗೌಡ-ಗೌಡತಿ ಇಟ್ಕಂಡಿ ಉಳಿತ. `ಹೋಗಿರ್ ಕೇಳಿತಿದ್ದೆ ತಾನು`. ಯೆಲ್ಲದಿರೆ ಯೆಂತ ಕೇಳೆ? ಅಜ್ಜವಿನು ತನ್ ತಾವ ಕರ್ಸಕಂಡ. ಸುಖ ಸಂತೋಸದಾಗ್ ವಳ್ಣ.
*****
ಕೆಲವು ಪದಗಳ ವಿವರಣೆ

ಅಡ್ಗಿ = ಅಡಿಗೆ ಬಡ್ಸ್ಟಟ್ಟು = ಬಡಿಸುವಷ್ಟು

ಹೇಳಿದವರು : ಪಾರ್ವತಿ ಶಿವು ನಾಯ್ಕ, ಬಾಡ, ಕುಮಟಾ ತಾಲೂಕು
ದಿನಾಂಕ: ೪-೫-೭೨

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯಲ್ಲಿ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...