Home / ಕಥೆ / ಕಿರು ಕಥೆ / ಬೇಸರವಿಲ್ಲದ ಲಿಪಿ

ಬೇಸರವಿಲ್ಲದ ಲಿಪಿ

ಒಬ್ಬ ಸನ್ಯಾಸಿ ಸಮುದ್ರ ದಂಡೆಯ ಗುಡ್ಡ ಕಲ್ಲ ಮೇಲೆ ಕುಳಿತು ಧ್ಯಾನ ತಪದಲ್ಲಿ ತೊಡಗಿದ್ದ. ಒಂದು ಶಿಷ್ಯರ ಗುಂಪು ಗುರುವನ್ನು ಹುಡುಕಿಕೊಂಡು ಬರುವಾಗ ಈ ಸನ್ಯಾಸಿಯನ್ನು ನೋಡಿ ಆಕರ್ಷಿತರಾಗಿ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದರು.

“ನಮಗೆ ಜ್ಞಾನೋದಯವಾಗಬೇಕಾಗಿದೆ ನಾವು ಏನು ಮಾಡಬೇಕು?” ಎಂದು ಕೇಳಿದರು.

“ನೀವು ಎರಡು ಗುಂಪುಗಳಾಗಿ, ಒಂದು ಗುಂಪು ಈ ದಡದಲ್ಲಿ, ಇನ್ನೊಂದು ಗುಂಪು ಸಮುದ್ರದಾಚೆಯ ದಡದಲ್ಲಿ ಇರಿ. ನೀವು ಮಾಡಬೇಕಾದದು ಇಷ್ಟೆ, ಸಮುದ್ರ ಬೇಸರವಿಲ್ಲದೆ ನೊರೆಯಿಂದ ಸತ್ಯದ ಲಿಪಿ ಬರೆಯುತ್ತಲೇ ಇರುತ್ತದೆ. ಸೂರ್ಯನ ಕಿರಣದಲ್ಲಿ ಒಣಗಿಹೋಗುವ ಮುನ್ನ ಅದನ್ನು ಓದಿಕೊಂಡು ಆಚೆಯ ದಡದ ನಿಮ್ಮ ಸ್ನೇಹಿತರಿಗೆ ಹೇಳಿ, ಇದು ನಿರಂತರ ಸಾಗುತ್ತಿರಲಿ.

ಆಚೆಯ ದಡದ ನಿಮ್ಮ ಸ್ನೇಹಿತರು ಮಾಡಬೇಕಾದುದು ಇಷ್ಟೆ. ಸಮುದ್ರ, ಮರಳು ದಂಡೆಯ ಮೇಲೆ ಅಲೆಯ ನೊರೆ ಹಾಕುವುದರೊಳಗೆ ಮರಳನ್ನು ಎಣಿಸಿ ಅದರ ಮೊತ್ತದ ಗಣಿತವನ್ನು ನಿಮಗೆ ಸಮುದ್ರ ದಾಟಿ ಬಂದು ಹೇಳಲಿ, ನಿಮಗೆ ಈರ್ವರಿಗೂ ಜ್ಞಾನೋದಯವು ಶತಸಿದ್ಧ” ಎಂದ ಸನ್ಯಾಸಿ.

“ಜ್ಞಾನೋದಯ ಇಷ್ಟೇನೇನಾ?” ಎಂದರು ಶಿಷ್ಯರ ಗುಂಪು.

“ನಾವೇಕೆ ಸಮುದ್ರ ದಾಟಿ ಶ್ರಮಪಡಬೇಕು. ಬಂಡೆ ಮೇಲೆ ಅಲೆ ಬರೆದ ನೊರೆ ಲಿಪಿಯಲ್ಲಿ ಏನಿತ್ತು ಎಂಬುದನ್ನು ಅಲೆಯಿಂದ ಮರಳು ಒದ್ದೆಯಾಗುವ ಮುನ್ನ ಎಷ್ಟು ಮರಳಿನ ಹರಳಿತ್ತು ಎಂಬುದನ್ನು ಸೂರ್ಯನನ್ನ ಕೇಳಿದರೆ ನಮಗೆ ಜ್ಞಾನೋದಯವಾಗುವುದಿಲ್ಲವೇ?” ಎಂದರು ಶಿಷ್ಯಕೋಟಿ.

“ನಿಮ್ಮ ದಾರಿ ನಿಮಗಿರುವಾಗ, ನಿಮಗೇಕೆ ಗುರು ಮತ್ತು ಜ್ಞಾನೋದಯ”, ಎಂದರು ಗುಡ್ಡದ ಸನ್ಯಾಸಿ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್