Home / ಕಥೆ / ಕಿರು ಕಥೆ / ಬೇಸರವಿಲ್ಲದ ಲಿಪಿ

ಬೇಸರವಿಲ್ಲದ ಲಿಪಿ

ಒಬ್ಬ ಸನ್ಯಾಸಿ ಸಮುದ್ರ ದಂಡೆಯ ಗುಡ್ಡ ಕಲ್ಲ ಮೇಲೆ ಕುಳಿತು ಧ್ಯಾನ ತಪದಲ್ಲಿ ತೊಡಗಿದ್ದ. ಒಂದು ಶಿಷ್ಯರ ಗುಂಪು ಗುರುವನ್ನು ಹುಡುಕಿಕೊಂಡು ಬರುವಾಗ ಈ ಸನ್ಯಾಸಿಯನ್ನು ನೋಡಿ ಆಕರ್ಷಿತರಾಗಿ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದರು.

“ನಮಗೆ ಜ್ಞಾನೋದಯವಾಗಬೇಕಾಗಿದೆ ನಾವು ಏನು ಮಾಡಬೇಕು?” ಎಂದು ಕೇಳಿದರು.

“ನೀವು ಎರಡು ಗುಂಪುಗಳಾಗಿ, ಒಂದು ಗುಂಪು ಈ ದಡದಲ್ಲಿ, ಇನ್ನೊಂದು ಗುಂಪು ಸಮುದ್ರದಾಚೆಯ ದಡದಲ್ಲಿ ಇರಿ. ನೀವು ಮಾಡಬೇಕಾದದು ಇಷ್ಟೆ, ಸಮುದ್ರ ಬೇಸರವಿಲ್ಲದೆ ನೊರೆಯಿಂದ ಸತ್ಯದ ಲಿಪಿ ಬರೆಯುತ್ತಲೇ ಇರುತ್ತದೆ. ಸೂರ್ಯನ ಕಿರಣದಲ್ಲಿ ಒಣಗಿಹೋಗುವ ಮುನ್ನ ಅದನ್ನು ಓದಿಕೊಂಡು ಆಚೆಯ ದಡದ ನಿಮ್ಮ ಸ್ನೇಹಿತರಿಗೆ ಹೇಳಿ, ಇದು ನಿರಂತರ ಸಾಗುತ್ತಿರಲಿ.

ಆಚೆಯ ದಡದ ನಿಮ್ಮ ಸ್ನೇಹಿತರು ಮಾಡಬೇಕಾದುದು ಇಷ್ಟೆ. ಸಮುದ್ರ, ಮರಳು ದಂಡೆಯ ಮೇಲೆ ಅಲೆಯ ನೊರೆ ಹಾಕುವುದರೊಳಗೆ ಮರಳನ್ನು ಎಣಿಸಿ ಅದರ ಮೊತ್ತದ ಗಣಿತವನ್ನು ನಿಮಗೆ ಸಮುದ್ರ ದಾಟಿ ಬಂದು ಹೇಳಲಿ, ನಿಮಗೆ ಈರ್ವರಿಗೂ ಜ್ಞಾನೋದಯವು ಶತಸಿದ್ಧ” ಎಂದ ಸನ್ಯಾಸಿ.

“ಜ್ಞಾನೋದಯ ಇಷ್ಟೇನೇನಾ?” ಎಂದರು ಶಿಷ್ಯರ ಗುಂಪು.

“ನಾವೇಕೆ ಸಮುದ್ರ ದಾಟಿ ಶ್ರಮಪಡಬೇಕು. ಬಂಡೆ ಮೇಲೆ ಅಲೆ ಬರೆದ ನೊರೆ ಲಿಪಿಯಲ್ಲಿ ಏನಿತ್ತು ಎಂಬುದನ್ನು ಅಲೆಯಿಂದ ಮರಳು ಒದ್ದೆಯಾಗುವ ಮುನ್ನ ಎಷ್ಟು ಮರಳಿನ ಹರಳಿತ್ತು ಎಂಬುದನ್ನು ಸೂರ್ಯನನ್ನ ಕೇಳಿದರೆ ನಮಗೆ ಜ್ಞಾನೋದಯವಾಗುವುದಿಲ್ಲವೇ?” ಎಂದರು ಶಿಷ್ಯಕೋಟಿ.

“ನಿಮ್ಮ ದಾರಿ ನಿಮಗಿರುವಾಗ, ನಿಮಗೇಕೆ ಗುರು ಮತ್ತು ಜ್ಞಾನೋದಯ”, ಎಂದರು ಗುಡ್ಡದ ಸನ್ಯಾಸಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...